AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ರಜೆ, ವಿಮಾನಯಾನಕ್ಕಿಂತ ಖಾಸಗಿ ಎಸಿ ಬಸ್​ ಪ್ರಯಾಣ ಬಲು ದುಬಾರಿ

ನಾಳೆಯಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ದುಪ್ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಖಾಸಗಿ ಎಸಿ ಬಸ್​ಗಳಲ್ಲಿನ ಪ್ರಯಾಣ ವಿಮಾಯಯಾನಕ್ಕಿಂತಲೂ ದುಬಾರಿಯಾಗಿದೆ. ಅದಾಗ್ಯೂ, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್​ಗಳು ಬಹುತೇಕ ಭರ್ತಿಯಾಗಿವೆ.

ಸಾಲು ಸಾಲು ರಜೆ, ವಿಮಾನಯಾನಕ್ಕಿಂತ ಖಾಸಗಿ ಎಸಿ ಬಸ್​ ಪ್ರಯಾಣ ಬಲು ದುಬಾರಿ
ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಹೋಗುವ ಖಾಸಗಿ ಬಸ್​ಗಳ ಟಿಕೆಟ್ ದರದಲ್ಲಿ ಭಾರೀ ಹೆಚ್ಚಳ (ಸಾಂದರ್ಭಿಕ ಚಿತ್ರ)
ಕಿರಣ್​ ಸೂರ್ಯ
| Edited By: Rakesh Nayak Manchi|

Updated on: Jan 25, 2024 | 11:15 AM

Share

ಬೆಂಗಳೂರು, ಜ.25: ನಾಳೆಯಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ದುಪ್ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಅದಾಗ್ಯೂ, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್​ಗಳು ಬಹುತೇಕ ಭರ್ತಿಯಾಗಿವೆ.

ಜನವರಿ ತಿಂಗಳಿನಲ್ಲಿ ಎರಡನೇ ಬಾರಿಗೆ ಬ್ಯಾಕ್ ಟು ಬ್ಯಾಕ್ ರಜೆ ಸಿಗುತ್ತಿದೆ. ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಜನರು ತಯಾರಾಗಿದ್ದಾರೆ. ಸಾಲು ಸಾಲು ರಜೆ ಹಿನ್ನೆಲೆ ಮೂರು ದಿನ ಪ್ರವಾಸ ಮಾಡಲು ಹಲವರ ಪ್ಲಾನ್‌ ಮಾಡಿಕೊಂಡಿದ್ದಾರೆ. ರಜೆ ಅಂತ ಊರಿನ ಕಡೆ ಹೊರಟವರಿಗೆ ಖಾಸಗಿ ಬಸ್​ ಮಾಲೀಕರು ಮತ್ತೆ ಶಾಕ್ ಕೊಟ್ಟಿದ್ದಾರೆ.

ನಾಳೆ ಗಣರಾಜೋತ್ಸ, ನಾಡಿದ್ದು ನಾಲ್ಕನೇ ಶನಿವಾರ, 28ನೇ ತಾರೀಕು ಭಾನುವಾರ. ಹೀಗಾಗಿ ಎರಡರಿಂದ ಮೂರು ಪಟ್ಟು ಟಿಕೆಟ್ ದರವನ್ನು ಏರಿಸುವ ಮೂಲಕ ಖಾಸಗಿ ಬಸ್ ಮಾಲೀಕರು ಹೆಚ್ಚಿನ ಹಣ ಗಳಿಸಲು ಮುಂದಾಗಿದ್ದಾರೆ. ಟಿಕೆಟ್ ಬುಕ್ಕಿಂಗ್ ವೆಬ್​ಸೈಟ್​ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ. ಖಾಸಗಿ ಬಸ್​ಗಳು ಇಂತಹ ಸುಲಿಗೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

ಇದನ್ನೂ ಓದಿ: ಆರೋಗ್ಯ ಸರಿ ಇಲ್ಲವೆಂದು ಆಫೀಸ್​ಗೆ ರಜೆ ಹಾಕಿ, ಒಂದೇ ವಿಮಾನದಲ್ಲಿ ಬಾಸ್​ ಮತ್ತು ಉದ್ಯೋಗಿ ಮುಖಾಮುಖಿಯಾದಾಗ

ಸಂಕ್ರಾತಿ ರಜೆ ಸಂದರ್ಭದಲ್ಲಿಯೂ ಖಾಸಗಿ ಬಸ್ ಮಾಲೀಕರು ಸುಲಿಗೆ ಮಾಡಿದ್ದರು. ಇದೀಗ ರಿಪಬ್ಲಿಕ್ ಡೇ ಬ್ಯಾಕ್ ಟು ಬ್ಯಾಕ್ ರಜೆಗೆ 20 ದಿನದ ಹಿಂದೆ ಟೆಕೆಟ್ ಹೆಚ್ಚಳ ಮಾಡಲಾಗಿತ್ತು. ಮನಸಿಗೆ ಬಂದಂತೆ ದರ ಏರಿಕೆ‌ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸಾರಿಗೆ ಇಲಾಖೆಯೂ ನಿರ್ಲಕ್ಷ್ಯವಹಿಸುತ್ತಿದೆ.

ದುಬಾರಿಯಾದ ಖಾಸಗಿ ಬಸ್ ಟಿಕೆಟ್ ದರ

ಬೆಂಗಳೂರು-ಶಿವಮೊಗ್ಗ

  • ಸಾಮಾನ್ಯ ದಿನದ ದರ: ₹450-₹600
  • ಇಂದಿನ ಟಿಕೆಟ್ ದರ: ₹1250- ₹1600

ಬೆಂಗಳೂರು- ಹುಬ್ಬಳಿ

  • ಸಾಮಾನ್ಯ ದಿನದ ದರ: ₹600- ₹1000
  • ಇಂದಿನ ಟಿಕೆಟ್: ₹1700-₹2500

ಬೆಂಗಳೂರು-ಮಂಗಳೂರು

  • ಸಾಮಾನ್ಯ ದಿನದ ದರ: ₹500-₹1000
  • ಇಂದಿನ ದರ: ₹1550-₹2000

ಬೆಂಗಳೂರು-ಕಲಬುರುಗಿ

  • ಸಾಮಾನ್ಯ ದಿನದ ದರ:ಳ ₹900-₹1500
  • ಇಂದಿನ ದರ: ₹1900-₹2300

ಬೆಂಗಳೂರು-ಮಡಿಕೇರಿ

  • ಸಾಮಾನ್ಯ ದಿನದ ದರ: ₹500-₹600
  • ಇಂದಿನ ದರ: ₹950-₹1600

ಬೆಂಗಳೂರು – ಉಡುಪಿ

  • ಸಾಮಾನ್ಯ ದಿನದ ದರ: ₹600-₹950
  • ಇಂದಿನ ದರ: ₹1700-₹2200

ಬೆಂಗಳೂರು-ಧಾರವಾಡ

  • ಸಾಮಾನ್ಯ ದಿನದ ದರ: ₹650-₹800
  • ಇಂದಿನ ದರ: ₹1400-₹1850

ಬೆಂಗಳೂರು-ಬೆಳಗಾವಿ

  • ಸಾಮಾನ್ಯ ದಿನದ ದರ: ₹500-₹800
  • ಇಂದಿನ ದರ: ₹1300-₹1800

ಬೆಂಗಳೂರು – ದಾವಣಗೆರೆ

  • ಸಾಮಾನ್ಯ ದಿನದ ದರ: ₹450 -₹600
  • ಇಂದಿನ ದರ: ₹900-₹1300

ಬೆಂಗಳೂರು – ಚಿಕ್ಕಮಗಳೂರು

  • ಸಾಮಾನ್ಯ ದಿನದ ದರ: ₹550 -₹600
  • ಇಂದಿನ ದರ: ₹1100-₹1300

ಬೆಂಗಳೂರು – ಬೀದರ್

  • ಸಾಮಾನ್ಯ ದಿನದ ದರ: ₹850-₹1200
  • ಇಂದಿನ ದರ: ₹1600-₹2000

ಬೆಂಗಳೂರು – ರಾಯಚೂರು

  • ಸಾಮಾನ್ಯ ದಿನದ ದರ: ₹600 -₹900
  • ಇಂದಿನ ದರ: ₹1250-₹1600

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ
ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ