Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಮಠಕಲ್: ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿಯಾಗಿದ್ದಾರೆ

Horticulture crops: ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈಗ ತೋಟಗಾರಿಕೆ ಬೆಳೆಗಳನ್ನ ಬೆಳೆದು ಸಮೃದ್ಧರಾಗಿದ್ದಾರೆ. ಈಗ ಈ ರೈತನ ನೋಡಿ ಇನ್ನಿತರ ರೈತರು ಕೂಡ ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿ ಬದುಕು ಕಟ್ಟಿಕೊಳ್ಳುವಂತಾಗಿದೆ.

ಗುರುಮಠಕಲ್: ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿಯಾಗಿದ್ದಾರೆ
ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 04, 2023 | 12:52 PM

ಅದು ನೀರಾವರಿ ವಂಚಿತ ಪ್ರದೇಶ. ಮಳೆ ಬಂದ್ರೆಯಷ್ಟೇ ಬೆಳೆ, ಇಲ್ಲಾಂದ್ರೆ ಬರಗಾಲ ಎನ್ನುವಂತಿದೆ. ಆದ್ರೆ ಆ ರೈತ ಮಾತ್ರ ಬರದ ನಾಡಿನಲ್ಲಿ ಬಂಗಾರದಂತ ಬೆಳೆಯನ್ನ ಬೆಳೆದಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಗೆ ವಿದಾಯ ಹೇಳಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಕೈ ತುಂಬ ಲಾಭ ಪಡೆಯುತ್ತಿದ್ದಾರೆ (Progressive Farmer). ತೋಟಗಾರಿಕೆ ಬೆಳೆಯನ್ನ (Horticulture crops) ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಬರದ ನಾಡಲ್ಲಿ ಬಂಗಾರದಂತ ಬೆಳೆ.. ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ, ಸಮಗ್ರ ಕೃಷಿ ಆದ್ಯತೆ.. ವಿವಿಧ ತೋಟಗಾರಿಕೆ ಬೆಳೆ ಬೆಳೆದು ಕೈ ತುಂಬ ಲಾಭ ಪಡೆಯುತ್ತಿರುವ ರೈತ.. ಈ ದೃಶ್ಯಾವಳಿಗಳು ಕಂಡು ಬಂದಿದ್ದು ಯಾದಗಿರಿ (Yadgir) ಜಿಲ್ಲೆಯ ಗುರುಮಠಕಲ್ (Gurmitkal) ತಾಲೂಕಿನ ಅನಪುರ ಗ್ರಾಮದಲ್ಲಿ. ಹೌದು ಗಿರಿನಾಡು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕು ಅಂದ್ರೆ ಸಾಕಷ್ಟು ಮಹಾ ನಗರಗಳಿಗೆ ಗೂಳೆ ಹೋಗುವುದರಲ್ಲಿ ಫುಲ್ ಫೇಮಸ್ ಆಗಿದೆ. ಇದಕ್ಕೆ ಕಾರಣ ಅಂದ್ರೆ ಜಮೀನು ಇದ್ದರೂ ಸರಿಯಾದ ಬೆಳೆ ಸಿಗದ ಕಾರಣ ರೈತರು ಗುಳೆ ಹೋಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅಂದ್ರೆ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳ ಪೈಕಿ ಐದು ತಾಲೂಕುಗಳು ನೀರಾವರಿಯನ್ನ ಹೊಂದಿವೆ (Success Story).

ಕೃಷ್ಣ ಮತ್ತು ಭೀಮಾ ನದಿ ನೀರು ಬಳಸಿಕೊಂಡು ರೈತರು ನಾನಾ ರೀತಿಯ ಬೆಳೆಯನ್ನ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಗುರುಮಠಕಲ್ ತಾಲೂಕಿನ ರೈತರು ಮಾತ್ರ ನೀರಾವರಿಯಿಂದ ವಂಚಿತರಾಗಿದ್ದಾರೆ. ಇಡೀ ತಾಲೂಕು ನೀರಾವರಿ ವಂಚಿತ ಪ್ರದೇಶವಾಗಿದೆ. ಮಳೆ ಬಂದ್ರೆಯಷ್ಟೇ ಬೆಳೆ, ಇಲ್ಲಾಂದ್ರೆ ಬರಗಾಲ ಎನ್ನುವಂತಹ ಸ್ಥಿತಿಯಿದೆ. ಆದ್ರೆ ಇಂತಹ ಬರದ ನಾಡನಲ್ಲೂ ರೈತನೋರ್ವ ಸಾಧನೆ ಮಾಡಿದ್ದಾರೆ.

ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಯನ್ನ ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ಅನಪುರ ಗ್ರಾಮದ ರೈತ ಬಸರೆಡ್ಡಿ ಈಗ ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ತಮ್ಮ ಸ್ವಂತ 22 ಎಕರೆಯಲ್ಲಿ ನಾನಾ ರೀತಿಯ ತೋಟಗಾರಿಕೆ ಬೆಳೆಯನ್ನ ಬೆಳೆದು ಯಶಸ್ಸು ಕಂಡಿದ್ದಾನೆ. ತಮ್ಮ ಜಮೀನಿನಲ್ಲಿ ಮಾವು, ಪೇರಲ, ಕಲ್ಲಂಡಿಯನ್ನ ಬೆಳೆದು ಭರ್ಜರಿ ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಬಸರಡ್ಡಿ ತಮ್ಮ 22 ಎಕರೆಯ ಪೈಕಿ 8 ಎಕರೆಯಲ್ಲಿ ಪೇರಲ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪೇರಲ ಹಾಕಿದ್ದ ರೈತ ವರ್ಷಕ್ಕೆ ಪ್ರತಿ ಎಕರೆಗೆ ಖರ್ಚು ತೆಗೆದು 1.5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಇನ್ನು ಕಳೆದ ವರ್ಷ 2 ಎಕರೆಯಲ್ಲಿ ಮಾವು ಹಾಕಿದ್ದಾರೆ. ಈ ವರ್ಷ ಮಾವಿನ ಫಲಸು ಬರ್ತಾಯಿದ್ದ ಕಾರಣ ಎರಡು ಎಕರೆಯಲ್ಲಿ ಸುಮಾರು 2 ಲಕ್ಷ ಲಾಭದ ನಿರೀಕ್ಷೆಯಿದ್ದಾರೆ.

ಇದರ ಜೊತೆಗೆ ಕಳೆದ ವರ್ಷದಿಂದ ಮೂರು ಎಕರೆಯಲ್ಲಿ ಕಲ್ಲಂಗಡಿಯನ್ನ ಹಾಕಿದ್ದಾರೆ. ಈ ವರ್ಷ ಕಲ್ಲಂಡಿ ಕಟಾವ್ ಆಗಿದ್ದರಿಂದ ಸುಮಾರು 2 ಲಕ್ಷ ಲಾಭ ಪಡೆದಿದ್ದಾರೆ. ಇನ್ನು 6 ಎಕರೆಯಲ್ಲಿ ಭತ್ತ ಕೂಡ ಹಾಕಿದ್ದು ವರ್ಷಕ್ಕೆ ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಎರಡೆ ಬೋರವೆಲ್ ಕೊರೆಸಿದ್ದರಿಂದ ಸಾಕಷ್ಟು ನೀರು ಕೂಡ ಸಿಗ್ತಾಯಿದೆ ಹೀಗಾಗಿ ನೀರು ಬಳಸಿಕೊಂಡು ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಸವಲತ್ತು ಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಬಸರೆಡ್ಡಿ ಅವರು ತಾವು ಮಾತ್ರ ತೋಟಗಾರಿಕೆ ಬೆಳೆಯನ್ನ ಬೆಳೆಯುತ್ತಿಲ್ಲ. ಸಾಕಷ್ಟು ರೈತರಿಗೆ ತೋಟಗಾರಿಕೆ ಬೆಳೆಯನ್ನ ಹೇಗೆ ಬೆಳೆಯಬೇಕು ಯಾವ ಟೈಮ್ ನಲ್ಲಿ ಯಾವ ಬೆಳೆಯನ್ನ ಹಾಕಿದ್ರೆ ಲಾಭ ಬರುತ್ತೆ ಅಂತ ರೈತರಿಗೆ ಟ್ರೈನಿಂಗ್ ಕೂಡ ನೀಡುತ್ತಿದ್ದಾರೆ. ಹೀಗಾಗಿ ನಿತ್ಯ ಬಸರಡ್ಡಿ ಜಮೀನಿಗೆ ಸುತ್ತಮುತ್ತಲಿನ ಗ್ರಾಮದ ರೈತರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಬಸರೆಡ್ಡಿ ಅವರು ಬೆಳೆದ ಬೆಳೆಯನ್ನ ನೋಡಿ ಇತರ ರೈತರು ಸಹ ತೋಟಗಾರಿಕೆ ಬೆಳೆಯನ್ನ ಬೆಳೆಯೋಕೆ ಆಸಕ್ತಿ ತೋರಿಸುತ್ತಿದ್ದಾರೆ.

ಒಟ್ನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈಗ ತೋಟಗಾರಿಕೆ ಬೆಳೆಗಳನ್ನ ಬೆಳೆದು ಸಮೃದ್ಧರಾಗಿದ್ದಾರೆ. ಈಗ ಈ ರೈತನ ನೋಡಿ ಇನ್ನಿತರ ರೈತರು ಕೂಡ ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿ ಬದುಕು ಕಟ್ಟಿಕೊಳ್ಳುವಂತಾಗಿದೆ.

ವರದಿ: ಅಮೀನ್ ಹೊಸುರ್, ಟಿವಿ9, ಯಾದಗಿರಿ

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ