ರಾಯಚೂರು: ಕೋಟೆ ಬಳಿ ನಿರ್ಮಾಣವಾಗುತ್ತಿರುವ ದರ್ಗಾ ಕಮಾನ್​ ತೆರವಿಗೆ ಪುರಾತತ್ವ ಇಲಾಖೆ ಆದೇಶ

ದರ್ಗಾದ ಎದುರು ಪುರಾತನ ಕೋಟೆ ಜಾಗದಲ್ಲಿ ಕಮಾನ್ ನಿರ್ಮಾಣ ವಿವಾದ ಬೆನ್ನಲ್ಲೆ ರಾಯಚೂರಿನ ವಿವಾದಿತ ಸ್ಥಳಕ್ಕೆ ಕಲಬುರಗಿ ವಲಯದ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಬಳಿಕ ಕಮಾನ್ ತೆರವಿಗೆ ಆದೇಶ ಹೊರಡಿಸಲಾಗಿದೆ.

ರಾಯಚೂರು: ಕೋಟೆ ಬಳಿ ನಿರ್ಮಾಣವಾಗುತ್ತಿರುವ ದರ್ಗಾ ಕಮಾನ್​ ತೆರವಿಗೆ ಪುರಾತತ್ವ ಇಲಾಖೆ ಆದೇಶ
ದರ್ಗಾ ಕಮಾನ್​
Follow us
| Updated By: ಆಯೇಷಾ ಬಾನು

Updated on: Dec 05, 2023 | 9:47 AM

ರಾಯಚೂರು, ಡಿ.05: ರಾಯಚೂರು ನಗರದ ತೀನ್ ಕಂದೀಲ್ ಸರ್ಕಲ್ ಬಳಿ ಇರುವ ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾದ ಎದುರು ಕಮಾನ್ ನಿರ್ಮಿಸಲಾಗ್ತಿದೆ. ಈ ವಿಚಾರ ಧರ್ಮ ದಂಗಲ್​ಗೆ ಕಾರಣವಾಗಿತ್ತು. ಸದ್ಯ ಈಗ ಪುರಾತನ ಕೋಟೆ ಜಾಗದಲ್ಲಿನ ಕಮಾನ್ ತೆರವು ಮಾಡಲು ರಾಯಚೂರು (Raichur) ನಗರಸಭೆಗೆ ಪುರಾತತ್ವ ಇಲಾಖೆ ಆದೇಶ ಮಾಡಿದೆ. ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಆದರೂ ಕಾಮಗಾರಿ ಮಾಡಿರುವುದರಿಂದ ತೆರವಿಗೆ ಆದೇಶ ಹೊರಡಿಸಲಾಗಿದೆ.

ದರ್ಗಾದ ಎದುರು ಪುರಾತನ ಕೋಟೆ ಜಾಗದಲ್ಲಿ ಕಮಾನ್ ನಿರ್ಮಾಣ ವಿವಾದ ಬೆನ್ನಲ್ಲೆ ರಾಯಚೂರಿನ ವಿವಾದಿತ ಸ್ಥಳಕ್ಕೆ ಕಲಬುರಗಿ ವಲಯದ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಬಳಿಕ ಕಮಾನ್ ತೆರವಿಗೆ ಆದೇಶ ಹೊರಡಿಸಲಾಗಿದೆ. ನಿರ್ಮಾಣ ಹಂತದ ದರ್ಗಾದ ಕಮಾನ್ ರಾಜ್ಯ ಸಂರಕ್ಷಿತ ಕಟಿ ದರ್ವಾಜಾ ಸ್ಮಾರಕದ ಬಳಿ ಇದೆ. ಕಾಮಗಾರಿ ನಡೆದ ಸ್ಥಳವೂ ಕೋಟೆಯ ಸ್ಥಳವಾಗಿದೆ. ಸುರಕ್ಷಿತ ಸ್ಮಾರಕದ 100 ಮೀಟರ್ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತೆ. ನೂತನ ಕಮಾನ್ ಕಟ್ಟಡ ಕಾಮಗಾರಿ ಕಾನೂನು ಬಾಹಿರ ಮತ್ತು ನಿಷಿದ್ಧ. ಈ ಹಿನ್ನೆಲೆ ರಾಯಚೂರು ನಗರಸಭೆ ಕೂಡಲೇ ಕಮಾನ್ ಕಾಮಗಾರಿ ಸ್ಥಗಿತಗೊಳಿಸಬೇಕು. ಅನಧಿಕೃತ ಕಟ್ಟಡ ಕಾಮಗಾರಿ ತೆರವುಗೊಳಿಸುವಂತೆ ರಾಯಚೂರು ಪುರಾತತ್ವ ಇಲಾಖೆಯ ಕ್ಯೂರೇಟರ್​ಗೆ ಕಲಬುರ್ಗಿ ವಲಯದ ಪುರಾತತ್ವ ಇಲಾಖೆ ಪತ್ರ ಬರೆದು ತಿಳಿಸಿದೆ.

ಇನ್ನು ಇದೇ ದರ್ಗಾ ಕಮಾನ್ ಕಾಮಗಾರಿ ವಿರೋಧಿಸಿ ಬಿಜೆಪಿ ನಿಯೋಗ ಹೋರಾಟ ನಡೆಸಿ, ನಗರಸಭೆಗೆ ದೂರು ನೀಡಿತ್ತು. ಇತ್ತ ಬಿಜೆಪಿ ನಿಲುವು ಖಂಡಿಸಿ ಕಾಮಗಾರಿ ಸ್ಥಗಿತಗೊಳಿಸದಂತೆ ನಗರಸಭೆಗೆ ಮುಸ್ಲಿಂ ಸಮುದಾಯ ಮನವಿ ಮಾಡಿತ್ತು.

ಇದನ್ನೂ ಓದಿ: ದೇವಸ್ಥಾನದ ಕಾರ್ಯಕ್ಕೆ ತಮಟೆ ಬಾರಿಸಲು ನಿರಾಕರಿಸಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ, ಜಾತಿ ನಿಂದನೆ

ಘಟನೆ ಹಿನ್ನೆಲೆ

ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾದ ಎದುರು ಕಮಾನ್ ನಿರ್ಮಿಸಲಾಗ್ತಿದೆ. ಈ ವಿಚಾರ ಧರ್ಮ ದಂಗಲ್​ಗೆ ಕಾರಣವಾಗಿದೆ. ದರ್ಗಾದ ಕಮಾಲ್​ ನಿರ್ಮಿಸುತ್ತಿರೊ ಪ್ರದೇಶದ ಬಳಿ ಐತಿಹಾಸಿಕ ರಾಯಚೂರು ಕೋಟೆ ಇದೆ. ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ ಆಯಾ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಅಷ್ಟೇ ಅಲ್ಲದೇ 200 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತಿದೆ. ಹೀಗಾಗಿ ಈ ಕಮಾನ್ ನಿರ್ಮಿಸುತ್ತಿರೋದು ಕಾನೂನು ಬಾಹಿರ. ಕೂಡಲೇ ಕಮಾನ್ ಕಾಮಗಾರಿ ನಿಲ್ಲಿಸಬೇಕು ಅಂತ ಒತ್ತಾಯಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ