AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನಟಿ ಸಂಜನಾಗೆ ‘ಸುಲ್ತಾನ್’ ನಾಯಿ ಕೊಟ್ಟಿದ್ದೆ -‘ಕೋಟಿ ನಾಯಿ ಒಡೆಯ’ ಸತೀಶ್​ ಸ್ಪಷ್ಟನೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ಮಾತನಾಡಿದ ಸತೀಶ್ ಕ್ಯಾಡಬೋಮ್ಸ್ ನಟಿ ಸಂಜನಾ ಜೊತೆಗಿರುವ ನನ್ನ ಫೋಟೋ ನೋಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದೇನೆ ಎಂದು ಹೇಳಿದರು. ಸಂಜನಾಗೂ ನಿಮಗೂ ಏನು ಸಂಬಂಧವೆಂದು ಪ್ರಶ್ನಿಸಿದರು. ಎಲ್ಲೆಲ್ಲಿ ಪಾರ್ಟಿ ಮಾಡಿದ್ದೀರಿ ಎಂದು ಅಧಿಕಾರಿಗಳು ಕೇಳಿದ್ರು. ನೀವು ಎಲ್ಲೆಲ್ಲಿ ಸುತ್ತಾಡಿದ್ದೀರಿ ಎಂದು ಸಹ ಕೇಳಿದರು. ಸಿಸಿಬಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಅಂತಾ […]

ನಾನು ನಟಿ ಸಂಜನಾಗೆ ‘ಸುಲ್ತಾನ್’ ನಾಯಿ ಕೊಟ್ಟಿದ್ದೆ -‘ಕೋಟಿ ನಾಯಿ ಒಡೆಯ’ ಸತೀಶ್​ ಸ್ಪಷ್ಟನೆ
KUSHAL V
| Updated By: ಸಾಧು ಶ್ರೀನಾಥ್​|

Updated on:Sep 22, 2020 | 3:49 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ಮಾತನಾಡಿದ ಸತೀಶ್ ಕ್ಯಾಡಬೋಮ್ಸ್ ನಟಿ ಸಂಜನಾ ಜೊತೆಗಿರುವ ನನ್ನ ಫೋಟೋ ನೋಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದೇನೆ ಎಂದು ಹೇಳಿದರು. ಸಂಜನಾಗೂ ನಿಮಗೂ ಏನು ಸಂಬಂಧವೆಂದು ಪ್ರಶ್ನಿಸಿದರು. ಎಲ್ಲೆಲ್ಲಿ ಪಾರ್ಟಿ ಮಾಡಿದ್ದೀರಿ ಎಂದು ಅಧಿಕಾರಿಗಳು ಕೇಳಿದ್ರು. ನೀವು ಎಲ್ಲೆಲ್ಲಿ ಸುತ್ತಾಡಿದ್ದೀರಿ ಎಂದು ಸಹ ಕೇಳಿದರು. ಸಿಸಿಬಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಅಂತಾ ಹೇಳಿದರು.

ಸಂಜನಾ ಗಲ್ರಾನಿ ನನ್ನ ಮುಂದೆ ಸಿಗರೇಟ್ ಕೂಡ ಸೇದಿಲ್ಲ. ನಾನು ಸಂಜನಾಗೆ ‘ಸುಲ್ತಾನ್’ ನಾಯಿ ಕೊಟ್ಟಿದ್ದೆ. ಅಲ್ಲಿಂದ ಈಚೆಗೆ ಸಂಜನಾಗೂ ನನಗೂ ಪರಿಚಯವಾಗಿದ್ದು. ಜೊತೆಗೆ, ನಾನು ನಾನ್‌ವೆಜ್ ಚೆನ್ನಾಗಿ ಮಾಡ್ತಿನೆಂದು ಅವರು ನನ್ನನ್ನ ಪಾರ್ಟಿಗೆ ಕರೀತಿದ್ರು. ಅವರ ಮನೆಯಲ್ಲಿ ನಾನ್‌ವೆಜ್ ಪಾರ್ಟಿ ಮಾಡುತ್ತಿದ್ದೆವು ಅಂತಾ ಹೇಳಿದ್ದಾರೆ.

ನನ್ನ ಎಲ್ಲಾ ಕಾಲ್ ರೆಕಾರ್ಡ್‌ ಸಿಸಿಬಿಗೆ ಕೊಟ್ಟಿದ್ದೇನೆ. ಡ್ರಗ್ಸ್ ಕೇಸ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಸಿಬಿ ವಿಚಾರಣೆ ಬಳಿಕ ಸತೀಶ್ ಕ್ಯಾಡಬೋಮ್ಸ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ Drugs ಜಾಲ: ‘ಕೋಟಿ ನಾಯಿ ಒಡೆಯ’ನಿಗೆ CCB ಬುಲಾವ್

Published On - 3:09 pm, Tue, 22 September 20

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ