- Kannada News Karnataka Uttara kannada Karwar gets new attraction of tunnel to the city passing through Rabindranath Tagore Beach
ಕಾರವಾರಕ್ಕೆ ಬಂತು ಹೊಸ ಆಕರ್ಷಣೆ! ಪ್ರವಾಸಿಗರು ಸುರಂಗದ ಮೂಲಕ ಸಂಚರಿಸಬಹುದು, ಮೇಲಿಂದ ಠಾಗೋರ್ ಕಡಲ ತೀರ ನೋಡಿ ಆನಂದಿಸಬಹುದು!
ಕರ್ನಾಟಕದ ಕಾಶ್ಮೀರ ಅಂದ್ರೆ ನೆನಪಾಗೋದು ಕಾರವಾರ. ಕಾರವಾರದ ರಬೀಂದ್ರನಾಥ್ ಠಾಗೋರ್ ಕಡಲತೀರ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನ ಆಕರ್ಷಿಸುತ್ತದೆ. ಇದೀಗ ಕಾರವಾರಕ್ಕೆ ಬರುವ ಪ್ರವಾಸಿಗರು ಸುರಂಗ ಮಾರ್ಗದಲ್ಲಿ ಹೋಗುವ ಅನುಭವವನ್ನ ಸಹ ಪಡೆಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಸುರಂಗಗಳನ್ನ ನಿರ್ಮಿಸಿದ್ದು ಸುರಂಗ ಮಾರ್ಗದ ಮೂಲಕ ಆಗಮಿಸಿ ಕಡಲ ತೀರವನ್ನ ನೋಡುವ ಸುಂದರ ದೃಶ್ಯ ಇದೀಗ ಪ್ರವಾಸಿಗರಿಗೆ ಲಭ್ಯವಾಗುತ್ತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
Updated on: Jun 10, 2023 | 10:07 AM

ಕರ್ನಾಟಕದ ಕಾಶ್ಮೀರ ಅಂದ್ರೆ ನೆನಪಾಗೋದು ಕಾರವಾರ. ಕಾರವಾರದ ರಬೀಂದ್ರನಾಥ್ ಠಾಗೋರ್ ಕಡಲತೀರ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನ ಆಕರ್ಷಿಸುತ್ತದೆ. ಇದೀಗ ಕಾರವಾರಕ್ಕೆ ಬರುವ ಪ್ರವಾಸಿಗರು ಸುರಂಗ ಮಾರ್ಗದಲ್ಲಿ ಹೋಗುವ ಅನುಭವವನ್ನ ಸಹ ಪಡೆಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಸುರಂಗಗಳನ್ನ ನಿರ್ಮಿಸಿದ್ದು ಸುರಂಗ ಮಾರ್ಗದ ಮೂಲಕ ಆಗಮಿಸಿ ಕಡಲ ತೀರವನ್ನ ನೋಡುವ ಸುಂದರ ದೃಶ್ಯ ಇದೀಗ ಪ್ರವಾಸಿಗರಿಗೆ ಲಭ್ಯವಾಗುತ್ತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು ಕಡಲ ನಗರಿ ಕಾರವಾರ ಪ್ರವಾಸಿಗರ ನೆಚ್ಚಿನ ತಾಣ. ಪ್ರತಿ ನಿತ್ಯ ದೇಶ ವಿದೇಶದಿಂದ ಸಾಕಷ್ಟು ಪ್ರವಾಸಿಗರು ಕಾರವಾರಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಾರೆ. ಇದೀಗ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಅನುಭವವನ್ನ ಪಡೆಯುವಂತೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವಾಗಿದ್ದು ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರದ ವರಗೆ ನಾಲ್ಕು ಸುರಂಗ ಮಾರ್ಗಗಳನ್ನ ಕೊರೆಯಲಾಗಿದೆ.

4 ಕಿಮೀ ಸಂಚರಿಸುವ ರಗಳೆ ತಪ್ಪಿರುವುದಕ್ಕೆ ಸ್ಥಳೀಯ ಯುವ ಹರ್ಷ ವ್ಯಕ್ತಪಡಿಸುತ್ತಿರುವುದು

ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ಮಾಡಿ ಕೊನೆಗೂ ಹೆದ್ದಾರಿಯಲ್ಲಿ ಸುರಂಗ ಮಾರ್ಗದ ಮೂಲಕ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಬಿಣಗಾದಿಂದ ಕಾರವಾರಕ್ಕೆ ಬರಬೇಕಾದರೆ ಸುಮಾರು 4 ಕಿಲೋ ಮೀಟರ್ ಸಂಚರಿಸಿ ಬರಬೇಕಾಗಿತ್ತು.

ಬೆಂಗಳೂರಿನಿಂದ ಬಂದಿರುವ ಯುವ ಪ್ರವಾಸಿಗ ತಮ್ಮ ಅನುಭವ ಹಂಚಿಕೊಂಡರು

ಆದರೆ ಸುರಂಗ ಮಾರ್ಗದ ನಿರ್ಮಾಣದಿಂದ ಕೇವಲ 1 ಕಿಲೋ ಮೀಟರ್ ಸಂಚರಿಸಿದರೆ ಕಾರವಾರ ನಗರ ಪ್ರವೇಶ ಮಾಡುವಂತಾಗಿದ್ದು ಎರಡು ಮಾರ್ಗದ ಸುರಂಗ ಮಾರ್ಗದಲ್ಲಿ ವಾಹನಗಳನ್ನ ಒಡಾಡಲು ಅವಕಾಶ ಮಾಡಿಕೊಟ್ಟಿದ್ದು ಜನರು ಈ ಬಗ್ಗೆ ಖುಷಿ ಪಡುವಂತಾಗಿದೆ.

ಇನ್ನು ರಾಜ್ಯದ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಸುರಂಗ ಮಾರ್ಗವನ್ನ ಹೆದ್ದಾರಿಯಲ್ಲಿ ನಿರ್ಮಿಸಲಾಗಿದೆ. ಕಾರವಾರದಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ವಿಶೇಷತೆ ಮೂಲಕ ಪ್ರವಾಸಿಗರನ್ನ ಸಹ ಆಕರ್ಷಿಸುವಂತೆ ಮಾಡಿದೆ.

ಸುರಂಗ ಮಾರ್ಗದ ಮೂಲಕ ವಾಹನದಲ್ಲಿ ಜನರು ಬಂದರೆ ಫ್ಲೈ ಓವರ್ ಸಿಗುತ್ತದೆ. ಫ್ಲೈ ಓವರ್ ನಲ್ಲಿ ರವೀಂದ್ರ ನಾಥ್ ಠಾಗೋರ್ ಕಡಲ ತೀರವನ್ನ ನೋಡಿಕೊಂಡು ಹೋಗುವ ಅವಕಾಶ ಸಿಕ್ಕಿದ್ದು ಇದೊಂದು ರೀತಿ ಪ್ರವಾಸಿಗರನ್ನ ಹೆಚ್ಚಾಗಿ ಆಕರ್ಷಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಕಳೆದ ಐದಾರು ತಿಂಗಳ ಹಿಂದೆಯೇ ಸಂಸದ ಅನಂತ್ ಕುಮಾರ್ ಹೆಗಡೆ ಒಂದು ಸುರಂಗ ಮಾರ್ಗವನ್ನ ಉದ್ಘಾಟಿಸಿದ್ದರು. ಒಂದೇ ಮಾರ್ಗದ ಮೂಲಕ ವಾಹನಗಳು ಒಡಾಡುತ್ತಿದ್ದು ಅಪಘಾತಕ್ಕೆ ಆಹ್ವಾನವನ್ನ ಮಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡುವ ಮೂಲಕ ಎರಡು ಸುರಂಗ ಮಾರ್ಗದಲ್ಲಿ ಓಡಾಡಲು ಸದ್ಯ ಅವಕಾಶ ಮಾಡಿಕೊಟ್ಟಿದ್ದು ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಜನರು ಇನ್ಮುಂದೆ ಸುರಂಗ ಮಾರ್ಗದಲ್ಲಿ ಸಂಚರಿಸುವ ಹೊಸ ಅನುಭವ ಪಡೆಯುವ ಮೂಲಕ ಎಂಜಾಯ್ ಮಾಡುವಂತಾಗಲಿ.









