ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ

| Updated By: ಆಯೇಷಾ ಬಾನು

Updated on: Jul 27, 2024 | 12:39 PM

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳಾದ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಅಕ್ರಮದ ಹಣವನ್ನು ಕಮಿಷನ್​ ಪಡೆದು ತಮ್ಮ ಸಂಬಂಧಿಕರು, ಪರಿಚಯಸ್ಥರಿಗೆ ವರ್ಗಾವಣೆ ಮಾಡಿದ್ದರು. ಸದ್ಯ ಈಗ ಎಸ್​ಐಟಿ ಹಣವನ್ನು ವಾಪಾಸ್ ನೀಡಲು ಸೂಚಿಸಿದೆ.

ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ
ವಾಲ್ಮೀಕಿ ನಿಗಮ ಹಗರಣ
Follow us on

ಬಳ್ಳಾರಿ, ಜುಲೈ.27: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ ಎದುರಾಗಿದೆ. ಹಣ ವರ್ಗಾವಣೆ ಮಾಡಿಸಿಕೊಂಡ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಎಸ್ಐಟಿ (SIT) ತಂಡ ಇವರ ವಿಚಾರಣೆ ನಡೆಸಿದ್ದು ಇವರ ಖಾತೆಗೆ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ಅವರಿಂದ ಬಂದ ಹಣವನ್ನು ವಾಪಾಸ್ ನೀಡುವಂತೆ ಸೂಚಿಸಿದೆ.

ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್‌ ಹಾಗೂ ವೆಂಕಟೇಶ್ವರ ರಾವ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಹಣವನ್ನು ತಮ್ಮ ಖಾತೆ ಮೂಲಕ ಸ್ನೇಹಿತರು, ಪರಿಚಯಸ್ಥರು ಸೇರಿದಂತೆ 77ಕ್ಕೂ ಹೆಚ್ಚು ಖಾತೆಗಳಿಗೆ 10, 20 ಲಕ್ಷದಂತೆ ಹಣವನ್ನು ವರ್ಗಾವಣೆ ಮಾಡಿದ್ದರು. 20% ಕಮಿಷನ್ ಪಡೆದು ಅಕ್ರಮ ಹಣವನ್ನು ವರ್ಗಾವಣೆ ಮಾಡಿದ್ದರು. ಸದ್ಯ ಈ ಬಗ್ಗೆ ತನಿಖೆ ನಡೆಸಿದ ಎಸ್​ಐಟಿ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ಯಾರ್ಯಾರ ಖಾತೆಗೆ ಹಣ ಹಾಕಿದ್ದರೋ ಅವರೆಲ್ಲ ಹಣ ವಾಪಾಸ್ ನೀಡುವಂತೆ ಸೂಚನೆ ನೀಡಿದೆ. ಇದರಿಂದ ನಂಬಿ ಹಣ ಕೊಟ್ಟ ಜನರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಐಷಾರಾಮಿ ಫ್ಲ್ಯಾಟ್‌ ಖರೀದಿ, 10 ಕೆಜಿ ಚಿನ್ನದ ಬಿಸ್ಕೆಟ್​ ಜಪ್ತಿ ಮಾಡಿದ ಎಸ್​ಐಟಿ

ನಿಮಗೂ ಪ್ರಕರಣಕ್ಕೂ ಸಂಬಂಧವಿಲ್ಲ, ಆದರೆ ನಿಮ್ಮ ಖಾತೆಗೆ ಹಣ ಬಂದಿದೆ. ನಿಮ್ಮ ಖಾತೆಗೆ ಬಂದಿರುವ ಹಣ ವಾಪಸ್ ಹಾಕುವಂತೆ SIT ತಾಕೀತು ಮಾಡಿದೆ. ಪದೇಪದೆ ಫೋನ್​ ಕರೆ ಮಾಡಿ ಹಣ ವಾಪಸ್ ಹಾಕುವಂತೆ ಸೂಚನೆ ನೀಡುತ್ತಿದೆ. ಶೀಘ್ರದಲ್ಲೇ ಹಣ ವಾಪಸ್ ಹಾಕುವಂತೆ ಒತ್ತಡ ಹಾಕುತ್ತಿದೆ. ಅಲ್ಲದೆ ಹಣ ಹಾಕದಿದ್ದರೆ ನಿಮ್ಮ ಮೇಲೂ ಕ್ರಮ ಕೈಗೊಳ್ಳುವುದಾಗಿ ಎಸ್‌ಐಟಿ‌ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಸಿಕ್ಕಿದೆ.

ಹಣ ಹಾಕಿಸಿಕೊಂಡ ಬಹುತೇಕರು ನಾಗರಾಜ್​, ವೆಂಕಟೇಶ್ವರ ರಾವ್​​ಗೆ ಸಂಬಂಧಿಕರು, ಪರಿಚಯಸ್ಥರೇ ಆಗಿದ್ದಾರೆ. ಬಳ್ಳಾರಿ, ಸಿರಗುಪ್ಪ ಮತ್ತು ಸಿಂಧನೂರಿನಲ್ಲಿ ಇರುವವರಿಗೆ ಫೋನ್ ಕರೆ ಮಾಡಿ ಹಣ ವಾಪಾಸ್ ನೀಡಲು ಎಸ್​ಐಟಿ ಒತ್ತಡ ಹಾಕುತ್ತಿದೆ, ಆದರೆ 10 ಲಕ್ಷ, 20 ಲಕ್ಷ, 50 ಲಕ್ಷ ಹೀಗೆ ಲಕ್ಷಾಂತರ ಹಣ ವರ್ಗಾವಣೆ ಮಾಡಿಕೊಂಡಿದ್ದು ಈಗ ವಾಪಸ್ ಕೊಡಲು ಹಣ ಇಲ್ಲದೇ ಆಪ್ತರು & ಸಂಬಂಧಿಕರು ಪರದಾಡುವಂತಾಗಿದೆ. ಸದ್ಯ ನೆಕ್ಕಂಟಿ ನಾಗರಾಜ್ ಮತ್ತು ವೆಂಕಟೇಶ್ವರ ರಾವ್ ಇಬ್ಬರೂ ಜೈಲಿನಲ್ಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:38 pm, Sat, 27 July 24