AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತ್​ ಡೇ ಮರುದಿನವೇ ಸೋಷಿಯಲ್ ಮೀಡಿಯಾಗಳಿಗೆ ಗುಡ್​ ಬೈ ಹೇಳಿದ ಆಮೀರ್ ಖಾನ್​; ನೆಪ ಹೇಳುವುದನ್ನು ಬಿಡಲು ನಿರ್ಧರಿಸಿದ್ದಾರಂತೆ ಮಿ.ಪರ್ಫೆಕ್ಷನಿಸ್ಟ್‌ ​

ಕಳೆದ ವರ್ಷ ಫೆಬ್ರವರಿಯಲ್ಲಿ ಆಮೀರ್​ ಖಾನ್​ ಇಂಥದ್ದೇ ಒಂದು ನಿರ್ಧಾರ ಮಾಡಿದ್ದರು. ತಮ್ಮ ಮುಂದಿನ ಚಿತ್ರ ಲಾಲ್​ ಸಿಂಗ್​ ಚಡ್ಡಾ ಬಿಡುಗಡೆಯಾಗುವವರೆಗೂ ನನ್ನ ಮೊಬೈಲ್​ ಸ್ವಿಚ್​ ಆನ್​​ ಮಾಡೋದಿಲ್ಲ ಎಂದು ಹೇಳಿದ್ದರು.

ಬರ್ತ್​ ಡೇ ಮರುದಿನವೇ ಸೋಷಿಯಲ್ ಮೀಡಿಯಾಗಳಿಗೆ ಗುಡ್​ ಬೈ ಹೇಳಿದ ಆಮೀರ್ ಖಾನ್​; ನೆಪ ಹೇಳುವುದನ್ನು ಬಿಡಲು ನಿರ್ಧರಿಸಿದ್ದಾರಂತೆ ಮಿ.ಪರ್ಫೆಕ್ಷನಿಸ್ಟ್‌ ​
ಆಮೀರ್​ ಖಾನ್​
Lakshmi Hegde
|

Updated on:Mar 15, 2021 | 8:03 PM

Share

ನಿನ್ನೆ ಭಾನುವಾರ (ಮಾರ್ಚ್​ 14)ವಷ್ಟೇ 56ನೇ ಜನ್ಮದಿನ ಆಚರಿಸಿಕೊಂಡಿದ್ದ ಬಾಲಿವುಡ್ ನಟ ಆಮೀರ್ ಖಾನ್ (Aamir Khan)​ ಇಂದು ಏಕಾಏಕಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿಸಿದ್ದಾರೆ. ನಾನಿನ್ನು ವೈಯಕ್ತಿಕವಾಗಿ ಯಾವುದೇ ಸಾಮಾಜಿಕ ಜಾಲತಾಣಗಳನ್ನೂ ಉಪಯೋಗಿಸುವುದಿಲ್ಲ. ನಿನ್ನೆ ನನ್ನ ಜನ್ಮದಿನಕ್ಕೆ ಪ್ರೀತಿಯಿಂದ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು. ನಿಮ್ಮ ಹಾರೈಕೆ, ಪ್ರೀತಿ-ವಿಶ್ವಾಸ ನೋಡಿ ನನ್ನ ಹೃದಯ ತುಂಬಿಬಂತು. ಇದೇ ನನ್ನ ಕೊನೆಯ ಪೋಸ್ಟ್ ಎಂದು ಹೇಳಿದ್ದಾರೆ.

ಮಿ.ಪರ್ಫೆಕ್ಷನಿಸ್ಟ್‌ ಎಂದೇ ಹೆಸರಾಗಿರುವ ಆಮೀರ್ ಖಾನ್ ಇಂದು ತಮ್ಮ ಕೊನೇ ಸೋಷಿಯಲ್ ಮೀಡಿಯಾ ಪೋಸ್ಟ್​​ನಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ..ಇದೇ ನನ್ನ ಕೊನೇ ಪೋಸ್ಟ್ ಆಗಲಿದೆ. ಬೇರೆ ಹೇಗಾದರೂ ನಾನು ಸಕ್ರಿಯನಾಗಿ ಇರುತ್ತೇನೆ. ಯಾವುದೇ ನೆಪ, ಸೋಗು ಹಾಕುವುದನ್ನು ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನ್ನ ಸಿನಿಮಾ ಕೆಲಸಗಳ ಮೇಲೆ ಪೂರ್ತಿಯಾಗಿ ಗಮನ ಹರಿಸಬೇಕಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಲ್ಲಿಸುತ್ತಿದ್ದೇನೆ. ನಿಮ್ಮೊಂದಿಗೆ ಖಂಡಿತ ಬೇರೆ ದಾರಿಯಲ್ಲಿ ಸಂವಹನ ನಡೆಸುತ್ತೇನೆ. ಇನ್ನೊಂದು ಮುಖ್ಯವಿಷಯವೆಂದರೆ ಆಮೀರ್​ಖಾನ್ ಪ್ರೊಡಕ್ಷನ್ ತನ್ನ ಅಧಿಕೃತ ಚಾನಲ್​ ಪ್ರಾರಂಭ ಮಾಡುತ್ತಿದ್ದು, ನನ್ನ ಮುಂದಿನ ಸಿನಿಮಾಗಳ ಕುರಿತಾದ ಎಲ್ಲ ಮಾಹಿತಿಯೂ ಅದರಲ್ಲಿ ಶೇರ್ ಆಗಲಿದೆ ಎಂದು ಆಮೀರ್ ಖಾನ್​ ಹೇಳಿದ್ದಾರೆ.

ಇಂಥ ನಿರ್ಧಾರಗಳು ಮೊದಲಲ್ಲ ! ಕಳೆದ ವರ್ಷ ಫೆಬ್ರವರಿಯಲ್ಲಿ ಆಮೀರ್​ ಖಾನ್​ ಇಂಥದ್ದೇ ಒಂದು ನಿರ್ಧಾರ ಮಾಡಿದ್ದರು. ತಮ್ಮ ಮುಂದಿನ ಚಿತ್ರ ಲಾಲ್​ ಸಿಂಗ್​ ಚಡ್ಡಾ ಬಿಡುಗಡೆಯಾಗುವವರೆಗೂ ನನ್ನ ಮೊಬೈಲ್​ ಸ್ವಿಚ್​ ಆನ್​​ ಮಾಡೋದಿಲ್ಲ ಎಂದು ಹೇಳಿದ್ದರು. ಲಾಲ್​ ಸಿಂಗ್​ ಚಡ್ಡಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರಿಂದ ಹೀಗೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರು. ಲಾಲ್​ ಸಿಂಗ್​ ಚಡ್ಡಾ ಕೆಲಸಗಳು ಬಹುತೇಕ ಮುಗಿದಿದ್ದು, ಈ ವರ್ಷದ ಡಿಸೆಂಬರ್​ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:  ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ ತಶ್ನುವಾ; ಮಹಿಳಾ ದಿನಾಚರಣೆಯಂದೇ ಕೆಲಸ ಪ್ರಾರಂಭ

‘ಕೊರೊನಾ ಹಬ್ಬಲು ಮುಖ್ಯ ಕಾರಣವೆಂದರೆ…’: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

Published On - 8:00 pm, Mon, 15 March 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ