ಯಾರಿಗೆ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿರುತ್ತದೋ ಅಂಥವರು ತುಳಸಿ ಗಿಡವನ್ನು ಛಾವಣಿ ಮೇಲೆ ಇರಿಸಿದ್ದರಂತೂ ದೊಡ್ಡ ಮಟ್ಟದ ಹಣಕಾಸು ನಷ್ಟವನ್ನು ಅನುಭವಿಸುತ್ತಾರೆ. ಏಕೆ ಹೀಗೆ ಅಂದರೆ, ಮನೆಯ ಛಾವಣಿ ಮೇಲೆ ಇಟ್ಟ ತುಳಸಿ ಗಿಡವನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ. ಆದ್ದರಿಂದ ಆ ಗಿಡ ಒಣಗುವ, ಹಾಳಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಸಲ ಪಕ್ಷಿಗಳು ಗಲೀಜು ಮಾಡುವ ಅವಕಾಶಗಳಿರುತ್ತದೆ. ಇದು ಆ ಮನೆಗೆ ಒಳ್ಳೆ ಸೂಚನೆ ಅಲ್ಲ. ಇನ್ನು ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಸಹ ಇಡಬಾರದು. ಹೀಗೆ ಇಡುವುದರಿಂದ ವ್ಯಾಪಾರ- ವ್ಯವಹಾರದಲ್ಲಿ ನಷ್ಟವಾಗುತ್ತದೆ, ಆ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಎಲ್ಲಿರಬೇಕು ತುಳಸಿ ಗಿಡ?
ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ಈಶಾನ್ಯಕ್ಕೆ ಮುಖ ಮಾಡಿದಂತೆ ಇಡಬೇಕು. ಇದನ್ನು ಹೊರತುಪಡಿಸಿದಂತೆ ಪಶ್ಚಿಮ ದಿಕ್ಕಿನಲ್ಲಿ ಸಹ ಇಡಬಹುದು. ಈ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ಇನ್ನು ತುಳಸಿ ಎಲೆಯನ್ನು ಅಗೆದು ತಿನ್ನಬಾರದು. ಗಂಟಲಿನಲ್ಲಿ ಇರಿಸಿಕೊಂಡು, ನುಂಗಬೇಕು. ತುಳಸಿ ದಳವನ್ನು ಮೊಸರಿನೊಂದಿಗೆ ಬೆರೆಸಿ, ಸೇವಿಸಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಡೀ ದಿನ ಚೈತನ್ಯ ಕಾಯ್ದುಕೊಳ್ಳಬಹುದು.
ಪ್ರತಿ ದಿನ ತುಳಸಿ ಪೂಜೆ ಮಾಡುವುದರಿಂದ ಮನೆಯ ಕುಟುಂಬ ಸದಸ್ಯರಲ್ಲಿನ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ. ಇನ್ನು ಅಡುಗೆ ಮನೆಯ ಬಳಿ ತುಳಸಿ ಗಿಡ ಇದ್ದಲ್ಲಿ ಕುಟುಂಬ ಸದಸ್ಯರ ಮಧ್ಯೆ ಪ್ರೀತಿ- ಸೌಹಾರ್ದ ಹೆಚ್ಚಾಗುತ್ತದೆ. ಅಂದ ಹಾಗೆ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಸರಿಯಾದ ಸ್ಥಳದಲ್ಲಿ ಇಟ್ಟಿದ್ದೀರಿ ತಾನೆ?
ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?