ಎಬಿ ಡಿವಿಲಿಯರ್ಸ್ಗೆ ಚಹಲ್ ಮೇಕಪ್, ಎಬಿ ಡಿ ಬೇಸರಗೊಂಡಿದ್ಯಾಕೆ?
ಅಭಿಮಾನಿಗಳಿಲ್ಲದೇ ಬೇಸರ ದೊಡ್ಡ ಪ್ರಮಾಣದ ಅಭಿಮಾನಿಗಳ ಎದುರು ಆಡುತ್ತಿದ್ದಾಗ, ಆಟಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಅಭಿಮಾನಿಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಎಬಿಡಿ ಬೇಸರ ವ್ಯಕ್ತಪಡಿಸಿದ್ದಾರೆ. ಎಬಿಡಿಗೆ ಚಹಲ್ ಮೇಕಪ್ ಆರ್ಸಿಬಿ ತಂಡದ ಸ್ಪಿನ್ನರ್ ಯಜ್ವಿಂದರ್ ಚಹಲ್, ಎಬಿ ಡಿವಿಲಿಯರ್ಸ್ಗೆ ಮೇಕ್ಅಪ್ ಮಾಡುತ್ತಿರೋ ವಿಡಿಯೊವೊಂದನ್ನ ಪೋಸ್ಟ್ ಮಾಡಿದ್ದಾರೆ. ನಾನು ಎಬಿಡಿಗೆ ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. https://www.instagram.com/p/CFMHquKBeys/?utm_source=ig_web_copy_link ನೀರಿನಲ್ಲಿ ಮಿಂದೆದ್ದ ಆಟಗಾರರ ದುಬೈ ಬಿಸಿಲಿಗೆ ಬಸವಳಿದಿರೋ ಆರ್ಸಿಬಿ ಆಟಗಾರರು, ಅಭ್ಯಾಸದ ನಂತ್ರ ಸ್ವಿಮ್ಮಿಂಗ್ಫುಲ್ನಲ್ಲಿ […]

ಅಭಿಮಾನಿಗಳಿಲ್ಲದೇ ಬೇಸರ ದೊಡ್ಡ ಪ್ರಮಾಣದ ಅಭಿಮಾನಿಗಳ ಎದುರು ಆಡುತ್ತಿದ್ದಾಗ, ಆಟಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಅಭಿಮಾನಿಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಎಬಿಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಎಬಿಡಿಗೆ ಚಹಲ್ ಮೇಕಪ್ ಆರ್ಸಿಬಿ ತಂಡದ ಸ್ಪಿನ್ನರ್ ಯಜ್ವಿಂದರ್ ಚಹಲ್, ಎಬಿ ಡಿವಿಲಿಯರ್ಸ್ಗೆ ಮೇಕ್ಅಪ್ ಮಾಡುತ್ತಿರೋ ವಿಡಿಯೊವೊಂದನ್ನ ಪೋಸ್ಟ್ ಮಾಡಿದ್ದಾರೆ. ನಾನು ಎಬಿಡಿಗೆ ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. https://www.instagram.com/p/CFMHquKBeys/?utm_source=ig_web_copy_link
ನೀರಿನಲ್ಲಿ ಮಿಂದೆದ್ದ ಆಟಗಾರರ ದುಬೈ ಬಿಸಿಲಿಗೆ ಬಸವಳಿದಿರೋ ಆರ್ಸಿಬಿ ಆಟಗಾರರು, ಅಭ್ಯಾಸದ ನಂತ್ರ ಸ್ವಿಮ್ಮಿಂಗ್ಫುಲ್ನಲ್ಲಿ ಮಿಂದೆದ್ದಿದ್ದಾರೆ. ವಿರಾಟ್ ಕೊಹ್ಲಿ, ಉಮೇಶ್ ಯಾದವ್ ಸೇರಿದಂತೆ ಆರ್ಸಿಬಿ ಆಟಗಾರು ನೀರಿನಲ್ಲೇ ವಾಲಿಬಾಲ್ ಆಡಿದ್ದಾರೆ.
We’re all Aquaholics. ?
(1/2)#PlayBold #IPL2020 #WeAreChallengers #Dream11IPL pic.twitter.com/vHb2ETbk0y
— Royal Challengers Bangalore (@RCBTweets) September 16, 2020
ಪವನ್ ಬರ್ತ್ಡೇ ಸಂಭ್ರಮ ಆರ್ಸಿಬಿ ತಂಡದಲ್ಲಿರೋ ಕನ್ನಡಿಗ ಪವನ್ ದೇಶಪಾಂಡೆ ಬುಧವಾರ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ಆರ್ಸಿಬಿ ತಂಡ ಪವನ್ಗೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದು, ನಗು ನಗುತಾ ಬಾಳು ನೀನು ನೂರು ವರುಷ ಅಂತ ಅಭಿನಂದಿಸಿದೆ.
Birthday = ? ?@Pavandesh22 #PlayBold #WeAreChallengers pic.twitter.com/TSMIfRAXuE
— Royal Challengers Bangalore (@RCBTweets) September 16, 2020
ಸಿಎಸ್ಕೆ ಕ್ಯಾಂಪ್ನಲ್ಲಿ ಭಯ ಋತುರಾಜ್ ಗಾಯಕ್ವಾಡ್ಗೆ ಮತ್ತೆ ಕೊರೊನಾ ಪಾಸಿಟಿವ್ ಆಗಿರೋದ್ರಿಂದ, ಚೆನ್ನೈ ತಂಡದಲ್ಲಿ ಆತಂಕ ಶುರುವಾಗಿದೆ. ಋತುರಾಜ್ ಮತ್ತಷ್ಟು ದಿನ ಕ್ವಾರಂಟೈನ್ ಆಗಲಿದ್ದು, ಎರಡ್ಮೂರು ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ.
ಚೆನ್ನೈ ಭರ್ಜರಿ ತಯಾರಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನ ಎದುರಿಸಲಿದ್ದು, ಭರ್ಜರಿ ತಯಾರಿಯನ್ನ ನಡೆಸ್ತಿದೆ. ತಂಡದಲ್ಲಿ ಕೊರೊನಾ ಆತಂಕವನ್ನುಂಟು ಮಾಡಿದ್ರೆ, ಚೆನ್ನೈ ಭರ್ಜರಿ ತಾಲೀಮು ನಡೆಸ್ತಿದೆ.
A complete #YelloveGame when the Kings Clash! #WhistlePodu ?? pic.twitter.com/QxRfeqXmdP
— Chennai Super Kings (@ChennaiIPL) September 15, 2020
ರೈನಾ ಅಲಭ್ಯತೆ ಹಿನ್ನಡೆಯಾಗಲಿದೆ ಸುರೇಶ್ ರೈನಾ ಅಲಭ್ಯತೆಯಿಂದಾಗಿ ಚೆನ್ನೈ ತಂಡಕ್ಕೆ ಹಿನ್ನೆಯಾಡಗಲಿದೆ ಎಂದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಬಂದಿದ್ದು ವಿಶೇಷ 14 ತಿಂಗಳ ವಿರಾಮದ ಬಳಿಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿರೋದು ವಿಶೇಷವಾಗಿದೆ ಎಂದು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ…
ಚೆನ್ನೈಗೆ ವಿಸಿಲ್ ಪೋಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹಾಗೂ ಶೇನ್ ವಾಟ್ಸನ್ ನೆಟ್ಸ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ವಿಡಿಯೋವನ್ನು ವಾಟ್ಸನ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಸಿಎಸ್ಕೆ ಅಭಿಮಾನಿಗಳು ವಿಸಿಲ್ ಪೋಡು ಎನ್ನುತ್ತಿದ್ದಾರೆ…
ಬೂಮ್ರಾ ಅತ್ಯುತ್ತಮ ಬೌಲರ್ ಮುಂಬೈ ಇಂಡಿಯನ್ಸ್ನ ವೇಗಿ ಜಸ್ಪ್ರೀತ್ ಬೂಮ್ರಾ ವಿಶ್ವದ ಅತ್ಯುತ್ತಮ ಬೌಲರ್ ಎಂದು ಜೇಮ್ಸ್ ಪ್ಯಾಟೀನ್ಸನ್ ಹೇಳಿದ್ದಾರೆ. ಬೂಮ್ರಾ ಜೊತೆಗೆ ಒಂದೇ ತಂಡದಲ್ಲಿ ಆಡ್ತಿರೋದು ಉತ್ತಮ ಅನುಭವವಾಗಿದೆ ಅಂತ ಪ್ಯಾಟೀನ್ನಸ್ ಹೇಳಿದ್ದಾರೆ.
? | Pattinson has joined the camp and is thrilled to partner with Boom and Boult! ?⚡️#OneFamily #MumbaiIndians #MI #Dream11IPL pic.twitter.com/2WAgKqi5Q7
— Mumbai Indians (@mipaltan) September 15, 2020
Published On - 1:10 pm, Thu, 17 September 20




