BBK8: ವೈರಸ್​ನಿಂದ ಬಿಗ್​ ಮನೆಯಲ್ಲಿ ಹತ್ತಿದ ದ್ವೇಷದ ಬೆಂಕಿ; ಆರಿಸುವವರು ಯಾರು?

ಮನುಷ್ಯರ ತಂಡದಲ್ಲಿದ್ದ ಮಂಜು ಎಲ್ಲರಿಗೂ ಪರಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು, ಶುಭಾ-ನಿಧಿ ನಡುವೆ ಇದ್ದ ಗೆಳೆತನ ಕೂಡ ಮುರಿದು ಬೀಳುವ ಲಕ್ಷಣ ಕಾಣುತ್ತಿದೆ.

BBK8: ವೈರಸ್​ನಿಂದ ಬಿಗ್​ ಮನೆಯಲ್ಲಿ ಹತ್ತಿದ ದ್ವೇಷದ ಬೆಂಕಿ; ಆರಿಸುವವರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್​ 8
Follow us
|

Updated on: Mar 10, 2021 | 10:26 PM

ಕನ್ನಡ ಬಿಗ್​ ಬಾಸ್​ ಎರಡನೇ ವಾರದಲ್ಲಿ ನೀಡಲಾದ ಮೊದಲ ಕಠಿಣ ಟಾಸ್ಕ್​ಗೆ ಸ್ಪರ್ಧಿಗಳ ನಡುವೆ ದ್ವೇಷದ ಬೆಂಕಿ ಹತ್ತಿಕೊಂಡಿದೆ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ, ಮನೆಯಲ್ಲಿ ಎರಡು ತಂಡಗಳು ಸೃಷ್ಟಿಯಾಗಿವೆ. ಇದೊಂದು ಆಟ ಎನ್ನುವುದನ್ನು ಮರೆತು ಒಬ್ಬರಿಗೊಬ್ಬರು ಕೆಂಡ ಕಾರಿಕೊಳ್ಳುತ್ತಿದ್ದಾರೆ. ಟಾಸ್ಕ್​ನ ಪ್ರಕಾರ ಟಾಸ್ಕ್​​ನ ನಿಯಮದಂತೆ ವೈರಸ್​ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್​ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್​ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್​ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್​ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.

ವೈರಸ್​ ಆಟದಲ್ಲಿ ಎಲ್ಲರೂ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿದ್ದಾರೆ. ಆ ಮೂಲಕ ಮನೆಯೊಳಗೆ ಟೆನ್ಷನ್​ ಸೃಷ್ಟಿ ಆಗಿದೆ. ತಮ್ಮ ತಮ್ಮ ಉಳಿವಿಗಾಗಿ ಎಲ್ಲರೂ ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ವೇಳೆ ಎಲ್ಲರ ಅಸಲಿ ಮುಖ ಹೊರಗೆ ಬರುತ್ತಿದೆ.

ಮನುಷ್ಯರ ತಂಡದಲ್ಲಿದ್ದ ಮಂಜು ಎಲ್ಲರಿಗೂ ಪರಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು, ಶುಭಾ-ನಿಧಿ ನಡುವೆ ಇದ್ದ ಗೆಳೆತನ ಕೂಡ ಮುರಿದು ಬೀಳುವ ಲಕ್ಷಣ ಕಾಣುತ್ತಿದೆ. 10ನೇ ದಿನ ಮಾತನಾಡಿದ್ದ ಶುಭಾ, ನಾನು ನಿಧಿಗೆ ತುಂಬಾನೇ ಕನೆಕ್ಟ್​ ಆಗಿದ್ದೆ. ಆದರೆ, ಈಗ ಅವರು ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಅವರ ಬಗ್ಗೆ ಇದ್ದ ಒಳ್ಳೆಯ ಭಾವನೆ ಹೋಗಿಬಿಟ್ಟಿದೆ ಎಂದು ಹೇಳಿದ್ದಾರೆ.

ಸದ್ಯ, ಬಿಗ್​ ಬಾಸ್​ಮನೆಯಲ್ಲಿ ಎರಡು ತಂಡದ ನಡುವೆ ದ್ವೇಷದ ಬೆಂಕಿ ಹತ್ತಿಕೊಂಡಿದೆ. ನಿಧಿ ಈ ಆಟವೇ ಸಾಕು ಎಂದು ಹೇಳುತ್ತಿದ್ದಾರೆ. ಸದ್ಯ, ಮನೆಯಲ್ಲಿ ಆರಿಸಿದ ಬೆಂಕಿಯನ್ನು ಆರಿಸುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Bigg Boss Kannada: ಅಯ್ಯೋ ಪಾಪ.. ನಿರ್ಮಲಾ ಕೈಗೆ ಇಷ್ಟೊಂದು ಏಟಾಗಿದೆಯಾ?