AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮಾತೆಯ ಮೂರ್ತಿ ರಚಿಸಿ, ದೇಶಪ್ರೇಮ ಮೆರೆದ ಸೃಜನಾತ್ಮಕ ಕಲಾವಿದ!

ಉಡುಪಿ: ದೇಶಾದ್ಯಂತ ಆವರಿಸಿದ ಮಹಾಮಾರಿ ಕೊರೊನಾ ಲೌಕ್​ಡೌನ್​ನಿಂದಾಗಿ ಜನರು ಮನೆಯೊಳಗೆ ಸೇರಿದರು. ಆದ್ರೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಿ.ಕೆ.ಗಣೇಶ್ ರೈ ಎಂಬವರು ತಮ್ಮ ಕೈಚಳಕದಿಂದ ಭಾರತ ಮಾತೆಯ ಮೂರ್ತಿ ರಚಿಸಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಬಂದು ನೆಲೆಸಿದ್ದಾರೆ. ಒಬ್ಬ ಕಲಾವಿದನಾಗಿ ತನ್ನ ತಾಯ್ನಾಡಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನೆಲೆಸಿದ್ದಾರೆ. ಉಡುಪಿ ಜಿಲ್ಲೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ ಕ್ಷೇತ್ರವಾಗಿದೆ. ಮಹಾಮಾರಿ ಕೊರೊನಾದಿಂದಾಗಿ ಜನರು […]

ಭಾರತ ಮಾತೆಯ ಮೂರ್ತಿ ರಚಿಸಿ, ದೇಶಪ್ರೇಮ ಮೆರೆದ ಸೃಜನಾತ್ಮಕ ಕಲಾವಿದ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 29, 2020 | 2:14 PM

Share

ಉಡುಪಿ: ದೇಶಾದ್ಯಂತ ಆವರಿಸಿದ ಮಹಾಮಾರಿ ಕೊರೊನಾ ಲೌಕ್​ಡೌನ್​ನಿಂದಾಗಿ ಜನರು ಮನೆಯೊಳಗೆ ಸೇರಿದರು. ಆದ್ರೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಿ.ಕೆ.ಗಣೇಶ್ ರೈ ಎಂಬವರು ತಮ್ಮ ಕೈಚಳಕದಿಂದ ಭಾರತ ಮಾತೆಯ ಮೂರ್ತಿ ರಚಿಸಿದ್ದಾರೆ.

ಕೊಲ್ಲಿ ರಾಷ್ಟ್ರದಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಬಂದು ನೆಲೆಸಿದ್ದಾರೆ. ಒಬ್ಬ ಕಲಾವಿದನಾಗಿ ತನ್ನ ತಾಯ್ನಾಡಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನೆಲೆಸಿದ್ದಾರೆ. ಉಡುಪಿ ಜಿಲ್ಲೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ ಕ್ಷೇತ್ರವಾಗಿದೆ. ಮಹಾಮಾರಿ ಕೊರೊನಾದಿಂದಾಗಿ ಜನರು ಮನೆ ಒಳಗೆ ಸೇರುವಂತಾಗಿದೆ.

ಈ ಸಂದರ್ಭದಲ್ಲಿ ಬಿ.ಕೆ.ಗಣೇಶ್ ರೈ ಭಾರತಮಾತೆಯ ಕಲಾತ್ಮಕ ಮೂರ್ತಿ ರಚಿಸಿದ್ದಾರೆ. ಸುಮಾರು 9ಅಡಿ ಎತ್ತರದ ಪೇಪರ್ ಪಲ್ಪ್ ಮೋಲ್ಡಿಂಗ್​ನಲ್ಲಿ ಭಾರತ ಮಾತೆಯ ವಿಗ್ರಹವನ್ನು ಸ್ಥಳೀಯ ಶುಭ ಸಮಾರಂಭಗಳಿಗೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಪಯೋಗಿಸಿಕೊಳ್ಳಬಹುದು.

ಲಾಕ್​ಡೌನ್ ಸಮಯದಲ್ಲಿ ಭಾರತ ಮಾತೆಯ ವಿಗ್ರಹ ತಯಾರಿಸಿ ದೇಶಪ್ರೇಮವನ್ನು ಮೆರೆದಿದ್ದಾರೆ. ಬಿ.ಕೆ.ಗಣೇಶ್ ರೈ ಬಾಲ್ಯದಿಂದಲೂ ದೇಶಪ್ರೇಮಿ. ಕೊರೊನಾ ಸಂದರ್ಭದಲ್ಲಿ ಭಾರತಮಾತೆಯ ಮೂರ್ತಿ ರಚಿಸಿ ತಮ್ಮ ಸಮಯವನ್ನು ಕಳೆದಿದ್ದಾರೆ. ಕಲಾವಿದನಾಗಿ ತನ್ನಲ್ಲಿರುವ ಕಲೆಯನ್ನು ಈ ರೀತಿ ಹೊರ ಹಾಕಿದ್ದಾರೆ. ಈ ಮೂರ್ತಿ ಸ್ಥಳೀಯರಿಗೆ ಆಕರ್ಷಣೆ ಆಗಿದೆ.

Published On - 2:05 pm, Fri, 29 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು