AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೇ ಸಮಸ್ಯೆ ಇದ್ರೂ KPCC ಕಚೇರಿ, ನನ್ನ ಮನೆಯಲ್ಲಿ ಬಂದು ಮಾತಾಡಲಿ: ಅಖಂಡ ವಿರುದ್ಧ ಡಿಕೆಶಿ ಗರಂ

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್​ ಎಂಎಲ್​ಎ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಸ್ತಿಪಾಸ್ತಿಗೆ ಅಪಾರ ಹಾನಿಯುಂಟಾಗಿತ್ತು. ಹೀಗಾಗಿ ಈ ದಾಳಿಯಲ್ಲಿ ಮಾಜಿ ಮೇಯರ್​ ಸಂಪತ್​ ರಾಜ್​ ಕೈವಾಡವಿದೆಯೆಂದು ಅಖಂಡ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದರು. ಜೊತೆಗೆ ಸಂಪತ್ ರಾಜ್ ಮೇಲೆ ಪಕ್ಷದಿಂದ ಕ್ರಮ ಆಗಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಒತ್ತಾಯ ಮಾಡಿದ್ದರು. ಹೀಗಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಕ್ಷೇಪ […]

ಏನೇ ಸಮಸ್ಯೆ ಇದ್ರೂ KPCC ಕಚೇರಿ, ನನ್ನ ಮನೆಯಲ್ಲಿ ಬಂದು ಮಾತಾಡಲಿ: ಅಖಂಡ ವಿರುದ್ಧ ಡಿಕೆಶಿ ಗರಂ
ಪೃಥ್ವಿಶಂಕರ
|

Updated on:Nov 17, 2020 | 11:49 AM

Share

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್​ ಎಂಎಲ್​ಎ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಸ್ತಿಪಾಸ್ತಿಗೆ ಅಪಾರ ಹಾನಿಯುಂಟಾಗಿತ್ತು. ಹೀಗಾಗಿ ಈ ದಾಳಿಯಲ್ಲಿ ಮಾಜಿ ಮೇಯರ್​ ಸಂಪತ್​ ರಾಜ್​ ಕೈವಾಡವಿದೆಯೆಂದು ಅಖಂಡ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದರು. ಜೊತೆಗೆ ಸಂಪತ್ ರಾಜ್ ಮೇಲೆ ಪಕ್ಷದಿಂದ ಕ್ರಮ ಆಗಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಒತ್ತಾಯ ಮಾಡಿದ್ದರು.

ಹೀಗಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಕ್ಷೇಪ ಹೊರಹಾಕಿದ್ದಾರೆ. ಒಬ್ಬರ ವೈಯಕ್ತಿಕ ಹೇಳಿಕೆ ಮೇಲೆ ನಾನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಬಂದು ಮಾತಾಡಲಿ. ಕೆಪಿಸಿಸಿ ಕಚೇರಿ ಇಲ್ಲವೇ ನನ್ನ ಮನೆಯಲ್ಲಿ ಬಂದು ಮಾತಾಡಲಿ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಅಖಂಡ ಶ್ರೀನಿವಾಸ ಮೂರ್ತಿ ಅವರ ವೈಯಕ್ತಿಕ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡಲ್ಲ. ಅಲ್ಲದೆ ಕಾನೂನಿಗಿಂತ ಸಂಪತ್ ರಾಜ್ ಮೇಲಲ್ಲ. ಜೊತೆಗೆ ಡಿಕೆಶಿ ಕೂಡ ಮೇಲಲ್ಲ. ಕಾನೂನು ದುರುಪಯೋಗ ಮಾಡಿಕೊಳ್ಳುವ ಒಂದು ವರ್ಗ ಇದೆ. ಅದರಲ್ಲೂ ಬಿಜೆಪಿಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಬಿಜೆಪಿ ಮೇಲೆ ಕಿಡಿ ಕಾರಿದ್ದಾರೆ.

Published On - 11:46 am, Tue, 17 November 20