ಅವಾಜ್ ಹಾಕಿದ ಮಹಿಳೆ.. ಕೊನೆಗೆ ಸಚಿವರ ಜೇಬಿನಲ್ಲಿದ್ದ ಹಣ ತಗೊಂಡು ಸುಮ್ಮನಾದಳು!
ಬೆಂಗಳೂರು: ಹಣ ಎಂತಹವರನ್ನೂ ಕ್ಷಣ ಮಾತ್ರದಲ್ಲಿ ಬದಲಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯಕ್ಷ ಘಟನೆಯೊಂದು ಬೆಂಗಳೂರಿನ ಸಾಯಿಬಾಬಾ ಲೇಔಟ್ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕೆಲವು ನಗರದ ನಿವಾಸಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಇಂದು ಸಚಿವ ಭೈರತಿ ಬಸವರಾಜು ಹಾನಿಗೊಳಗಾದ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಾಯಿಬಾಬಾ ಲೇಔಟ್ ನಿವಾಸಿಯಾಗಿರುವ ಮಹಿಳೆಯೊಬ್ಬರು ರೋಷಾವೇಶದಲ್ಲಿ ನಮ್ಮ ಸಮಸ್ಯೆ ಯಾರು ಬಗಹರಿಸಬೇಕು? ಅಂತಾ ಸಚಿವರನ್ನು ಪ್ರಶ್ನೆ ಮಾಡಿದ್ದಾಳೆ. ಆ ಸಮಯದಲ್ಲಿ ಮಹಿಳೆಯ ಸಮಸ್ಯೆಯನ್ನು ಸಮಾಧಾನವಾಗಿಯೇ ಆಲಿಸಿದ ಸಚಿವ ಭೈರತಿ […]

ಬೆಂಗಳೂರು: ಹಣ ಎಂತಹವರನ್ನೂ ಕ್ಷಣ ಮಾತ್ರದಲ್ಲಿ ಬದಲಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯಕ್ಷ ಘಟನೆಯೊಂದು ಬೆಂಗಳೂರಿನ ಸಾಯಿಬಾಬಾ ಲೇಔಟ್ನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕೆಲವು ನಗರದ ನಿವಾಸಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಇಂದು ಸಚಿವ ಭೈರತಿ ಬಸವರಾಜು ಹಾನಿಗೊಳಗಾದ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಾಯಿಬಾಬಾ ಲೇಔಟ್ ನಿವಾಸಿಯಾಗಿರುವ ಮಹಿಳೆಯೊಬ್ಬರು ರೋಷಾವೇಶದಲ್ಲಿ ನಮ್ಮ ಸಮಸ್ಯೆ ಯಾರು ಬಗಹರಿಸಬೇಕು? ಅಂತಾ ಸಚಿವರನ್ನು ಪ್ರಶ್ನೆ ಮಾಡಿದ್ದಾಳೆ.
ಆ ಸಮಯದಲ್ಲಿ ಮಹಿಳೆಯ ಸಮಸ್ಯೆಯನ್ನು ಸಮಾಧಾನವಾಗಿಯೇ ಆಲಿಸಿದ ಸಚಿವ ಭೈರತಿ ಬಸವರಾಜು, ತಮ್ಮ ಜೇಬಿನಲ್ಲಿದ್ದ ಐನೂರು ರುಪಾಯಿಯ ಹತ್ತು ಹದಿನೈದು ನೋಟುಗಳನ್ನು ಮಹಿಳೆಗೆ ನೀಡಿದ್ದಾರೆ. ಹಣ ನೋಡಿದ ಕೂಡಲೇ ಸೈಲೆಂಟ್ ಆದ ಮಹಿಳೆ ತನ್ನ ರೋಷಾವೇಶವನ್ನೆಲ್ಲಾ ಮರೆತು, ದೇವರು ನಿಮ್ಮನ್ನು ಚೆನ್ನಾಗಿಡಲಿ ಅಂತ ಸಚಿವರಿಗೆ ಹರಸಿ, ಅಲ್ಲಿಂದ ಖುಷಿಯಲ್ಲಿ ಮನೆಗೆ ತೆರಳಿದ್ದಾಳೆ.
Published On - 4:41 pm, Wed, 9 September 20




