AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ

ಹಾಥಿ ಮೆರೆ ಸಾಥಿ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.

ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ
ರಾನಾ ದಗ್ಗುಬಾಟಿ
ರಾಜೇಶ್ ದುಗ್ಗುಮನೆ
| Edited By: |

Updated on:Mar 24, 2021 | 6:45 PM

Share

ನಟ ರಾನಾ ದಗ್ಗುಬಾಟಿ ಟಾಲಿವುಡ್​ನ ಬಹುಬೇಡಿಕೆಯ ನಟ. ಅವರ ವಿಲನ್​ ಕ್ಯಾರೆಕ್ಟರ್​ ಬಾಹುಬಲಿ ಸಿನಿಮಾಗೆ ತೂಕ ನೀಡಿತ್ತು. ರಾನಾ ಅವರಿಗೆ ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಗ್ಯಾಪ್​ ತೆಗೆದುಕೊಂಡು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದರು. ತಮ್ಮ ಅನಾರೋಗ್ಯದ ದಿನಗಳು ಹೇಗಿದ್ದವು ಎನ್ನುವ ಬಗ್ಗೆ ರಾನಾ ಮೌನ ಮುರಿದಿದ್ದಾರೆ. ‘ಹಾಥಿ ಮೆರೆ ಸಾಥಿ’ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.ಈಗ ಅವರು ಸಮಸ್ಥಿತಿಯಲ್ಲಿದ್ದಾರೆ. ತಾವು ಅನುಭವಿಸಿದ ಕಷ್ಟದ ಬಗ್ಗೆ ರಾಣಾ ಹೇಳಿಕೊಂಡಿದ್ದಾರೆ.

ಹಾಥಿ ಮೆರೆ ಸಾತಿ ಸಿನಿಮಾದ ನಿರ್ದೇಶಕ ಪ್ರಭು ಅವರಿಗೆ ಧನ್ಯವಾದ ಹೇಳಿರುವ ರಾಣಾ, ಸಿನಿಮಾ ಕೆಲಸಗಳು ನಡೆಯುತ್ತಿರುವಾಗಲೇ ನನ್ನ ಅನಾರೋಗ್ಯದ ವಿಚಾರ ಹೊರ ಬಿದ್ದಿತ್ತು. ನಾನು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಪ್ರಭು ಅವರು ಸಿನಿಮಾ ಶೂಟಿಂಗ್​ ನಿಲ್ಲಿಸಿ ನನಗಾಗಿ ಕಾದಿದ್ದರು. ನನ್ನ ಸಮಸ್ಯೆಗಳು ಕಡಿಮೆ ಆಗಲು ಕಾಡು ಮೊದಲ ಕಾರಣ ಎಂದಿದ್ದಾರೆ.

ಕಾಡಿನಲ್ಲಿ ಒಂದು ವಾರ ಕಳೆದು ಹಿಂತಿರುಗಿ ಬಂದರೆ ನಿಮಗೆ ವಿಭಿನ್ನ ಮನಸ್ಥಿತಿ ಇರುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಕಾಡಿನಲ್ಲಿ ಸಮಯ ಕಳೆದಿದ್ದರಿಂದ ಅನಾರೋಗ್ಯದಿಂದ ಎದುರಿಸಿದ ಯಾತನೆ ಪರಿಹಾರ ಆಯಿತು ಎಂದು ರಾಣಾ ಹೇಳಿದ್ದಾರೆ.

ರಾನಾ ದಗ್ಗುಬಾಟಿಗೆ ರಕ್ತೊದತ್ತಡ, ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯ ಉಂಟಾಗಿತ್ತಂತೆ. ಶೇ.70 ಉಳಿದುಕೊಳ್ಳುವ ಸಾಧ್ಯತೆ ಹಾಗೂ ಶೇ.30 ಮೃತಪಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರಂತೆ.

ಹಾಥಿ ಮೆರೆ ಸಾಥಿ ಸಿನಿಮಾ ಮಾರ್ಚ್​ 26ರಂದು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್​ ಆಗುತ್ತಿದೆ. ತಮಿಳಿನಲ್ಲಿ ಕಾಡನ್​ ಹಾಗೂ ತೆಲುಗಿನಲ್ಲಿ ಅರಣ್ಯ ಹೆಸರಿನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್​ ಆಗುತ್ತಿಲ್ಲ. ಹಿಂದಿ ವರ್ಷನ್​ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು.

ಇದನ್ನೂ ಓದಿ: ಸಲಾರ್​ ನಂತರವೂ ಪ್ರಶಾಂತ್​ ನೀಲ್​ ಕನ್ನಡ ಸಿನಿಮಾ ಮಾಡೋದು ಡೌಟ್​; ಇಲ್ಲಿದೆ ಹೊಸ ನ್ಯೂಸ್​

Published On - 5:30 pm, Wed, 24 March 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ