AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಣ್ಣು ನಿಮ್ಮ ಕಿಡ್ನಿ ಆರೋಗ್ಯಕ್ಕೆ ಪವಾಡದ ಔಷಧಿ.. ದಿನಕ್ಕೊಂದು ತಿಂದರೆ ಸಾಕು!

ಸೇಬು ಮೂತ್ರಪಿಂಡಗಳಿಗೆ ಸುರಕ್ಷಿತ ಎಂದು ವೈದ್ಯರು ಹೇಳುತ್ತಾರೆ. ಸೇಬಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಹೃದಯ ರೋಗಗಳು, ಕೊಲೆಸ್ಟ್ರಾಲ್ ಕಡಿತ ಮತ್ತು ಸಕ್ಕರೆ ನಿಯಂತ್ರಣ. ಶುಗರ್ ಹೆಚ್ಚಾದರೆ ಕಿಡ್ನಿಗೆ ಅಪಾಯ.. ಹಾಗಾಗಿ ಸೇಬು ಹಣ್ಣಿನಿಂದ ಇದನ್ನೆಲ್ಲ ನಿಯಂತ್ರಿಸಬಹುದು. ಆದರೆ ಸೇಬಿನ ಜೊತೆಗೆ ಬೆಳ್ಳುಳ್ಳಿ ಸಹ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು.  

ಈ ಹಣ್ಣು ನಿಮ್ಮ ಕಿಡ್ನಿ ಆರೋಗ್ಯಕ್ಕೆ ಪವಾಡದ ಔಷಧಿ.. ದಿನಕ್ಕೊಂದು ತಿಂದರೆ ಸಾಕು!
ಈ ಹಣ್ಣು ನಿಮ್ಮ ಕಿಡ್ನಿ ಆರೋಗ್ಯಕ್ಕೆ ಪವಾಡದ ಔಷಧಿ..
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 01, 2023 | 4:12 PM

Share

ಮೂತ್ರಪಿಂಡಗಳು ಮಾನವ ದೇಹದಲ್ಲಿ ಅತ್ಯಂತ ಪ್ರಮುಖವಾದ, ಆಯಕಟ್ಟಿನ ಅಂಗಗಳಾಗಿವೆ. ಕಿಡ್ನಿ ಎಷ್ಟು ಸುರಕ್ಷಿತವೋ ನಮ್ಮ ಆರೋಗ್ಯವೂ ಅಷ್ಟೇ ಸುರಕ್ಷಿತ (kidney health) ಎಂಬುದು ಸತ್ಯ. ಎರಡು ಕಿಡ್ನಿಗಳಲ್ಲಿ ಯಾವುದಾದರೂ ಒಂದರಲ್ಲಿ ಸಮಸ್ಯೆ ಎದುರಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮೂತ್ರಪಿಂಡಗಳು ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತವೆ ಮತ್ತು ಅನಗತ್ಯ ವಿಷವನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತವೆ. ಅದಕ್ಕಾಗಿಯೇ ಮೂತ್ರಪಿಂಡಗಳ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಉತ್ತಮ ಮೂತ್ರಪಿಂಡಗಳಿಗೆ, ನಾವು ತಿನ್ನುವ ಆಹಾರವು (Health Tips) ತುಂಬಾ ಮುಖ್ಯವಾಗಿದೆ. ಏನನ್ನು ತಿನ್ನಬೇಕು ಕಿಡ್ನಿಗೆ ಒಳ್ಳೆಯದು ಎಂಬ ವಿಷಯ ನೋಡಿದರೆ.. (Health)

ಸೇಬು ಮೂತ್ರಪಿಂಡಗಳಿಗೆ ಸುರಕ್ಷಿತ ಎಂದು ವೈದ್ಯರು ಹೇಳುತ್ತಾರೆ. ಸೇಬಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಹೃದಯ ರೋಗಗಳು, ಕೊಲೆಸ್ಟ್ರಾಲ್ ಕಡಿತ ಮತ್ತು ಸಕ್ಕರೆ ನಿಯಂತ್ರಣ. ಶುಗರ್ ಹೆಚ್ಚಾದರೆ ಕಿಡ್ನಿಗೆ ಅಪಾಯ.. ಹಾಗಾಗಿ ಸೇಬು ಹಣ್ಣಿನಿಂದ ಇದನ್ನೆಲ್ಲ ನಿಯಂತ್ರಿಸಬಹುದು. ಆದರೆ ಸೇಬಿನ ಜೊತೆಗೆ ಬೆಳ್ಳುಳ್ಳಿ ಸಹ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು.

ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕಿಡ್ನಿಯಲ್ಲಿರುವ ಅನಗತ್ಯ ತ್ಯಾಜ್ಯಗಳು ಹೋಗುತ್ತವೆ. ಬೆಳ್ಳುಳ್ಳಿಯನ್ನು ಪ್ರತಿದಿನ ಹಸಿಯಾಗಿ ತೆಗೆದುಕೊಳ್ಳಬಹುದು.. ಇಲ್ಲವೇ ತಿನ್ನುವ ಆಹಾರದಲ್ಲಿ ಬಳಸಿ, ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಸೇಬು, ಬೆಳ್ಳುಳ್ಳಿ ಮಾತ್ರವಲ್ಲ ಓಟ್ಸ್ ಕೂಡ ಮೂತ್ರಪಿಂಡಕ್ಕೆ ಒಳ್ಳೆಯದು. ಓಟ್ಸ್ ನಲ್ಲಿ ನಾರಿನಂಶ ಅಧಿಕವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಬೀಟಾ ಗ್ಲುಕನ್ ಎಂಬ ನೀರಿನಲ್ಲಿ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಓಟ್ಸ್ ಅನ್ನು ಬೆಳಿಗ್ಗೆ ತೆಗೆದುಕೊಳ್ಳುವುದು ಉತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ಮೂತ್ರಪಿಂಡಗಳ ರಕ್ಷಣೆಗೆ ನೀರು ಪ್ರಯೋಜನಕಾರಿ.

Also Read: ಮಧುಮೇಹವು ಮೂತ್ರಪಿಂಡದ ಹಾನಿಯನ್ನುಂಟು ಮಾಡಬಹುದು: ಡಾ.ಸುಮಿತ್ ಶರ್ಮಾ

ನೀವು ಪ್ರತಿದಿನ ಹೆಚ್ಚು ನೀರು ಕುಡಿದಷ್ಟೂ ನಿಮ್ಮ ದೇಹಕ್ಕೆ ಒಳ್ಳೆಯದು. ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಸ್ವಚ್ಛವಾಗುತ್ತದೆ. ಜೀವಾಣುಗಳನ್ನು ಹೊರಹಾಕಲಾಗುತ್ತದೆ.

ಕೆಂಪು ದಪ್ಪ ಮೆಣಸಿನಕಾಯಿಯು ವಿಟಮಿನ್ ಎ ಮತ್ತು ವಿಟಮಿನ್ ಸಿ ಹೊಂದಿರುತ್ತದೆ. ಇವು ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಸಿಗುತ್ತವೆ. ಹಾಗಾಗಿ ಇವೆಲ್ಲವೂ ಮಾನವನ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಿ ಕಿಡ್ನಿಯನ್ನು ಆರೋಗ್ಯವಾಗಿಡುತ್ತವೆ. ಹಾಗಾಗಿ ಈ ರೀತಿಯ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:10 pm, Fri, 1 December 23

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್