AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಅಸಭ್ಯ ಪದಗಳಿಂದ ಬೈಯ್ದುಕೊಳ್ಳುವ ಮಟ್ಟಕ್ಕೆ ಇಳಿದಿದ್ದು ಏಕೆ ಬಿಗ್​ ಬಾಸ್​ ಸ್ಪರ್ಧಿಗಳು?

ಒಂದೇ ಒಂದು ಗೇಮ್​ನಿಂದಾಗಿ ಬಿಗ್​ ಬಾಸ್​ ಮನೆಯ ಸದಸ್ಯರ ನಡುವಿನ ಸಾಮರಸ್ಯ ಕದಡಿದೆ. ಇಷ್ಟು ದಿನಗಳ ಕಾಲ ಬಣ್ಣ ಬಣ್ಣದ ಮಾತುಗಳನ್ನು ಆಡಿಕೊಂಡಿದ್ದವರು ಈಗ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.

Bigg Boss Kannada: ಅಸಭ್ಯ ಪದಗಳಿಂದ ಬೈಯ್ದುಕೊಳ್ಳುವ ಮಟ್ಟಕ್ಕೆ ಇಳಿದಿದ್ದು ಏಕೆ ಬಿಗ್​ ಬಾಸ್​ ಸ್ಪರ್ಧಿಗಳು?
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 10, 2021 | 2:45 PM

ಬಿಗ್​ ಬಾಸ್​ ಎಂದರೆ ವಿವಾದಾತ್ಮಕ ರಿಯಾಲಿಟಿ ಶೋ ಎಂಬ ಭಾವನೆ ಹಲವರಲ್ಲಿದೆ. ಅದಕ್ಕೆ ಪೂರಕ ಎಂಬಂತಹ ಕೆಲವು ಘಟನೆಗಳು ದೊಡ್ಮನೆಯೊಳಗೆ ಆಗಾಗ ನಡೆಯುತ್ತಿರುತ್ತವೆ. ಬಿಗ್​ ಬಾಸ್​ ಕನ್ನಡ ಸೀಸನ್​ 8 ಆರಂಭ ಆಗಿ ಕೇವಲ 10 ದಿನ ಕಳೆದಿದೆ ಅಷ್ಟೇ. 9ನೇ ದಿನವೇ ಮನೆ ರಣಾಂಗಣ ಆಗಿದೆ. ಟಾಸ್ಕ್​ ಸಲುವಾಗಿ ಸ್ಪರ್ಧಿಗಳೆಲ್ಲ ಮೃಗಗಳಂತೆ ವರ್ತಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ವಾತಾವರಣ ಗರಂ ಆಗಲು ಕಾರಣವಾಗಿದ್ದು ವೈರಸ್​ ವರ್ಸಸ್​ ಮನುಷ್ಯರು ಗೇಮ್​. ಈ ಆಟ ಆಡುವ ವೇಳೆ ಎಲ್ಲರೂ ಸಿಟ್ಟಿನಿಂದ ನಡೆದುಕೊಂಡಿದ್ದಾರೆ. ಮಾಡು ಇಲ್ಲವೇ ಮಡಿ ಎಂಬಂತಹ ಮನೋಭಾವದಲ್ಲಿ ಕಾದಾಡಿದ್ದಾರೆ. ಈ ಆವೇಶದ ಭರದಲ್ಲಿ ಕೆಲವು ಸ್ಪರ್ಧಿಗಳು ಮಾತಿನ ಮೇಲೆ ಹಿಡಿತ ತಪ್ಪಿದ್ದಾರೆ. ಕೆಟ್ಟ ಪದಗಳಿಂದ ಬೈಯ್ದುಕೊಂಡಿರುವುದು ಅಚ್ಚರಿ.

ಮನೆಯಲ್ಲಿ ಇರುವ 16 ಸ್ಪರ್ಧಿಗಳು ಬೇರೆ ಬೇರೆ ಜಾಗಗಳಿಂದ ಬಂದಿರುವವರು. ಎಲ್ಲರ ಅಸಲಿ ವ್ಯಕ್ತಿತ್ವವೂ ಬೇರೆ ಬೇರೆ ಆಗಿದೆ. ಯಾರ ಸ್ವಭಾವ ಎಂಥದ್ದು ಎಂಬುದು ಮೊದಲ ವಾರದಲ್ಲಿ ಸರಿಯಾಗಿ ಅನಾವರಣ ಆಗಿರಲಿಲ್ಲ ಎನ್ನಬಹುದು. ಆದರೆ 9ನೇ ದಿನದ ಈ ಟಾಸ್ಕ್​ನಲ್ಲಿ ಬಹುತೇಕರು ತಮ್ಮ ಬಣ್ಣ ಕಳಚಿದ್ದಾರೆ. ಅವಾಚ್ಯ ಶಬ್ದಗಳು ಅವರ ಬಾಯಿಂದ ಹೊರಬಂದಿವೆ. ಈ ಕಾರ್ಯಕ್ರಮವನ್ನು ಕೋಟ್ಯಂತರ ಜನರು ನೋಡುತ್ತಿರುತ್ತಾರೆ ಎಂಬ ಸತ್ಯವನ್ನೂ ಮರೆತು ಹೀಗೆ ನಡೆದುಕೊಂಡಿದ್ದಾರೆ. ಅಂಥ ಪದಗಳಿಗೆಲ್ಲ ಕಾರ್ಯಕ್ರಮದ ಆಯೋಜಕರು ಬೀಪ್​ ಹಾಕಿದ್ದಾರೆ.

ಇಷ್ಟು ದಿನ ಪರಸ್ಪರ ಗೌರವ ಸೂಚಿಸುತ್ತಿದ್ದವರೆಲ್ಲ ಟಾಸ್ಕ್​ ಆಡುವಾಗ ಏಕವಚನದಲ್ಲಿ ಕರೆದುಕೊಂಡಿದ್ದಾರೆ. ಮಂಜು, ನಿರ್ಮಲಾ, ಶಮಂತ್​, ದಿವ್ಯಾ, ಪ್ರಶಾಂತ್​ ಸಂಬರಗಿ ಮುಂತಾದವರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾರು ಹೇಗೆಲ್ಲ ಮಾತನಾಡಿದರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಒಂದೇ ಒಂದು ಗೇಮ್​ನಿಂದಾಗಿ ಮನೆಯ ಸದಸ್ಯರ ನಡುವಿನ ಸಾಮರಸ್ಯ ಕದಡಿದೆ. ಹಾಗಾಗಿ ಇನ್ಮುಂದೆ ಬಣ್ಣ ಬಣ್ಣದ ಮಾತುಗಳ ಬದಲಿಗೆ ಅಸಲಿ ಸಮರ ನಡೆಯುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!

Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್