AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಗಲು ಹಸಿರಿನ ತೋಟ – ರಾತ್ರಿ ನಕ್ಷತ್ರ ಲೋಕ.. ಇದು ಕೋಲಾರದಲ್ಲಿ ರೈತನ ಹೊಸ ಪ್ರಯೋಗ!

ತಾವರೆಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ನಕ್ಷತ್ರಗಳ ಲೋಕವೇ ಸೃಷ್ಟಿಯಾಗಿತ್ತು. ದಾರಿಯಲ್ಲಿ ಹೋಗುವವರಿಗೆ ಅದ್ರ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಹಾಗಿದ್ರೆ ನೀವು ಕೂಡ ಈ ಸ್ಟೋರಿ ಓದಿ ನಾಲ್ಕು ಎಕರೆಯಲ್ಲಿ ನಕ್ಷತ್ರಗಳಂತೆ ಕಂಡ ಬೆಳಕಿನ ಬಗ್ಗೆ ತಿಳಿಯಿರಿ

ಹಗಲು ಹಸಿರಿನ ತೋಟ - ರಾತ್ರಿ ನಕ್ಷತ್ರ ಲೋಕ.. ಇದು ಕೋಲಾರದಲ್ಲಿ ರೈತನ ಹೊಸ ಪ್ರಯೋಗ!
ಎಲ್​ಇಡಿ ಬಲ್ಪಿಗಳಿಂದ ತೋಟಕ್ಕೆ ನಕ್ಷತ್ರದ ಅಂದ
ಆಯೇಷಾ ಬಾನು
| Edited By: |

Updated on: Nov 27, 2020 | 4:05 PM

Share

ಕೋಲಾರ: ಹಗಲಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೂವಿನ ತೋಟ. ರಾತ್ರಿಯಾಗುತ್ತಲೇ ತೋಟದಲ್ಲಿ ಕಾಣಸಿಗುತ್ತೆ ನಕ್ಷತ್ರ ಲೋಕ. ಅರೆ ಇದೆಂತ ಸುದ್ದಿ ಆಕಾಶದಲ್ಲಿರುವ ನಕ್ಷತ್ರಗಳು ಭೂಮಿ ಮೇಲೆ ಬಿದ್ವಾ ಅಂತ ಕನ್ಫ್ಯೂಸ್ ಆಗ್ಬೇಡಿ. ಇದು ಭೂಮಿ ಮೇಲೆ ರೈತ ಸೃಷ್ಟಿಸಿರೋ ನಕ್ಷತ್ರ ಲೋಕ.

ಕೋಲಾರ ತಾಲೂಕು ಗಡಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒಂದು ಅಪರೂಪದ ಹೂವಿನ ತೋಟವಿದೆ. ತಾವರೆಕೆರೆ ಗ್ರಾಮದ ಶಿವಕುಮಾರ್ ಅನ್ನೋರ ಸೇವಂತಿ ಹೂವಿನ ತೋಟದಲ್ಲಿ ವಿಭಿನ್ನವಾಗಿ ಹೂವನ್ನು ಬೆಳೆಯಲಾಗುತ್ತಿದೆ. ಶಿವಕುಮಾರ್​, ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಅನ್ನೋ ತಳಿಯ ಸೇವಂತಿಗೆಯನ್ನು ಬೆಳೆಯುತ್ತಿದ್ದಾರೆ.

ಎಲ್​ಇಡಿ ಬಲ್ಬ್​​ಗಳಿಂದ ತೋಟಕ್ಕೆ ನಕ್ಷತ್ರದ ಅಂದ: ಈಗ ಚಳಿಗಾಲ ಜೊತೆಗೆ ಹಗಲು ಕಡಿಮೆ ರಾತ್ರಿ ಹೆಚ್ಚು, ಇಂಥಹ ವಾತಾವರಣದಲ್ಲಿ ಹೂವು ಚೆನ್ನಾಗಿ ಬೆಳೆಯೋದಿಲ್ಲ ಅನ್ನೋ ಕಾರಣಕ್ಕೆ ತಮ್ಮ ನಾಲ್ಕು ಎಕರೆ ಹೂವಿನ ತೋಟಕ್ಕೆ ಎಲ್​ಇಡಿ ಬಲ್ಪಿಗಳನ್ನು ಅಳವಡಿಸಿ ಕೃತಕ ಬೆಳಕು ಸೃಷ್ಟಿಮಾಡಿದ್ದಾರೆ. ಸುಮಾರು 1500 ಬಲ್ಪ್​ಗಳನ್ನು ಅಳವಡಿಸಿ ಸೂರ್ಯ ಮುಳುಗಿದ ನಂತರ ತಮ್ಮ ತೋಟಕ್ಕೆ ವಿದ್ಯುತ್​ ಬೆಳಕನ್ನು ನೀಡುತ್ತಿದ್ದಾರೆ.

ಇನ್ನು 45 ದಿನಗಳು ಈ ರೀತಿ ಲೈಟ್​ ಹಾಕಿದ ಹಿನ್ನೆಲೆಯಲ್ಲಿ ವಿದ್ಯುತ್​ ಬಿಲ್ 50 ರಿಂದ 60 ಸಾವಿರ ರೂಪಾಯಿ ಬರುತ್ತದೆ. ಈ ರೀತಿ ಬೆಳಕು ನೀಡುವುದರಿಂದ ಒಂದು ಎಕರೆಗೆ ಎಲ್ಲಾ ವೆಚ್ಚ ಸೇರಿ ಎರಡುವರೆ ಲಕ್ಷದಷ್ಟು ಬರುತ್ತದೆಯಂತೆ.

ರೈತ ಅಂದ್ರೆ ಕೇವಲ ಸಾಂಪ್ರದಾಯಿಕ ಕೃಷಿ ಮಾಡದೆ ಈ ರೀತಿ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ರಾತ್ರಿ ಈ ನಕ್ಷತ್ರದ ತೋಟ ಸಾಕಷ್ಟು ಜನರ ಗಮನ ಸೆಳೆದಿದ್ದು ಮಾತ್ರ ಸುಳ್ಳಲ್ಲ. -ರಾಜೇಂದ್ರಸಿಂಹ

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?