AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ. ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು. ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್ 6,500 ಬೆಡ್ ಹಾಗೂ ಬಿಬಿಎಂಪಿ […]

BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ
ಆಯೇಷಾ ಬಾನು
| Updated By: |

Updated on:Jul 24, 2020 | 4:46 PM

Share

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ.

ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು.

ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್ 6,500 ಬೆಡ್ ಹಾಗೂ ಬಿಬಿಎಂಪಿ ನೀಡಿದ ಪಟ್ಟಿಯಂತೆ ನಾಲ್ವರು ಗುತ್ತಿಗೆದಾರರು ಸಲಕರಣೆ ತಂದು ಫಿಕ್ಸ್ ಮಾಡಿದ್ದರು. ಆದ್ರೆ ಬಾಡಿಗೆ ಹಣ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 100 ದಿನಕ್ಕೆ 240 ಕೋಟಿ ರೂ. ಬಾಡಿಗೆ ನೀಡಲು‌ ಒಪ್ಪಂದ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಆರು ವಸ್ತುಗಳನ್ನು ಸರ್ಕಾರದಿಂದಲೇ ಖರೀದಿಸಲು ಸಿಎಂ ಬಿಎಸ್‌ವೈ ಸೂಚಿಸಿದ್ದರು. ಗುತ್ತಿಗೆದಾರರೇ ಹಾಕಿದ್ದ ವಸ್ತುಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು.

6,500 ಬೆಡ್‌ಗಳಿಗೆ ತಲಾ 6 ವಸ್ತುಗಳನ್ನು 4,800 ರೂ.ಗೆ ನೀಡುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಸೂಚಿಸಿತ್ತು. ಆದ್ರೆ 7,500 ರೂ. ನೀಡುವಂತೆ ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಉಳಿದ ಸೌಲಭ್ಯಗಳನ್ನು ದಿನಕ್ಕೆ 200 ರೂ.ನಂತೆ ಬಾಡಿಗೆಗೆ ನೀಡಲು ಗುತ್ತಿಗೆದಾರರಿಗೆ ಬಿಬಿಎಂಪಿ ತಿಳಿಸಿದೆ. ಆದರೆ ಈ ಬಾಡಿಗೆ ಹಣಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಈ ಬಗ್ಗೆ ಸಿಎಂ, ಸಿಎಸ್‌ಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಖರೀದಿ ದರ, ಬಾಡಿಗೆ ಹಣ ನಿಗದಿ ಅಂತಿಮವಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

Published On - 10:20 am, Thu, 23 July 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ