AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥರ್ಮಲ್ ಸ್ಕ್ಯಾನರ್​ಗಳನ್ನ ನಂಬಿಕೊಂಡರೆ ಜನರದ್ದು ಅಧೋಗತಿ!

[lazy-load-videos-and-sticky-control id=”FzsW3uHigVs”] ಬೆಂಗಳೂರು: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಥರ್ಮಲ್ ಸ್ಕ್ಯಾನರ್ ವಿಫಲವಾಗಿದೆ. ಮನುಷ್ಯನ ದೇಹದ ತಾಪಮಾನ ಕಂಡುಹಿಡಿಯಲು ಹಾಗೂ ಅದರಿಂದ‌ ಸೋಂಕಿತರನ್ನ ಕಂಡುಹಿಡಿಯಲು ಥರ್ಮಲ್‌ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಅದನ್ನು ನಂಬಿದ್ರೆ ಅದೋ ಗತಿ ಎಂಬಂತಾಗಿದೆ. ಅಂಗಡಿಗಳು, ಕಚೇರಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವೆಡೆ ಥರ್ಮಲ್ ಸ್ಕ್ಯಾನರ್ ಬಳಸಲಾಗುತ್ತಿದೆ. ಸೋಂಕಿತರನ್ನು ಇದರಿಂದ ಕಂಡುಹಿಡಿಯಬಹುದು ಎಂಬ ಧೈರ್ಯವಿತ್ತು. ಆದರೆ ಥರ್ಮಲ್ ಸ್ಕ್ಯಾನರ್​ನಿಂದ ಒಬ್ಬ ಸೋಂಕಿತನನ್ನು ಹಿಡಿಯೋಕ್ಕೆ ಆಗ್ತಿಲ್ಲ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶೇ. 50 ರಷ್ಟು ಸೋಂಕಿತರಿಗೆ […]

ಥರ್ಮಲ್ ಸ್ಕ್ಯಾನರ್​ಗಳನ್ನ ನಂಬಿಕೊಂಡರೆ ಜನರದ್ದು ಅಧೋಗತಿ!
ಆಯೇಷಾ ಬಾನು
| Edited By: |

Updated on:Jul 28, 2020 | 12:05 PM

Share

[lazy-load-videos-and-sticky-control id=”FzsW3uHigVs”]

ಬೆಂಗಳೂರು: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಥರ್ಮಲ್ ಸ್ಕ್ಯಾನರ್ ವಿಫಲವಾಗಿದೆ. ಮನುಷ್ಯನ ದೇಹದ ತಾಪಮಾನ ಕಂಡುಹಿಡಿಯಲು ಹಾಗೂ ಅದರಿಂದ‌ ಸೋಂಕಿತರನ್ನ ಕಂಡುಹಿಡಿಯಲು ಥರ್ಮಲ್‌ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಅದನ್ನು ನಂಬಿದ್ರೆ ಅದೋ ಗತಿ ಎಂಬಂತಾಗಿದೆ.

ಅಂಗಡಿಗಳು, ಕಚೇರಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವೆಡೆ ಥರ್ಮಲ್ ಸ್ಕ್ಯಾನರ್ ಬಳಸಲಾಗುತ್ತಿದೆ. ಸೋಂಕಿತರನ್ನು ಇದರಿಂದ ಕಂಡುಹಿಡಿಯಬಹುದು ಎಂಬ ಧೈರ್ಯವಿತ್ತು. ಆದರೆ ಥರ್ಮಲ್ ಸ್ಕ್ಯಾನರ್​ನಿಂದ ಒಬ್ಬ ಸೋಂಕಿತನನ್ನು ಹಿಡಿಯೋಕ್ಕೆ ಆಗ್ತಿಲ್ಲ.

ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶೇ. 50 ರಷ್ಟು ಸೋಂಕಿತರಿಗೆ ಗುಣಲಕ್ಷಣಗಳಿಲ್ಲ. ಅವರಿಗೆ ಯಾವುದೇ ಜ್ವರ,‌ ಕೆಮ್ಮು,‌ ನೆಗಡಿ ಲಕ್ಷಣವಿಲ್ಲ. ಸಾಮಾನ್ಯರಂತೆ ಓಡಾಡುತ್ತಿರುವ ಗುಣಲಕ್ಷಣಗಳಿಲ್ಲದ ಸೋಂಕಿತರು ಹತ್ತು ಸಲ ಥರ್ಮಲ್ ಸ್ಕ್ಯಾನರ್ ಎದುರು ಸ್ಕ್ಯಾನ್ ಮಾಡಿಸಿಕೊಂಡ್ರು ನಾರ್ಮಲ್ ಎಂದು ತೋರಿಸುತ್ತಿದೆ. ಆದರೆ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಕೊರೊನಾ ದೃಢವಾಗುತ್ತಿದೆ.

ಆ್ಯಂಟಿಜನ್ ಟೆಸ್ಟ್​ನಲ್ಲಿ ಥರ್ಮಲ್ ಸ್ಕ್ಯಾನರ್ ಬಳಕೆ: ಆ್ಯಂಟಿಜನ್ ಟೆಸ್ಟ್​ಗೂ ಮುನ್ನ ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್ ವೇಳೆ ನಾರ್ಮಲ್, ಆ್ಯಂಟಿಜನ್ ಟೆಸ್ಟ್​ನಲ್ಲಿ ಪಾಸಿಟಿವ್ ಬರ್ತಿದೆ. ಥರ್ಮಲ್ ಸ್ಕ್ಯಾನರ್ ನಂಬಿದವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.

ಥರ್ಮಲ್ ಸ್ಕ್ಯಾನರ್ ತೀವ್ರ ಜ್ವರ ಇದ್ದವರನ್ನ ಮಾತ್ರ ಕಂಡುಹಿಡಿಯುತ್ತದೆ. ಅಸಿಂಪ್ಟಮ್ಯಾಟಿಕ್ ಸೋಂಕಿತರಿಗೂ ನಾರ್ಮಲ್ ಟೆಂಪ್ರೆಕ್ಚರ್ ತೋರಿಸುತ್ತೆ. ಹೀಗಾಗಿ ಈಗ ನಮ್ಮನ್ನ ನಾವು ಕಾಪಾಡಿಕೊಳ್ಳಲು ನಮಗೆ ಉಳಿದಿರುವುದು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಮಾತ್ರ.

Published On - 8:23 am, Tue, 28 July 20

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ