AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿನಾಡು ವಿಜಯಪುರ ಜಿಲ್ಲೆಯಲ್ಲಿ ಮಾದಕ ನಶೆ; ಅಕ್ರಮದಲ್ಲಿ ವಿದ್ಯಾರ್ಥಿ ಸೇರಿ ಸಹಾಯಕ ಪ್ರಾಧ್ಯಾಪಕರೂ ಭಾಗಿ

ಗಾಂಜಾ, ಚರಸ್, ಡ್ರಗ್ಸ್ ವಿಚಾರದಲ್ಲಿ ಪಂಜಾಬ್ ಕುಖ್ಯಾತಿಗೆ ಪಾತ್ರವಾಗಿರುವ ರಾಜ್ಯ. ಅಕ್ರಮ ಮಾದಕ ದ್ರವ್ಯಗಳ, ಪದಾರ್ಥಗಳ ಪೂರೈಕೆ ಸಂಗ್ರಹ ಮಾರಾಟದ ಕಾರಣಕ್ಕೆ ಪಂಜಾಬ್​ನ್ನು ಉಡ್ತಾ ಪಂಜಾಬ್ ಎಂದೂ ಕರೆಯಲಾಗುತ್ತದೆ. ಸದ್ಯ ವಿಜಯಪುರ ಜಿಲ್ಲೆಯನ್ನೂ ಉಡ್ತಾ ವಿಜಯಪುರ ಎಂದು ಕರೆಯುವ ದಿನಗಳು ಬಹಳ ದೂರ ಉಳಿದಿಲ್ಲ. ಮಹಾರಾಷ್ಟ್ರದ ಗಡಿಯನ್ನು ಹಂಚಿಕೊಂಡಿರುವ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕ ದ್ರವ್ಯಗಳ ಪದಾರ್ಥಗಳ ಸಂಗ್ರಹ ಮಾರಾಟ ಹಾಗೂ ಸಾಗಾಟ ಜೋರಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಪಾಠ ಹೇಳುವ ಸಹಾಯಕ ಪ್ರಾಧ್ಯಾಪಕನೇ ಸಿಕ್ಕಿ ಬಿದ್ದಿದ್ದು ಇನ್ನೂ ಆಘಾತಕಾರಿಯಾಗಿದೆ. 

ಗಡಿನಾಡು ವಿಜಯಪುರ ಜಿಲ್ಲೆಯಲ್ಲಿ ಮಾದಕ ನಶೆ; ಅಕ್ರಮದಲ್ಲಿ ವಿದ್ಯಾರ್ಥಿ ಸೇರಿ ಸಹಾಯಕ ಪ್ರಾಧ್ಯಾಪಕರೂ ಭಾಗಿ
ಬಂಧಿತ ಆರೋಪಿಗಳು
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Jun 01, 2024 | 3:27 PM

Share

ವಿಜಯಪುರ, ಮೇ.01: ಮಹಾರಾಷ್ಟ್ರದ ಗಡಿ ಭಾಗವನ್ನು ಹಂಚಿಕೊಂಡಿರುವ ವಿಜಯಪುರ(Vijayapur) ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೇನೂ ಕಡಿಮೆ ಇಲ್ಲ. ಅದರಲ್ಲೂ ಅಕ್ರಮ ಗಾಂಜಾ(Ganja), ಕೊಕೇನ್, ಚರಸ್, ಡ್ರಗ್ಸ್ ಸಾಗಾಟ ಮಾರಾಟ ಹಾಗೂ ಸಂಗ್ರಹದ ತಾಣವಾಗಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಆಧಿಕಾರಿಗಳೂ ಅಲ್ಲಲ್ಲಿ ದಾಳಿ ನಡೆಸಿ ಈ ಅಕ್ರಮಕ್ಕೆ ಬ್ರೇಕ್ ಹಾಕುತ್ತಿದ್ದರೂ, ಸಂಪೂರ್ಣವಾಗಿ ನಿಂತಿಲ್ಲ. ಸದ್ಯ ನಗರದ ಆದರ್ಶನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಗಾಂಜಾ ತಂಡವನ್ನೇ ಬೇಧಿಸಿದ್ದಾರೆ.

ಅಕ್ರಮದಲ್ಲಿ ವಿದ್ಯಾರ್ಥಿ ಸೇರಿ ಸಹಾಯಕ ಪ್ರಾಧ್ಯಾಪಕರೂ ಭಾಗಿ

ನಗರದ ಸೊಲ್ಲಾಪುರ ಬ್ರಿಡ್ಜ್ ಬಳಿ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಬೈಕ್​ಗಳ ಮೇಲೆ ತಂದಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ಗ್ಯಾಂಗ್​​ನ್ನು ಆದರ್ಶ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು 7.50 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನಗರದ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾಧ್ಯಾಪಕ ಪ್ರಕಾಶ್​ ರಾಠೋಡ್, ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿ ಸಾಯಿಹೇಮಂತ ತಾಟಿ ಇವರಿಗೆ ಸಹಾಯ ಮಾಡಿದ ಅಭಿಮನ್ಯು ಚವ್ಹಾಣ ಹಾಗೂ ಅವಿನಾಶ ಮೇತ್ರಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಬೀದರ್​ನಲ್ಲಿ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ NCB ಅಧಿಕಾರಿಗಳು

ಇದರಲ್ಲಿ ಅಭಿಮನ್ಯು ಚವ್ಹಾಣ ಮಧ್ಯಪ್ರದೇಶದ ಮೂಲಕ ಗಾಂಜಾ ತಂದು ಸಹಾಯಕ ಉಪನ್ಯಾಸಕ ಪ್ರಕಾಶ ರಾಠೋಡ್​ಗೆ ನೀಡುತ್ತಿದ್ದ. ಬಳಿಕ ಅದನ್ನು ಸಹಾಯಕ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ ಇತರರು ಕೂಡಿಟ್ಟು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಗಾಂಜಾ ಎಲ್ಲಿಂದ ಬಂತು, ಹೇಗೆ ಬಂತು? ಯಾರಿಗೆ ಕೊಡುತ್ತಿದ್ದರು , ಎಲ್ಲಿ ಹಾಗೂ ಯಾರ್ಯಾರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬುದರ ಕುರಿತು ತನಿಖೆ ನಡೆಸೋದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.

ಹೊರ ರಾಜ್ಯಗಳಿಂದ ಮಾದಕವಸ್ತು ಸಾಗಾಟ

ಕಾನೂನು ಬಾಹಿರವಾಗಿ ಗಾಂಜಾ ಸಂಗ್ರಹ ಮಾಡಿಕೊಂಡ ಜಾಲದ ಪೈಕಿ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾದ್ಯಾಪಕ ಹಾಗೂ ಓರ್ವ ವಿದ್ಯಾರ್ಥಿ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಶ್ಲಾಘನೀಯವೆಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಚನದಿಗಳು ನಾಡು ಎಂದು ಪಂಜಾಬ್​ ಹಾಗೂ ವಿಜಯಪುರವನ್ನು ಕರೆಯಲಾಗುತ್ತಿತ್ತು. ಇದೀಗ ಅದೇ ಉಡ್ತಾ ಪಂಜಾಬ್ ಮಾದರಿಯಲ್ಲೇ ನಮ್ಮ ಜಿಲ್ಲೆಯೂ ಉಡ್ತಾ ವಿಜಯಪುರ ಆಗುತ್ತಿದೆ. ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರದ ಮೂಲಕ ನಮ್ಮ ಜಿಲ್ಲೆಗೆ ನಿಷೇಧಿತ ನಶೆಯ ಪದಾರ್ಥಗಳು ಸರಬರಾಜಾಗುತ್ತಿದೆ.

ಇದನ್ನೂ ಓದಿ:ಗಾಂಜಾ ಮತ್ತಿನಲ್ಲಿ ಮೂವರು ಯುವಕರ ಪುಂಡಾಟ: ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯ

ವಿದ್ಯಾರ್ಥಿಗಳೇ ಟಾರ್ಗೆಟ್​

ಜಿಲ್ಲೆಯಲ್ಲಿ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ಕಾಲೇಜುಗಳಿದ್ದು, ಅನ್ಯ ರಾಜ್ಯದ ಯುವಕರು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು, ಇಲ್ಲಿ ನಶೆಯ ಪದಾರ್ಥಗಳು ಮಾರಾಟ ಆಗುತ್ತಿವೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಯುತ್ತಿದ್ದು, ನಮ್ಮ ಜಿಲ್ಲೆಯ ಸುಶಿಕ್ಷಿತ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಾಗಿದೆ. ಹಾಗಾಗಿ ಅಂತರ್​ ರಾಜ್ಯಗಳ ಬಾರ್ಡರ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಜನರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಈ ಪ್ರಕರಣ ಪೊಲೀಸರು ಬೇಧಿಸಿದ್ದು, ಅಕ್ರಮ ನಿಷೇಧಿತ ಗಾಂಜಾ ಸಾಗಾಟ ಸಂಗ್ರಹ ಹಾಗೂ ಮಾರಾಟದ ವ್ಯವಹಾರದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಾಮೀಲಾಗಿದ್ದು, ಭಯಕ್ಕೆ ಕಾರಣವಾಗಿದೆ.

ಒಟ್ಟಾರೆ ಗಾಂಜಾ ಹಾಗೂ ನಿಷೇಧಿತ ನಶೆಯ ಪದಾರ್ಥಗಳ ಕಾರಣದಿಂದ ಕಾನೂನು ಬಾಹಿರ ಕೃತ್ಯಗಳು ಸಹ ನಡೆಯುತ್ತವೆ. ಗಾಂಜಾದ ಗಮ್ಮತ್ತಿನಲ್ಲಿ ಮಾಡಬಾರದ ಕೃತ್ಯಗಳನ್ನು ಮಾಡುವ ಸಾಧ್ಯತೆಯಿದೆ. ಹಾಗಾಗಿ ಒಂದು ಪ್ರಕರಣ ಕಂಡು ಹಿಡಿದು ಸುಮ್ಮನೇ ಕೂಡದೇ ಪೊಲೀಸರು ಹಾಗೂ ಇತರೆ ಸಂಬಂಧಿಸಿದ ಆಧಿಕಾರಿಗಳು ಸಹ ಇಂತಹ ಅಕ್ರಮವನ್ನು ತಡೆಯಬೇಕಿದೆ. ಅಕ್ರಮ ಗಾಂಜಾ ಹಾಗೂ ನಶೆಯ ಪದಾರ್ಥಗಳ ವ್ಯವಹಾರ ಮಾಡುವವರು ವಿದ್ಯಾರ್ಥಿಗಳನ್ನೇ ಗುರಿ ಮಾಡಿದ್ದಾರೆ. ಹಾಗಾಗಿ ಈ ಅಕ್ರಮಕ್ಕೆ ಬ್ರೇಕ್ ಬೀಳಲೇ ಬೇಕಿದೆ. ಇಲ್ಲವಾದರೆ ನಶಾ ಲೋಕಕ್ಕೆ ವಿದ್ಯಾರ್ಥಿಗಳು ಬಲಿಯಾಗೋದು ಮಾತ್ರ ತಪ್ಪಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ