ಗೃಹಲಕ್ಷ್ಮೀ ಯೋಜನೆ ಪೋಸ್ಟರ್​ ವಿವಾದ; ಮುಸ್ಲಿಂ‌ ಯುವತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಮನಗರ ಬಿಜೆಪಿ ಸದಸ್ಯ

ಆಗಸ್ಟ್ ತಿಂಗಳಾಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಡುವೆ ಯೋಜನೆಯ ಪೋಸ್ಟರ್​​ನಲ್ಲಿರುವ ಮುಸ್ಲಿಂ ಮಹಿಳೆಯ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆಕೆ ಈ ದೇಶದ ಯುವತಿಯೇ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಅಲ್ಲದೆ, ಕೆಲವು ಪೋಸ್ಟರ್​ಗಳಲ್ಲಿ ಆಕೆಯ ಫೋಟೋ ಕಾಣಿಸದಿರುವುದು ಇವರ ಅನುಮಾನಕ್ಕೆ ಕಾರಣವಾಗಿದೆ.

ಗೃಹಲಕ್ಷ್ಮೀ ಯೋಜನೆ ಪೋಸ್ಟರ್​ ವಿವಾದ; ಮುಸ್ಲಿಂ‌ ಯುವತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಮನಗರ ಬಿಜೆಪಿ ಸದಸ್ಯ
ಗೃಹಲಕ್ಷ್ಮೀ ಯೋಜನೆಯ ಪೋಸ್ಟರ್​ ವಿವಾದ
Follow us
| Updated By: Rakesh Nayak Manchi

Updated on: Aug 13, 2023 | 7:25 PM

ರಾಮನಗರ, ಆಗಸ್ಟ್ 13: ಆಗಸ್ಟ್ ತಿಂಗಳಾಂತ್ಯಕ್ಕೆ ಜಾರಿಯಾಗಲಿರುವ ಗೃಹಲಕ್ಷ್ಮೀ ಯೋಜನೆಯ ಪೋಸ್ಟರ್ (Gruha Lakshmi Scheme Poster) ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ. ಫೋಟೋದಲ್ಲಿ ವಯಸ್ಸಾದ ಹಿಂದೂ ಮಹಿಳೆಯರ ಜಾತಿವಾರು ಫೋಟೋಗಳನ್ನು ಹಾಕಿದರೆ, ಕೆಲವು ಕಡೆಗಳಲ್ಲಿ ಮುಸ್ಲಿಂ ಯುವತಿಯ ಫೋಟೋ ಹಾಕಿದ್ದಾರೆ. ಈ ಮುಸ್ಲಿಂ ಯುವತಿ ನಿಜವಾಗಲೂ ಕರ್ನಾಟಕದವರಾ ಅಥವಾ ವಿದೇಶದವರಾ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಆಕೆಯ ಫೋಟೋ ಹಾಕಬೇಕೇ ಎಂಬ ಚರ್ಚೆ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ರಾಮನಗರ ಬಿಜೆಪಿ ಸದಸ್ಯ ರಾಮಾಂಜನೇಯ, ಹೆಣ್ಣು ಮಕ್ಕಳು ಎಲ್ಲರೂ ಒಂದೆ. ಕೆಲವು ಕಡೆಗಳಲ್ಲಿ ಹಾಕಿರುವ ಪೋಸ್ಟರ್​ಗಲ್ಲಿ ಮೂರು ಫೋಟೋ, ಕೆಲವು ತಾಲೂಕಿನಲ್ಲಿ ನಾಲ್ಕು ಮಹಿಳೆಯರ ಫೋಟೋ ಹಾಕುತ್ತಿದ್ದಾರೆ. ಈ ರೀತಿಯ ಹೊಲಸು ರಾಜಕಾರಣ ಮಾಡಬಾರದು ಎಂದರು.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ

ಯೋಜನೆಯ ಫಲಾನುಭವಿ ಮನೆಯ ಹಿರಿಯ ಯಜಮಾನಿಯಾಗಿದ್ದಾಳೆ. ಆದರೆ ಈ ಪೋಸ್ಟರ್​ನಲ್ಲಿರುವ ಮುಸ್ಲಿಂ ಯುವತಿಯಾಗಿದ್ದಾರೆ. ಅಲ್ಲದೆ, ಬುರ್ಖಾ ತೊಟ್ಟಿರುವ ಆಕೆ ಕರ್ನಾಟಕದವರಾ ಎಂದು ಕಂಡುಹಿಡಿಯುವುದು ಹೇಗೆ? ಮುಸ್ಲಿಂ ಯುವತಿಯನ್ನು ನಿಲ್ಲಿಸಿ ಫೋಟೋಶೂಟ್ ಮಾಡಿದ ರೀತಿ ಕಾಣಿಸುತ್ತಿಲ್ಲ. ಜೊತೆಗೆ, ಹಿಂದೂ ಹಿರಿಯರ ಜೊತೆ ಅಂದದ ಮುಸ್ಲಿಂ ಯುವತಿಯ ಫೋಟೋ ಹಾಕುವ ಯಾವ ಸಂದೇಶ ರವಾನಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಜಾತ್ಯತೀತ ಅಂತ ಹೇಳುವವರು ಹಿಜಾಬ್ ಧರಿಸಿದ ಯುವತಿಯ ಫೋಟೋ ಯಾಕೆ ಬಳಕೆ ಮಾಡುತ್ತಿದ್ದೀರಿ ಅಂತ ಪ್ರಶ್ನಿಸಿದ ರಾಮಾಂಜನೇಯ, ಕೆಲವು ಕಡೆ ಮುಸ್ಲಿಂ ಯುವತಿ ಫೋಟೋ ಇದೆ, ಇನ್ನೂ ಕೆಲವು ಕಡೆ ಇಲ್ಲ. ಹೀಗಾಗಿ ಮುಸ್ಲಿಂ‌ ಯುವತಿ ಕರ್ನಾಟಕದವರೋ ಅಥವಾ ಅಲ್ಲವೋ ಎಂಬ ಅನುಮಾನ ಇದೆ. ಕೂಡಲೇ ಪೋಸ್ಟರ್‌ ರದ್ದು ಪಡಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ