AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮೆ ವಲಯದಲ್ಲಿ ಶೇ 74ರ ತನಕ ಎಫ್​ಡಿಐ ಹೂಡಿಕೆಗೆ ಅವಕಾಶ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ

FDI limit increase in Insurance sector: ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಶೇಕಡಾ 74ರ ತನಕ ಹೆಚ್ಚಿಸುವ ಮಸೂದೆಗೆ ಗುರುವಾರ (ಮಾರ್ಚ್ 18) ರಾಜ್ಯಸಭೆಯಲ್ಲಿ ಅಂಕಿತ ಬಿದ್ದಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸಭಾತ್ಯಾಗ ಮಾಡಿವೆ.

ವಿಮೆ ವಲಯದಲ್ಲಿ ಶೇ 74ರ ತನಕ ಎಫ್​ಡಿಐ ಹೂಡಿಕೆಗೆ ಅವಕಾಶ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Srinivas Mata
| Edited By: |

Updated on: Mar 18, 2021 | 9:07 PM

Share

ನವದೆಹಲಿ: ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್​ಡಿಐ) ಶೇ 49ರಿಂದ ಶೇ 74ಕ್ಕೆ ಏರಿಕೆ ಮಾಡುವ ಮಸೂದೆಗೆ ಗುರುವಾರ (ಮಾರ್ಚ್ 18) ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ವಿಮೆ (ತಿದ್ದುಪಡಿ) ಮಸೂದೆ, 2021 ರಾಜ್ಯಸಭೆಯಲ್ಲಿ ಅನುಮೋದನೆ ಆಗಿದ್ದು, ಪ್ರಮುಖ ನಿರ್ವಹಣೆಯ ವ್ಯಕ್ತಿಗಳು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಭಾರತೀಯರೇ ಆಗಿರುತ್ತಾರೆ. ಹೊಸ ರಚನೆಯು ಕನಿಷ್ಠ ಶೇ 50ರಷ್ಟು ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿರಲು ಅವಕಾಶ ಒದಗಿಸುತ್ತದೆ. ಇನ್ನು ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ನಿಧಿ ಎಂದು ಎತ್ತಿಡಬೇಕಾಗುತ್ತದೆ.

ಹತೋಟಿ ಎಂಬ ವಿಚಾರದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಹತೋಟಿ ಅಂದರೆ ಬಹುಪಾಲು ನಿರ್ದೇಶಕರು ಮತ್ತು ಮುಖ್ಯ ನಿರ್ವಹಣೆಗೆ ಭಾರತೀಯ ನಿವಾಸಿಗಳನ್ನೇ ನೇಮಿಸಬೇಕು ಎಂಬ ಹಕ್ಕು ಇದು. ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ನಿಧಿ ಎಂದು ಎತ್ತಿಡಬೇಕು. ಈ ನೆಲದ ಕಾನೂನು ನ್ಯಾಯಸಮ್ಮತವಾಗಿ ಪಕ್ವವಾಗಿದೆ. ಯಾರೋ ಅದನ್ನು ಪಕ್ಕಕ್ಕೆ ಸರಿಸಿ, ನಾವು ನೋಡಿಕೊಂಡು ಕೂರುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದ ಪಾಲಿಸಿದಾರರ ಹಣವನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಭಾರತದ ಹೊರಗೆ ಹೂಡಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ. ಇನ್ನು ಇನ್ಷೂರೆನ್ಸ್ ಸಂಸ್ಥೆಗಳು ಹೇಗೆ ನಿರ್ಧಾರ ಕೈಗೊಳ್ಳುತ್ತವೆ ಎಂದು ಕಣ್ಣಿಟ್ಟಿರಲಾಗುತ್ತದೆ ಎಂದಿದ್ದಾರೆ. ಈಗ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಳವಾಗಿದೆ ಅಂದರೆ, ಅಷ್ಟು ಪರ್ಸೆಂಟ್ ತನಕ ವಿದೇಶಿ ಹೂಡಿಕೆ ತರುವುದು ಅಂತಲ್ಲ. ಹಣ ಬೇಕೆ? ಯಾವ ಮೊತ್ತ ಬೇಕಾಗುತ್ತದೆ ಎಂಬ ಬಗ್ಗೆ ಪ್ರತಿ ಕಂಪೆನಿಯೂ ತಾವಾಗಿಯೇ ನಿರ್ಧರಿಸುತ್ತವೆ. ಈಗಿನ ತಿದ್ದುಪಡಿಯಿಂದ ಸ್ವಲ್ಪ ಹಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಆದರೆ ಶೇ 74 ದಾಟುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಸುರಕ್ಷತೆಯೊಂದಿಗೆ ಎಫ್​ಡಿಐ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಐಆರ್​ಡಿಎಐ ಹೇಳಿದ್ದಾಗಿ ನಿರ್ಮಲಾ ತಿಳಿಸಿದ್ದಾರೆ. ಈ ಮಧ್ಯೆ, ವಿಮಾ ಕ್ಷೇತ್ರದಲ್ಲಿ ಎಫ್​ಡಿಐ ಮಿತಿ ಹೆಚ್ಚಳವನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಸಭಾ ತ್ಯಾಗ ಮಾಡಿದವು. 2021ರ ಬಜೆಟ್​ನಲ್ಲಿ ವಿಮಾ ಕ್ಷೇತ್ರದಲ್ಲಿ ಎಫ್​ಡಿಐ ಮಿತಿಯನ್ನು ಶೇ 74ಕ್ಕೆ (ಈ ಹಿಂದೆ ಶೇ 49 ಇತ್ತು) ಹೆಚ್ಚಿಸುವ ಪ್ರಸ್ತಾವ ಮಾಡಲಾಗಿತ್ತು. ವಿಮೆ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿತ್ತು. ಇದಕ್ಕೂ ಮುನ್ನ 2015ನೇ ಇಸವಿಯಲ್ಲಿ ಮೋದಿ ನೇತೃತ್ವದ ಸರ್ಕಾರವು ವಿಮೆ ಕ್ಷೇತ್ರದಲ್ಲಿ ಇದ್ದ ಎಫ್​ಡಿಐ ಮಿತಿ ಶೇ 26 ಅನ್ನು ಶೇ 49ಕ್ಕೆ ಹೆಚ್ಚಿಸಿತ್ತು.

ಇದನ್ನೂ ಓದಿ: ಗಡಿ ಸಂಘರ್ಷವಿದ್ದರೂ 2020ರಲ್ಲಿಯೂ ಚೀನಾದಿಂದಲೇ ಭಾರತ ಅತಿಹೆಚ್ಚು ಆಮದು

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ