AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಮಾತೀರದ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್​; ಈತನ ಅಪರಾಧ ಹಿನ್ನೆಲೆ ಇಲ್ಲಿದೆ

ವಿಜಯಪುರ ನಗರದಲ್ಲಿ ನಟೋರಿಯಸ್​ ರೌಡಿ ಬಾಗಪ್ಪ ಹರಿಜನ್​​ನ ಕೊಲೆಯಾಗಿದೆ. ಭೀಮಾತೀರದ ಹಂತಕ ಚಂದಪ್ಪ ಹರಿಜನ್ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್ ಹಲವಾರು ಕೊಲೆ ಮತ್ತು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಭೀಮಾತೀರದಲ್ಲಿ ಬಾಗಪ್ಪ ಹರಿಜನ್ ಯಾವ್ಯಾವ ಕೃತ್ಯಗಳನ್ನು ಎಸಗಿದ್ದನು? ಈತನ ಅಪರಾಧ ಹಿನ್ನೆಲೆ ಇಲ್ಲಿದೆ.

ಭೀಮಾತೀರದ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್​; ಈತನ ಅಪರಾಧ ಹಿನ್ನೆಲೆ ಇಲ್ಲಿದೆ
ಬಾಗಪ್ಪ ಹರಿಜನ್​
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on:Feb 12, 2025 | 8:50 AM

ವಿಜಯಪುರ, ಫೆಬ್ರವರಿ 12: ಚಂದಪ್ಪನ (Chandappa Harijan) ಶಿಷ್ಯ, ನಟೋರಿಯಸ್​ ರೌಡಿ ಬಾಗಪ್ಪ ಹರಿಜನ್​​ನ (Bagappa Harijan) ಕೊಲೆಯಾಗಿದೆ. ವಿಜಯಪುರ (Vijayapura) ನಗರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ಮಂಗಳವಾರ ಬಾಗಪ್ಪ ಹರಿಜನ್​ನ್ನು ಕೊಲೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ. ದಶಕಗಳ ಹಿಂದೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಭೀಮಾತೀರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ್ದ ಬಾಗಪ್ಪ ಹರಿಜನ್ ಯಾರು? ಈತನ ಮೇಲಿದ್ದ ಅಪರಾಧ ​ಪ್ರಕರಣಗಳು ಯಾವ್ಯಾವು? ಇಲ್ಲಿದೆ ಓದಿ

ಕೊಲೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನ್ ಶಿಷ್ಯನಾಗಿದ್ದನು. ಬಾಗಪ್ಪ ಹರಿಜನ್ ಕಲಬುರ್ಗಿ, ವಿಜಯಪುರ ಭಾಗದ ಭೀಮಾತೀರದಲ್ಲಿ ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದನು.

ಬಾಗಪ್ಪ ಹರಿಜನ್​ ಮೇಲಿದ್ದ ಪ್ರಕರಣಗಳು

ಬಾಗಪ್ಪ ಹರಿಜನ್​ ಮೇಲೆ ಒಟ್ಟು 10 ಪ್ರಕರಣಗಳಿವೆ, ಈ ಪೈಕಿ 6 ಕೊಲೆ ಪ್ರಕರಣಗಳು ಇವೆ. 1998‌ ರಲ್ಲಿ‌ ಸಿಂದಗಿಯಲ್ಲಿ ಸ್ಟನ್​ಗನ್ ಬಳಸಿ ಗುಂಡು ಹಾರಿಸಿದ್ದ ಕೇಸ್​ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ‌ ಹೆಸರಿದೆ. ಚಂದಪ್ಪ ಹರಿಜನ್​ ಸಹೋದರ ಬಸಪ್ಪ ಹಾಗೂ ಸಂಬಂಧಿ ಮುತ್ತುರಾಜ ಕೊಲೆ ಪ್ರಕರಣ ಈತನ ಮೇಲಿದೆ.

  • 2000 ರಲ್ಲಿ ಪೊಲೀಸರ ಮೇಲೆ ಫೈರಿಂಗ್
  • 1999 ರಲ್ಲಿ ಆಲಮೇಲದಲ್ಲಿ ನಡೆದ ಕೊಲೆ ಪ್ರಕರಣ
  • 1998 ರಲ್ಲಿ ಕಲಬುರಗಿ ಜಿಲ್ಲೆ ಆಳಂದನಲ್ಲಿ‌ ನಡೆದ ಜೋಡಿ ಕೊಲೆ ಪ್ರಕರಣ
  • 1997 ರಲ್ಲಿ ಚಡಚಣದಲ್ಲಿ ನಡೆದ ಕೊಲೆ ಪ್ರಕರಣ
  • 2001 ರಲ್ಲಿ ಕೋಡ್ ಕೊಲೆ ಪ್ರಕರಣ
  • 2003 ರಲ್ಲಿ ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.

ಬಾಗಪ್ಪನ ಮೇಲೆ ಫೈರಿಂಗ್​

ಕಳೆದ‌ 2018 ಆಗಷ್ಟ್ 8 ರಂದು ವಿಜಯಪುರ ‌ನಗರದ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಪೀರಪ್ಪ ಹಡಪದ್ ಎಂಬಾತ ಫೈರಿಂಗ್​ ಮಾಡಿದ್ದನು. ಚಂದಪ್ಪ ಹರಿಜನ ಸಹೋದರನ ಪುತ್ರ ಭೀಮಸ್ಯಾ ಹಾಗೂ ಇತರರು ಪೀರಪ್ಪ ಹಡಪದಗೆ ಬಾಗಪ್ಪ ಕೊಲೆಗೆ ಸುಪಾರಿ ನೀಡಿದ್ದರು. ಪ್ರಕರಣದ‌ ವಿಚಾರಣೆಗೆ ಬಾಗಪ್ಪ ಹರಿಜನ್​ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಬಳಿಕ, ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆದು‌ ಬಾಗಪ್ಪ ಹರಿಜನ್​ ಗುಣ ಮುಖನಾಗಿದ್ದನು.

ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ

ಗುಂಡು ಹಾರಿಸಿ ಹತ್ಯೆ ಮಾಡಿರುವ ಶಂಕೆ: ಎಸ್​ಪಿ

ಪ್ರಕರಣ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹರಿಜನ್​ನನ್ನು ಕೊಲೆ ಮಾಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ತನಿಖೆ ಮುಂದುವರೆದಿದೆ. ಬಾಗಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬಾಗಪ್ಪ ಹರಿಜನ್ ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದನು. ಊಟ ಮಾಡಿ ಮನೆಯ ಮುಂದೆ ಬಾಗಪ್ಪ ವಾಕಿಂಗ್ ಮಾಡುತ್ತಿದ್ದ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ವಿವಿಧ ಮಾರಕಾಸ್ತ್ರ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 am, Wed, 12 February 25

ಪಲ್ಟಿಯಾದ ಟ್ಯಾಂಕರ್ ಚಾಲಕನಿಗೆ ಸಹಾಯ ಮಾಡೋದು ಬಿಟ್ಟು ಎಣ್ಣೆ ಬಾಚಿಕೊಂಡ ಜನ!
ಪಲ್ಟಿಯಾದ ಟ್ಯಾಂಕರ್ ಚಾಲಕನಿಗೆ ಸಹಾಯ ಮಾಡೋದು ಬಿಟ್ಟು ಎಣ್ಣೆ ಬಾಚಿಕೊಂಡ ಜನ!
ವಿರಾಟ್​ರಂತೆ ಕಾಣುವ ಹ್ಯಾರಿ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಖ್ಯಾತ
ವಿರಾಟ್​ರಂತೆ ಕಾಣುವ ಹ್ಯಾರಿ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಖ್ಯಾತ
ಶಿವರಾಜ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗ್ತಿದೆ: ಹಿರಿಯ ನಿರ್ದೇಶಕ
ಶಿವರಾಜ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗ್ತಿದೆ: ಹಿರಿಯ ನಿರ್ದೇಶಕ
ಅಸ್ಸಾಂ ಪ್ರವಾಹದಿಂದ 5.35 ಲಕ್ಷ ಜನರಿಗೆ ತೊಂದರೆ, 11 ಸಾವು
ಅಸ್ಸಾಂ ಪ್ರವಾಹದಿಂದ 5.35 ಲಕ್ಷ ಜನರಿಗೆ ತೊಂದರೆ, 11 ಸಾವು
ವೇದಿಕೆ ಸದಸ್ಯರಿಂದ ಗಾಳಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ!
ವೇದಿಕೆ ಸದಸ್ಯರಿಂದ ಗಾಳಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ!
ಕಮಲ್ ಹೇಳಿಕೆ ವಿವಾದ, ಕನ್ನಡಪರ ಸಂಘಟನೆಗಳಿಗೆ ಡಿಕೆಶಿ ಕಿವಿಮಾತು
ಕಮಲ್ ಹೇಳಿಕೆ ವಿವಾದ, ಕನ್ನಡಪರ ಸಂಘಟನೆಗಳಿಗೆ ಡಿಕೆಶಿ ಕಿವಿಮಾತು
ಗೃಹ ಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್​ಡೇಟ್
ಗೃಹ ಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್​ಡೇಟ್
ಹಿಂದೂ ಕಾರ್ಯಕರ್ತರ ಗಡೀಪಾರು ನಿರ್ಧಾರ ಸರಿಯಲ್ಲ: ಸತೀಶ್ ಕುಂಪಲ
ಹಿಂದೂ ಕಾರ್ಯಕರ್ತರ ಗಡೀಪಾರು ನಿರ್ಧಾರ ಸರಿಯಲ್ಲ: ಸತೀಶ್ ಕುಂಪಲ
ಒಬ್ಬ ಕ್ರಿಕೆಟರ್ ಆಗಿ ಕುಂಬ್ಳೆ ದೇಶಕ್ಕೆ ನೀಡಿದ ಕೊಡುಗೆ ಅಸಾಮಾನ್ಯ: ಖಂಡ್ರೆ
ಒಬ್ಬ ಕ್ರಿಕೆಟರ್ ಆಗಿ ಕುಂಬ್ಳೆ ದೇಶಕ್ಕೆ ನೀಡಿದ ಕೊಡುಗೆ ಅಸಾಮಾನ್ಯ: ಖಂಡ್ರೆ
ಆರ್​ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಕುಂಬ್ಳೆ ಹೀಗೆಂದಿದ್ದೇಕೆ?
ಆರ್​ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಕುಂಬ್ಳೆ ಹೀಗೆಂದಿದ್ದೇಕೆ?