
ಬೆಂಗಳೂರು, ಅಕ್ಟೋಬರ್ 22): ವೀರಶೈವ ಲಿಂಗಾಯತ ಮಹಾಸಭಾ (Veerashaiva Lingayat Mahasabha) ಮುಖಂಡರ ಸಭೆ ಅಂತವಾಗಿದೆ. ಬೆಂಗಳೂರಿನಲ್ಲಿಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanuru Shivashankarappa) ನೇತೃತ್ವದ ನಡೆದ ಸಭೆಯಲ್ಲಿ ಪ್ರಮುಖ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಜಾತಿಗಣತಿ ವರದಿಯನ್ನು ಒಪ್ಪದಿರಲು ಸಭೆ ತೀರ್ಮಾನಿಸಿದೆ. ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಪ್ರತಿಪಾದಿಸಿ, ಮತ್ತೊಮ್ಮೆ ವೈಜ್ಞಾನಕ್ಕಾಗಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯ ಮಾಡಲು ತೀರ್ಮಾನಿಸಿದೆ.
Published On - 9:36 pm, Tue, 22 October 24