Breaking News Today Live: ವಾಟ್ಸಾಪ್ ಗ್ಲೋಬಲ್ ಹೆಡ್ ಆಗಿ ಕನ್ನಡಿಗರ ನೆಚ್ಚಿನ ‘ಕ್ರೆಡ್’ ಕುನಾಲ್ ಶಾ ನೇಮಕ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
Karnataka News Today Live Updates: ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕುನಾಲ್ ಶಾ ನೇಮಕ, 'ವೆಲ್ಕಮ್ ಟು ದಿ ಜಂಗಲ್' ಚಿತ್ರಕ್ಕೆ ಸೆನ್ಸಾರ್ ಶಾಕ್ ಹಾಗೂ ಕನ್ನಡಪರ ಸಂಘಟನೆಗಳ ರೈಲ್ವೆ ಪ್ರತಿಭಟನೆ ವಾಪಸ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳನ್ನು ಓದಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

LIVE NEWS & UPDATES
-
ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಮದ್ದು: 133 ಮಳಿಗೆಗಳಿಗೆ ನೋಟಿಸ್!
ರಾಜ್ಯದ ಜನೌಷಧಿ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ ಬ್ರಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿರುವುದನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಕೇವಲ ಎರಡು ದಿನಗಳಲ್ಲಿ ರಾಜ್ಯಾದ್ಯಂತ 172 ಔಷಧ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 133 ಜನೌಷಧ ಕೇಂದ್ರಗಳಿಗೆ ಇಲಾಖೆಯು ಶೋಕಾಸ್ ನೋಟಿಸ್ (SCN) ಜಾರಿಗೊಳಿಸಿ ವರದಿ ಸಲ್ಲಿಸಿದೆ.
-
ತುಮಕೂರಿನಲ್ಲಿ ಇಂದಿರಾ ಕ್ಯಾಂಟಿನ್ ಬಂದ್!
ತುಮಕೂರು ನಗರದ 6 ಇಂದಿರಾ ಕ್ಯಾಂಟಿನ್ಗಳು ಕಳೆದ 8 ದಿನಗಳಿಂದ ಏಕಾಏಕಿ ಬಂದ್ ಆಗಿದ್ದು, ಬಡವರ ಹಸಿವು ನೀಗಿಸುತ್ತಿದ್ದ ಊಟ ಸರಬರಾಜು ಸ್ಥಗಿತಗೊಂಡಿದೆ. ಮುಂಬೈ ಮೂಲದ ಗುತ್ತಿಗೆದಾರ ಕಂಪನಿ ‘ಚೆಫ್ಟಕ್ ಕಾರ್ಟ್ ಅಂಡ್ ಹಾಸ್ಪಿಟಾಲಿಟಿ’ ಜಿಲ್ಲಾಡಳಿತದಿಂದ ಬರಬೇಕಾದ ಬಿಲ್ ಬಾಕಿ ಹಾಗೂ ಕಾರ್ಮಿಕರ ಒಂದು ವರ್ಷದ ಸಂಬಳ ನೀಡದ ಕಾರಣಕ್ಕೆ ಸೇವೆ ನಿಲ್ಲಿಸಿದೆ ಎನ್ನಲಾಗಿದೆ.
-
-
ಸಂಪುಟ ಪುನಾರಚನೆ: ದೆಹಲಿಯಲ್ಲಿ ರಾಜ್ಯ ನಾಯಕರ ಲಾಬಿ
ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತು ಚುರುಕುಗೊಂಡಿದ್ದು, ಹಿರಿಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ಹೆಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಸಂತೋಷ್ ಲಾಡ್ ಹಾಗೂ ಯಶವಂತ ರಾಯಗೌಡ ಪಾಟೀಲ್ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೂ ಸಮಯ ಕೋರಲಾಗಿದೆ. ಆದರೆ, ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ಸಂಪುಟ ಕಸರತ್ತು ಕೊಂಚ ವಿಳಂಬವಾಗುವ ಸಾಧ್ಯತೆಯಿದೆ.
-
ಡಿ.ಕೆ.ಶಿವಕುಮಾರ್ಗಾಗಿ ಚಂಡಿಕಾ ಮಹಾಯಾಗ
ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ನೀಡಲು ಮತ್ತು ಸಿದ್ದರಾಮಯ್ಯ ಅವರ ಆರೋಗ್ಯಕ್ಕಾಗಿ ಮೈಸೂರಿನಲ್ಲಿ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಬೃಹತ್ ಚಂಡಿಕಾ ಮಹಾಯಾಗ ಹಾಗೂ ದುರ್ಗಾ ಸಪ್ತಶತಿ ಪಾರಾಯಣ ನಡೆಯಿತು. ನಂಜರಾಜ ಬಹದ್ದೂರು ಕಲ್ಯಾಣ ಮಂಟಪದಲ್ಲಿ ನಡೆದ ಈ ವಿಶೇಷ ಪೂಜೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದು, ಬರಗಾಲ ನಿವಾರಣೆ ಹಾಗೂ ಲೋಕಕಲ್ಯಾಣಕ್ಕಾಗಿಯೂ ಪ್ರಾರ್ಥಿಸಲಾಯಿತು.
ಭಾರತೀಯ ತಂತ್ರಜ್ಞಾನ ಲೋಕಕ್ಕೆ ಹೆಮ್ಮೆಯ ಸುದ್ದಿ ಸಿಕ್ಕಿದ್ದು,’ಕ್ರೆಡ್’ ಸಂಸ್ಥಾಪಕ ಕುನಾಲ್ ಶಾ ಈಗ ಜಾಗತಿಕ ಮೆಟಾ ಒಡೆತನದ ‘ವಾಟ್ಸಾಪ್’ನ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇತ್ತ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಬಿಕಿನಿ ದೃಶ್ಯ ಸೇರಿದಂತೆ 18 ಕಟ್ಗಳನ್ನು ಸೂಚಿಸಿ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಇನ್ನು ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೂ, ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ದಿಢೀರ್ ಕೈಬಿಟ್ಟಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - Jun 23,2026 8:35 AM




