ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲೊಂದು ಈಸೂರು ಗ್ರಾಮವಿದೆ. ಶಿವಮೊಗ್ಗ ಜಿಲ್ಲೆಯ ಈಸೂರು ಅಂದ್ರೆ ಎಲ್ಲರ ಬಾಯಿಯಲ್ಲೂ ಬರುವುದು ಒಂದೇ ಶಬ್ದ ದಂಗೆ ಅಂತಾ. ಸ್ವಾತಂತ್ರ್ಯ ಹೋರಾಟದಲ್ಲಿ ಈ ಇಡೀ ಗ್ರಾಮವೇ ಪಾಲ್ಗೊಂಡಿದ್ದು ವಿಶೇಷ. ಇಂದಿಗೂ ಈ ಗ್ರಾಮವನ್ನು ವೀರಪುತ್ರರ ನಾಡು ಎಂದೇ ಕರೆಯಲಾಗುತ್ತೆ. ಭಾರತದ ಭೂಪಟದಲ್ಲಿ ಈ ಪುಟ್ಟ ಗ್ರಾಮಕ್ಕೆ ವಿಶೇಷ ಸ್ಥಾನವಿದೆ. 1942ರ ಮೊದಲು ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಏನಾದ್ರು ಮಾಡಿ ದೇಶದಿಂದ ಬ್ರಿಟಿಷರನ್ನು ಹೊಡೆದೊಡಿಸಬೇಕೆನ್ನುವ ಛಲವೂ ಈ ಗ್ರಾಮದ ಹೋರಾಟಗಾರಲ್ಲಿತ್ತು. ಇಂದಿಗೂ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಎಲ್ಲ ಇತಿಹಾಸಗಳು ಜೀವಂತವಾಗಿದೆ. ಅದು ಭಾರತದಿಂದ ಬ್ರಿಟಿಷರನ್ನು ತೊಲಗಿಸಬೇಕೆಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಅದೆಷ್ಟೋ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆದ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಕುಮುದಿನಿ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮ ಈಸೂರು. 1942ರಲ್ಲಿ ನಡೆದ ಈಸೂರು ಹೋರಾಟದ ಚಳುವಳಿಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ನೂರಾರು ಸ್ವಾತಂತ್ರ್ಯ ಹೋರಾಟಗಾರರು ಗ್ರಾಮದಲ್ಲಿ ತಮ್ಮ ಜೀವನ ಮುಡುಪಾಗಿ ಇಡುವ ಮೂಲಕ ಜನರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹೊತ್ತಿಸಿದರು. ಈಸೂರು ದಂಗೆ ಮೂಲಕ ಬ್ರಿಟಿಷರ ಹುಟ್ಟು ಅಡುಗಿಸಿದರು. ಇಂತಹ ವೀರ ಯೋಧರ ಗ್ರಾಮದ ಸ್ವಾತಂತ್ರ್ಯ ಹೋರಾಟದ ಕೆಲ ಅಚ್ಚರಿ ಸಂಗತಿಗಳನ್ನು ಇಂದಿಗೂ ಹೋರಾಟಗಾರರು ನೆನಪಿಸುವ ಮೂಲಕ ಗದ್ಗರಿತರಾಗುತ್ತಾರೆ. ದೇವಸ್ಥಾನದ ಗಂಟೆ ಬಾರಿಸುವ ಮೂಲಕ...