AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕೊರೊನಾ ಕಾಲ: BMTC ಬಸ್‌ ಹತ್ತುವ ಮುನ್ನ ನಿಮ್ಮ ಬಳಿ ಇದು ಇರಲೇಬೇಕು!

ಬೆಂಗಳೂರು: ಹೇಳಿಕೇಳಿ BMTC ಬಸ್ ಅನ್ನೋದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನವೋ ಜನ. ಅದರಲ್ಲೂ ಕೊರೊನಾ ಕಾಲದಲ್ಲಿ ಅದರಲ್ಲಿ ಪ್ರಯಾಣಿಸಬೇಕು ಅಂದ್ರೆ ತುಸು ಜಾಗ್ರತೆ ವಹಿಸುವುದು ಅತ್ಯಗತ್ಯ-ಅನಿವಾರ್ಯ. ಹಾಗಾಗಿಯೇ ಈ ಕೊರೊನಾ ಕಾಲದಲ್ಲಿ BMTC ಬಸ್‌ ಹತ್ತುವ ಮುನ್ನ ನೀವು ಸಾಕಷ್ಟು ಜಾಗ್ರತೆ ವಹಿಸಲೇಬೇಕು! ಅಷ್ಟೇ ಅಲ್ಲ, ಈಗ ಖುದ್ದು BMTCಯೇ ನಿಯಮವೊಂದನ್ನು ಕಡ್ಡಾಯಗೊಳಿಸಿದೆ. ಬಸ್ ಸಂಚರಿಸೋ ವೇಳೆ ಮಾಸ್ಕ್ ತೆಗೆಯೋ ಹಾಗಿಲ್ಲ ಹೌದು ಇನ್ಮುಂದೆ ಮಾಸ್ಕ್ ಧರಿಸದೆ BMTC ಬಸ್‌ನಲ್ಲಿ ಪ್ರಯಾಣಿಸಿದರೆ ದಂಡ ತೆರಲೇಬೇಕಾದೀತು. BMTC […]

ಇದು ಕೊರೊನಾ ಕಾಲ: BMTC ಬಸ್‌ ಹತ್ತುವ ಮುನ್ನ ನಿಮ್ಮ ಬಳಿ ಇದು ಇರಲೇಬೇಕು!
ಸಾಧು ಶ್ರೀನಾಥ್​
|

Updated on:Nov 02, 2020 | 12:09 PM

Share

ಬೆಂಗಳೂರು: ಹೇಳಿಕೇಳಿ BMTC ಬಸ್ ಅನ್ನೋದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನವೋ ಜನ. ಅದರಲ್ಲೂ ಕೊರೊನಾ ಕಾಲದಲ್ಲಿ ಅದರಲ್ಲಿ ಪ್ರಯಾಣಿಸಬೇಕು ಅಂದ್ರೆ ತುಸು ಜಾಗ್ರತೆ ವಹಿಸುವುದು ಅತ್ಯಗತ್ಯ-ಅನಿವಾರ್ಯ. ಹಾಗಾಗಿಯೇ ಈ ಕೊರೊನಾ ಕಾಲದಲ್ಲಿ BMTC ಬಸ್‌ ಹತ್ತುವ ಮುನ್ನ ನೀವು ಸಾಕಷ್ಟು ಜಾಗ್ರತೆ ವಹಿಸಲೇಬೇಕು! ಅಷ್ಟೇ ಅಲ್ಲ, ಈಗ ಖುದ್ದು BMTCಯೇ ನಿಯಮವೊಂದನ್ನು ಕಡ್ಡಾಯಗೊಳಿಸಿದೆ.

ಬಸ್ ಸಂಚರಿಸೋ ವೇಳೆ ಮಾಸ್ಕ್ ತೆಗೆಯೋ ಹಾಗಿಲ್ಲ ಹೌದು ಇನ್ಮುಂದೆ ಮಾಸ್ಕ್ ಧರಿಸದೆ BMTC ಬಸ್‌ನಲ್ಲಿ ಪ್ರಯಾಣಿಸಿದರೆ ದಂಡ ತೆರಲೇಬೇಕಾದೀತು. BMTC ಬಸ್‌ನಲ್ಲಿ ಮಾಸ್ಕ್ ಹಾಕದೇ ಸಂಚರಿಸುತ್ತೀರಿ ಅಂದ್ರೆ ಮಿಸ್ ಮಾಡದೇ ನಿಮ್ಮ ಜೇಬಿನಲ್ಲಿ 100 ರೂಪಾಯಿ ಜಾಸ್ತಿ ಹಣ ಇಟ್ಟುಕೊಂಡು ಓಡಾಡಿ.

ಮಾಸ್ಕ್ ಧರಿಸದವರಿಗೆ ಸಿಬ್ಬಂದಿ 100 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಟಿಕೆಟ್ ತನಿಖಾಧಿಕಾರಿಯಿಂದ ಮಾಸ್ಕ್ ದಂಡ ವಸೂಲಿ ಮಾಡಲಾಗುತ್ತಿದೆ. ಅಲ್ಲಿಗೆ ಮಾಸ್ಕ್ ಹಾಕದಿದ್ರೆ ಬಿಬಿಎಂಪಿ ಮಾರ್ಷಲ್ಸ್, ಪೊಲೀಸ್ ಮಾತ್ರ ಅಲ್ಲ, ಬಸ್ ಟಿಕೆಟ್ ಚೆಕ್ಕಿಂಗ್ ಇನ್ಸ್​ಪೆಕ್ಟರ್​​ಗಳೂ ಸಹ ಫೈನ್ ಹಾಕ್ತಾರೆ ಹುಷಾರ್.

Published On - 12:09 pm, Mon, 2 November 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More