Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಟಿವಿ9 ಕನ್ನಡ ಎಜುಕೆಶನ್ ಸಮಿಟ್; ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿಹಾಡಿ

Opportunity for students to explore career possibilities and courses: ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2024 ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ನಡೆಯುತ್ತಿದೆ. ಏಪ್ರಿಲ್ 12ರಿಂದ 14 ಬೆಂಗಳೂರಿನಲ್ಲಿ, ಏಪ್ರಿಲ್ 27ರಿಂದ 28 ಕಲಬುರ್ಗಿ, ಇನ್ನು ಮೇ 4 ಮತ್ತು 5ರಂದು ಹುಬ್ಬಳ್ಳಿಯಲ್ಲಿ ಶಿಕ್ಷಣ ಸಮಾವೇಶ ಇರುತ್ತದೆ. ಪ್ರತಿಷ್ಠಿತ ಕಾಲೇಜು, ಡೀಮ್ಡ್ ಯೂನಿವರ್ಸಿಟಿ, ಶಿಕ್ಷಣ ಸಂಸ್ಥೆಗಳು ಈ ಶೃಂಗಸಭೆಗೆ ಬರಲಿವೆ. ಉನ್ನತ ಶಿಕ್ಷಣ ಓದಬಯಸುವ ವಿದ್ಯಾರ್ಥಿಗಳಿಗೆ ಈ ಸಮಿಟ್​ನಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿ ಸಿಗುತ್ತದೆ.

ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಟಿವಿ9 ಕನ್ನಡ ಎಜುಕೆಶನ್ ಸಮಿಟ್; ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿಹಾಡಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 10, 2024 | 2:00 PM

ಬೆಂಗಳೂರು, ಏಪ್ರಿಲ್ 2: ಟಿವಿ9 ಕನ್ನಡ ವಾಹಿನಿ ವತಿಯಿಂದ ಶಿಕ್ಷಣ ಶಂಗಸಭೆ (TV9 Kannada Education Summit) ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದಾರಿ ಕಂಡುಕೊಳ್ಳಲು ಸಹಾಯವಾಗಿ ಮೂರು ದಿನಗಳ ಎಜುಕೇಶನ್ ಸಮಿಟ್ ಅನ್ನು ಟಿವಿ9 ಕನ್ನಡ ಆಯೋಜಿಸಿದೆ. ವಿವಿಧ ಲಭ್ಯ ಕೋರ್ಸ್​ಗಳು, ಉತ್ತಮ ಕಾಲೇಜುಗಳು, ಯೂನಿವರ್ಸಿಟಿಗಳು (deemed universities), ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಈ ಸಮಿಟ್​ನಲ್ಲಿ ಪಡೆಯಬಹುದು. ಹೊಸ ವೃತ್ತಿ ಅವಕಾಶಗಳ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಪಡೆಯಬಹುದು. ಪ್ರತಿಷ್ಠಿತ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಬಳಿ ಬರಲು ಟಿವಿ9 ಕನ್ನಡ ಒಂದು ಉತ್ತಮ ವೇದಿಕೆ ಮಾಡಿದೆ. ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಶೃಂಗಸಭೆ ಬಹಳ ಪ್ರಯೋಜನಕಾರಿ ಎನಿಸುತ್ತದೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಈ ಎಜುಕೇಶನ್ ಸಮಿಟ್ ನಡೆಯಲಿದೆ. ಬೆಂಗಳೂರಿನಲ್ಲಿ ಏಪ್ರಿಲ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಮೂರು ಸ್ಥಳಗಳಲ್ಲಿ ಯಾವ್ಯಾವ ದಿನಗಳಲ್ಲಿ ಶೃಂಗಸಭೆ ನಡೆಯುತ್ತದೆ ಎನ್ನುವ ವಿವರ ಕೊನೆಯಲ್ಲಿ ಇದೆ.

ಟಿವಿ9 ಕನ್ನಡ ಎಜುಕೇಶನ್ ಎಕ್ಸ್​ಪೋದ ಮುಖ್ಯಾಂಶಗಳು

ಎಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್, ಫೈನಾನ್ಸ್, ಮ್ಯಾನೇಜ್ಮೆಂಟ್ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಲಭ್ಯ ಇರುವ ಕೋರ್ಸ್​ಗಳ ಬಗ್ಗೆ ಎಕ್ಸ್​ಪೋದಲ್ಲಿ ಮಾಹಿತಿ ಪಡೆಯಬಹುದು.

ಪ್ರತಿಷ್ಠಿತ ಮತ್ತು ಅಗ್ರಮಾನ್ಯ ಡೀಮ್ಡ್ ಯೂನಿವರ್ಸಿಟಿಗಳು ಮತ್ತು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ, ಕೋರ್ಸ್, ಅಡ್ಮಿಶನ್ ಪ್ರಕ್ರಿಯೆ ಇತ್ಯಾದಿ ಮಾಹಿತಿ ಪಡೆಯಲು ಸುವರ್ಣಾವಕಾಶ ಸಿಗುತ್ತದೆ.

ವಿವಿಧ ವೃತ್ತಿ ಸಾಧ್ಯತೆಗಳು, ಅದಕ್ಕೆ ಸಂಬಂಧಿಸಿದ ಕೋರ್ಸ್​ಗಳನ್ನು ಅವಲೋಕಿಸಬಹುದು. ಸಿಇಟಿ, ಜೆಇಇ, ನೀಟ್, ಕಾಮೆಡ್​ಕೆ ಬಗ್ಗೆ ಮಾರ್ಗದರ್ಶನ ಪಡೆಯಬಹುದು.

ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಭರ್ಜರಿ ಉಡುಗೊರೆ ಸಿಗುವ ಅವಕಾಶ ತಪ್ಪಿಸಿಕೊಳ್ಳದಿರಿ…

ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2024: ಸ್ಥಳ ಮತ್ತು ದಿನಾಂಕ

2024ರ ಏಪ್ರಿಲ್ 12ರಿಂದ 14

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು


2024ರ ಏಪ್ರಿಲ್ 27ರಿಂದ 28

ಸ್ಥಳ: ಡಾ. ಬಸವರ ಅಪ್ಪ ಸ್ಮಾರಕ ಭವನ, ಅಪ್ಪ ಕೆರೆ ಎದುರು, ಕಲಬುರ್ಗಿ


2024ರ ಮೇ 4ರಿಂದ 5

ಸ್ಥಳ: ಶ್ರೀನಿವಾಸ ಗಾರ್ಡನ್, ಕುಸುಗಲ್ ರಸ್ತೆ, ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Tue, 2 April 24

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ