AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿಷೇಧಿತ ಮೋನೊ ಕ್ರೋಟೋಫಸ್‌ ಬಳಕೆ? ಚಿಕ್ಕಮಗಳೂರಿನಲ್ಲಿ ಏನೇನಾಗಿತ್ತು?

ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಸರಕಾರದಿಂದ ನಿಷೇಧಕ್ಕೆ ಒಳಗಾಗಿರುವ ಕೀಟನಾಶಕ ಇದಾಗಿದೆ. ಲಾಡ್ಜಿನಲ್ಲಿ ಕಸದತೊಟ್ಟಿಯಲ್ಲಿ ಪತ್ತೆಯಾಗಿದ್ದ ವಿಷದ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.

ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿಷೇಧಿತ ಮೋನೊ ಕ್ರೋಟೋಫಸ್‌ ಬಳಕೆ? ಚಿಕ್ಕಮಗಳೂರಿನಲ್ಲಿ ಏನೇನಾಗಿತ್ತು?
ಸಂತೋಷ್ ಪಾಟೀಲ್ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on:Apr 16, 2022 | 12:33 PM

Share

ಉಡುಪಿ: ನಗರದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿಷೇಧಿತ ಮೋನೋಕ್ರೋಟೋಫಸ್‌ ಸೇವಿಸಿದ್ದರಾ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಸಂತೋಷ್ ಚಿಕ್ಕಮಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷವಾಗಿದ್ದು ಅದನ್ನೇ ಸೇವಿಸಿರುವ ಬಗ್ಗೆ ಬಲ್ಲಮೂಲಗಳಿಂದ ತಿಳಿದುಬಂದಿದೆ. ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಸರಕಾರದಿಂದ ನಿಷೇಧಕ್ಕೆ ಒಳಗಾಗಿರುವ ಕೀಟನಾಶಕ ಇದಾಗಿದೆ. ಲಾಡ್ಜಿನಲ್ಲಿ ಕಸದತೊಟ್ಟಿಯಲ್ಲಿ ಪತ್ತೆಯಾಗಿದ್ದ ವಿಷದ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ 23 ಮಕ್ಕಳ ಸಾವಿಗೆ ಇದೇ ವಿಷ ಕಾರಣವಾಗಿತ್ತು ಎಂದು ತಿಳಿದುಬಂದಿದೆ. ಕೇವಲ ಈ ವಿಷದ ಖಾಲಿ ಬಾಟಲಿಯಲ್ಲಿ ಹಾಕಲಾಗಿದ್ದ ಎಣ್ಣೆಯನ್ನು ಬಳಸಿದ ಕಾರಣದಿಂದ 23ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಅತ್ಯಂತ ಅಪಾಯಕಾರಿ ಆಗಿರುವ ಮೋನೋಕ್ರೋಟೋಫಾಸ್ ವಿಷ ಇದಾಗಿದೆ ಎಂದು ಮಾಧ್ಯಮಗಳಿಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.

ಚಿಕ್ಕಮಗಳೂರಿನಲ್ಲಿ ಮೂರು ದಿನ ಏನೇನಾಗಿತ್ತು?

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಫಿನಾಡಿನ ಹೋಂ ಸ್ಟೇನಲ್ಲಿ ಪೊಲೀಸರು ವಿವಿಧ ಮಾಹಿತಿ ಕಲೆ ಹಾಕಿದ್ದಾರೆ. ನವೀನ್ ಎಂಬುವರ​​ ಹೆಸರಲ್ಲಿ​ ಹೋಂ ಸ್ಟೇ ಬುಕ್​ ಮಾಡಲಾಗಿತ್ತು. 8/04/2022 ದಿನಾಂಕದಂದು ರಾತ್ರಿ ಹೋಂ ಸ್ಟೇಗೆ ಚೆಕ್​ಇನ್​ ಮಾಡಲಾಗಿತ್ತು. 9/04/2022 ಬೆಳಿಗ್ಗೆ ಮುಳ್ಳಯ್ಯಗಿರಿಗೆ ಸ್ನೇಹಿತರೊಂದಿಗೆ ಟ್ರಿಪ್​ ಹೋಗಿದ್ದರು. 9/04/2022 ರಾತ್ರಿ ಹೋಂ ಸ್ಟೇನಲ್ಲಿಯೇ ಉಳಿದಿದ್ದರು. 10/04/2022 ಬೆಳಿಗ್ಗೆ ಚೆಕ್​ಔಟ್ ಮಾಡಿಕೊಂಡು ಸಿಟಿಗೆ ಬಂದಿದ್ದರು. ಮತ್ತೆ ಅದೇ ದಿನ ರಾತ್ರಿ ಅದೇ ಹೋಂ ಸ್ಟೇ ಹೋಗಿ ಚೆಕ್​ಇನ್​ ಮಾಡಿದ್ದರು. 11/04/2022 ಚೆಕ್​ಔಟ್ ಮಾಡಿಕೊಂಡು ಉಡುಪಿ ಕಡೆಗೆ ತೆರಳಿದ್ದರು. ನಾಲ್ಕು ದಿನಗಳ ಕಾಲ ಹೋಂ ಸ್ಟೇ ನಲ್ಲಿ ಸಂತೋಷ ಸ್ನೇಹಿತರು ತಂಗಿದ್ದರು ಎಂದು ತಿಳಿದುಬಂದಿದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಚಿಕ್ಕಮಗಳೂರಿನ ಹೋಂ ಸ್ಟೇ ನಲ್ಲಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಮೂರು ದಿನ ವಾಸ್ತವ್ಯ ಹೂಡಿದ್ದ ಹೋಂ ಸ್ಟೇನಲ್ಲಿ ತನಿಖೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೈಮರ ಬಳಿಯ ಹೋಂ ಸ್ಟೇನಲ್ಲಿದ್ದ ಸಿಸಿಟಿವಿ ಡಿವಿಆರ್ ಸೇರಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 8ರ ರಾತ್ರಿ ಹೋಂಸ್ಟೇಗೆ ಆಗಮಿಸಿದ್ದ ಮೂವರು, ಏ.11ರ ಬೆಳಗ್ಗೆ ತೆರಳಿದ್ದರು. ಚಿಕ್ಕಮಗಳೂರಿನಿಂದ ಉಡುಪಿಗೆ ತೆರಳಿದ್ದ ಸಂತೋಷ್ ಪಾಟೀಲ್ ಅವರ ಮೂರು ದಿನಗಳ ಸಂಪೂರ್ಣ ಚಲನವಲನಗಳ ಮಾಹಿತಿ ಸಂಗ್ರಹ ಮಾಡಲಾಗಿದೆ.

ಉಡುಪಿ ಎಸ್​ಪಿ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಸಭೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಎಸ್​ಪಿ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಸಭೆ ನಡೆಸಿದ್ದಾರೆ. ಉಡುಪಿ ಎಸ್​ಪಿ ಕಚೇರಿಯಲ್ಲಿ ಪ್ರಕರಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಎಸ್​ಪಿ ವಿಷ್ಣುವರ್ಧನ್, ತನಿಖಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.

ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ

ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಜತೆಗಿನ ಮೃತ ಸಂತೋಷ್ ಪಾಟೀಲ್ ಫೋಟೋಗಳು ವೈರಲ್

Published On - 12:03 pm, Sat, 16 April 22