
ಯಾದಗಿರಿ, (ಜುಲೈ 06): ಮೊಹರಂ ಹಬ್ಬವನ್ನ ಮುಸ್ಲಿಂ ಸಮುದಾಯದ ಜನರ ಪ್ರಮುಖವಾದ ಹಬ್ಬ ಕೂಡ ಆಗಿದೆ. ಈ ಹಬ್ಬವನ್ನು ಹಿಂದೂ ಆದ್ರೆ ಮುಸ್ಲಿಮರೇ ಇಲ್ಲದ ಈ ಊರಿನಲ್ಲಿ ಹಿಂದೂಗಳೆ ಭರ್ಜರಿಯಾಗಿ ಮೊಹರಂ ಹಬ್ಬವನ್ನ ಆಚರಿಸುತ್ತಿದ್ದಾರೆ. ಹೌದು…ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅಲೈ ಕುಣಿತದಿಂದ ಹಿಡಿದು ಅಲೈ ದೇವರು ಹಿಡಿಯುವ ಕೆಲಸವನ್ನ ಹಿಂದೂಗಳೇ ಮಾಡುತ್ತಾ ಬಂದಿದ್ದಾರೆ. ದಶಮಾನಗಳಿಂದ ಹಿಂದೂಗಳೇ ಮೊಹರಂ ಆಚರಣೆ ಮಾಡಿಕೊಂಡು ಬಂದಿದ್ದು. ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಗೆ ಪ್ರಮುಖ ಕಾರಣವೂ ಸಹ ಇದೆ.
ಹೌದು.. ಶತಮಾನಗಳಿಂದ ಮೊಹರಂ ಹಬ್ಬವನ್ನ ನಾಡಿನಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದ್ರೆ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಈ ಮೊಹರಂ ಹಬ್ಬ ಕೂಡ ಒಂದಾಗಿದೆ. ಹಸೇನ ಹುಸೇನರ ಕರ್ಬಾಲಕ್ಕೆ ಹೋಗಿದ್ದು ಅದೆ ದಿನ ಕೊನೆಯಾಗಿದ್ದಕ್ಕೆ ಶೋಕದಿಂದ ಮುಸ್ಲಿಮರು ಮೊಹರಂ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಮುಸ್ಲಿಮರ ಒಂದೆ ಒಂದು ಮನೆ ಇಲ್ಲದೆ ಇದ್ದರೂ ಹಿಂದೂಗಳು ಮೊಹರಂ ಆಚರಣೆ ಮಾಡ್ತಾಯಿದ್ದಾರೆ. ಕಳೆದ ಹಲವು ದಶಕಗಳಿಂದ ಹಿಂದೂಗಳು ಮುಸ್ಲಿಮರಂತೆ ಮೊಹರಂ ಹಬ್ಬವನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಹಬ್ಬ ಒಂದು ತಿಂಗಳು ಇರುವ ಮೊದಲೇ ಗ್ರಾಮದ ಎಲ್ಲಾ ಹಿಂದೂಗಳ ತಮಗಾದಷ್ಟು ದೇಣಿಗೆಯನ್ನ ಹಾಕಿ ಮೊಹರಂ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಅಲೈ ದೇವರು ಪ್ರತಿಷ್ಠಾಪನೆ ಮಾಡುವ ಆಶುರಖಾನವನ್ನ ಸ್ವಚ್ಚಗೊಳಿಸಿ ಸುಣ್ಣ ಬಣ್ಣವನ್ನ ಬಳಿದು ಸಿದ್ದ ಪಡಿಸಿಕೊಳ್ಳುತ್ತಾರೆ.. ಆರು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಹಸೇನ್,ಹುಸೇನ್,ಲಾಲಬಾಸ್,ಕಾಸಿಂಸಾಬ್,ಹಾಗೂ ಮೌಲಾಲಿ ದೇವರ ಪಂಚೆಗಳನ್ನ ಪ್ರತಿಷ್ಠಾಪನೆ ಮಾಡುತ್ತಾರೆ.
ಗ್ರಾಮದಲ್ಲಿ ಆರು ದಿನಗಳ ಕಾಲ ನಡೆಯುವ ಮೊಹರಂ ಇವತ್ತು ಕೊನೆ ದಿನವಾಗಿದೆ. ಅಂದ್ರೆ ದೇವರ ಪಂಚೆಗಳನ್ನ ದಪನ್ ಮಾಡಲಾಗುತ್ತೆ. ಹೀಗಾಗಿ ದಪನ್ ಅಂತ ಕರೆಯಲಾಗುತ್ತೆ. ಇನ್ನು ಇವತ್ತಿನ ಎಲ್ಲಾ ಅಲೈ ದೇವರ ಪಂಚೆಗಳನ್ನ ಹಿಡಿದು ಹಿಂದೂಗಳು ಸವಾರಿ ಮಾಡ್ತಾರೆ. ರಮೇಶ್,ಶಾಂತಪ್ಪ,ಸಣ್ಣದೇವಪ್ಪ ಹಾಗೂ ಶಶಿಕುಮಾರಸ್ವಾಮಿ ದೇವರ ಪಂಜೆಗಳನ್ನ ಹಿಡಿದು ಸವಾರಿ ಮಾಡುತ್ತಾರೆ. ಇವತ್ತು ಕೊನೆ ದಿನವಾಗಿದ್ದರಿಂದ ಎಲ್ಲಾ ದೇವರುಗಳನ್ನ ಹಿಡಿದು ಸವಾರಿ ಮಾಡಲಾಗಿದೆ. ನೂರಾರು ಯುವಕರು ತಮಟೆ ಸದ್ದಿಗೆ ಮೊಹರಂ ಹೆಜ್ಜೆಗಳನ್ನ ಹಾಕುತ್ತಾರೆ.ಬಹಳಷ್ಟು ಜನ ಸಂಭ್ರಮದಿಂದ ಒಂದೆ ಬಣ್ಣ ಬಟ್ಟೆಗಳನ್ನ ಧರಿಸಿಕೊಂಡು ಅಲೈ ಕುಣಿಯುತ್ತಾರೆ.
ಈ ಗ್ರಾಮದಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಯ ಹಿಂದೆ ಇತಿಹಾಸವಿದೆ. 1925 ಕಾಲದಲ್ಲಿ ಗ್ರಾಮದಲ್ಲಿ ಮಳೆ ಇಲ್ಲದೆ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುತ್ತಾರೆ ಕಾಲರ ಪ್ಲೇಗ್ ನಂತ ರೋಗಗಳು ಅಪ್ಪಳ್ಳಿಸಿ ಹಿಂಡಿ ಹಿಪ್ಪಿ ಮಾಡಿರುತ್ತೆ ಆಗ ಅಲೈ ಪೀರಾಗಳು ಗ್ರಾಮದ ಗುರುಲಿಂಗಪ್ಪಗೌಡ ಎಂಬ ಹಿರಿಯರ ಕನಸಲ್ಲಿ ಬಂದು ಗ್ರಾಮದಲ್ಲಿ ನಮ್ಮನ್ನ ಪ್ರತಿಷ್ಠಾಪನೆ ಮಾಡಿ ಎಲ್ಲಾ ಸಮಸ್ಯೆಯನ್ನ ದೂರು ಮಾಡುತ್ತೆ ಅಂತ ಹೇಳಿದ್ರಂತೆ ಇದೆ ಕಾರಣಕ್ಕೆ ಗ್ರಾಮದಲ್ಲಿ ಅಲೈ ಪೀರಾಗಳನ್ನ ಪ್ರತಿಷ್ಠಾಪನೆ ಮಾಡಿದ ಬಳಿಕದಿಂದ ಇಲ್ಲಿ ವರೆಗೆ ಯಾವುದೇ ಸಮಸ್ಯೆ ಆಗಿಲ್ವಂತೆ.
ಒಟ್ಟಿನಲ್ಲಿ ಈ ತಳವಾರಗೇರಿ ಗ್ರಾಮದ ಅಲೈ ಪೀರಾಗಳು ಸಾಕಷ್ಟು ಪವರ್ ಫುಲ್ ಇದೆ ಅಂತೆ. ಇದೆ ಕಾರಣಕ್ಕೆ ಪಕ್ಕದ ಊರಿನ ಬಂದು ಮಂತ್ರ ಊದಿಸಿಕೊಂಡು ಪ್ರಸಾದದ ರೂಪದಲ್ಲಿ ಸಕ್ಕರೆ ತೆಗೆದುಕೊಂಡು ಹೋಗುತ್ತಾರೆ. ಒಟ್ಟಾರೆ ಹಿಂದೂ ಮುಸ್ಲಿಂ ಅಂತ ಕಾದಾಟ ನಡೆಸುವ ಕಾಲದಲ್ಲಿ ಇಲ್ಲಿ ಮುಸ್ಲಿಮರು ಇಲ್ಲದೆ ಇದ್ರು ಮುಸ್ಲಿಂರ ಹಬ್ಬವನ್ನ ಹಿಂದೂಗಳು ಆಚರಣೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್.
Published On - 6:39 pm, Sun, 6 July 25