AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಗುರುವಾದ ಕ್ಯಾಪ್ಟನ್ ಕೊಹ್ಲಿ

ಕನ್ನಡಿಗ ದೇವದತ್ ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್, ಆರ್​ಸಿಬಿ ತಂಡದ ಎರಡು ಗೆಲುವಿಗೆ ಪ್ರಮುಖ ಕಾರಣವಾಗಿದೆ. ಯಾಕಂದ್ರೆ ಎರಡೂ ಪಂದ್ಯದಲ್ಲೂ ಪಡಿಕ್ಕಲ್ ಆರಂಭಿಕನಾಗಿ ಎರಡು ಅರ್ಧಶತಕ ಸಿಡಿಸಿ, ಆರ್​ಸಿಬಿ ಗೆಲುವಿನ ರೂವಾರಿಗಳಲ್ಲಿ ಒಬ್ಬನಾಗಿ ಮಿಂಚಿದ್ದಾನೆ. ಆರ್​ಸಿಬಿ ಪರ ಇನ್ನು ಮುಂದಿನ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್, ಇನ್ನು ಹೆಚ್ಚಿನ ಕೊಡುಗೆ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕೇ ಅಂತೀರಾ. ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ, ಪಡಿಕ್ಕಲ್​ಗೆ ಕೋಚ್ ಆಗಿ ಪಾಠ ಹೇಳಿಕೊಡ್ತಿದ್ದಾರೆ. ನಿಜ.. ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹಸನ್, ತಂಡದಲ್ಲಿ […]

ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಗುರುವಾದ ಕ್ಯಾಪ್ಟನ್ ಕೊಹ್ಲಿ
Follow us
ಆಯೇಷಾ ಬಾನು
|

Updated on: Oct 02, 2020 | 8:43 AM

ಕನ್ನಡಿಗ ದೇವದತ್ ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್, ಆರ್​ಸಿಬಿ ತಂಡದ ಎರಡು ಗೆಲುವಿಗೆ ಪ್ರಮುಖ ಕಾರಣವಾಗಿದೆ. ಯಾಕಂದ್ರೆ ಎರಡೂ ಪಂದ್ಯದಲ್ಲೂ ಪಡಿಕ್ಕಲ್ ಆರಂಭಿಕನಾಗಿ ಎರಡು ಅರ್ಧಶತಕ ಸಿಡಿಸಿ, ಆರ್​ಸಿಬಿ ಗೆಲುವಿನ ರೂವಾರಿಗಳಲ್ಲಿ ಒಬ್ಬನಾಗಿ ಮಿಂಚಿದ್ದಾನೆ.

ಆರ್​ಸಿಬಿ ಪರ ಇನ್ನು ಮುಂದಿನ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್, ಇನ್ನು ಹೆಚ್ಚಿನ ಕೊಡುಗೆ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕೇ ಅಂತೀರಾ. ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ, ಪಡಿಕ್ಕಲ್​ಗೆ ಕೋಚ್ ಆಗಿ ಪಾಠ ಹೇಳಿಕೊಡ್ತಿದ್ದಾರೆ.

ನಿಜ.. ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹಸನ್, ತಂಡದಲ್ಲಿ ಹೊಸದೊಂದು ನಿಯಮ ತಂದಿದ್ದಾರೆ. ಅದೇ ಮೆಂಟರ್​ಶಿಪ್ ಪ್ರೊಗ್ರಾಮ್. ಅಂದ್ರೆ ತಂಡದಲ್ಲಿರೋ ಹಿರಿಯ ಕ್ರಿಕೆಟಿಗರು, ತಮ್ಮ ಅನುಭವವನ್ನ ಯುವ ಕ್ರಿಕೆಟಿಗರಿಗೆ ಧಾರೆಯೆರೆದು ಅವರನ್ನ ಬೆಳೆಸೋದು. ಈ ಮೆಂಟರ್​ಶಿಪ್ ಪ್ರೋಗ್ರಾಮ್​ನಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಜೊತೆಯಾಗಿದ್ದು ನಮ್ಮ ಹೆಮ್ಮೆಯ ಕನ್ನಡಿಗ ದೇವದತ್ ಪಡಿಕ್ಕಲ್.

ದೇವದತ್ ಪಡಿಕ್ಕಲ್​ಗೆ ಕೊಹ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ. ಪಡಿಕ್ಕಲ್​ಗೂ ವೈಯಕ್ತಿಕ ಮಾರ್ಗದರ್ಶಕರಿಲ್ಲ. ಇಬ್ಬರು ಆರಂಭಿಕರಾಗಿ ಯಶಸ್ಸು ಕಂಡವರೆ ಆಗಿದ್ದಾರೆ. ಇದು ಪಡಿಕ್ಕಲ್​​ಗೆ ನೆರವಾಗಲಿದೆ ಎಂದು ಮೈಕ್ ಹಸನ್ ಹೇಳಿದ್ದರೆ.

ನಿಜಕ್ಕೂ ಇದೊಂದು ಅದ್ಭುತವಾದ ಐಡಿಯಾ. ಈಗಾಗಲೇ ಫುಟ್ಬಾಲ್ ಪಂದ್ಯಗಳಲ್ಲಿ ಈ ಐಡಿಯಾ ಯಶಸ್ಸು ಕಂಡಿದೆ. ಹೀಗಾಗಿ ಆರ್​ಸಿಬಿ ತಂಡದ ಹೆಡ್ ಕೋಚ್ ಸೈಮನ್ ಕಾಟಿಚ್, ಈ ಪ್ರೋಗ್ರಾಮ್ ಅನ್ನ ಆರ್​ಸಿಬಿ ತಂಡದಲ್ಲೂ ತಂದಿದ್ದಾರೆ.

ಈ ಮೆಂಟರ್​ಶಿಪ್ ಪ್ರೊಗ್ರಾಮ್ ಈಗಾಗಲೇ ಆರ್​ಸಿಬಿ ಆಟಗಾರರು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ, ನಿನ್ನೆ ದಿನವಿಡಿ ದೇವದತ್ ಪಡಿಕ್ಕಲ್ ಜೊತೆಯೆ ಪ್ರಾಕ್ಟೀಸ್ ಮಾಡಿದ್ದಾರೆ. ಪಡಿಕ್ಕಲ್​​ಗೆ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ.

ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್​ನಲ್ಲಿ ಆರ್​ಸಿಬಿಗೆ ಗೆಲುವು ತಂದು ಕೊಟ್ಟ ನವದೀಪ್ ಸೈನಿಗೆ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಮೆಂಟರ್ ಆಗಿದ್ದಾರೆ. ಹೀಗಾಗಿ ಸೈನಿಗೆ ಸ್ಟೇನ್, ತಮ್ಮ ಅನುಭವವನ್ನ ಧಾರೆಯೆರೆಯುತ್ತಿದ್ದಾರೆ.

ಮುಂಬೈ ವಿರುದ್ಧ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿರೋ ಆರ್​ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಬಂದಿದೆ. ಹೀಗಾಗಿ ಕೋಚಿಂಗ್ ಸ್ಟಾಫ್ ತಂಡದಲ್ಲಿ ಮೆಂಟರ್​ಶಿಪ್ ಪ್ರೋಗ್ರಾಮ್ ಜಾರಿಗೆ ತಂದಿದೆ. ಆ ಮೂಲಕ ಇನ್ನು ಉತ್ತಮ ಪ್ರದರ್ಶನ ಹೊರ ತಗೆಯೋದಕ್ಕೆ ಮುಂದಾಗಿರೋ ಆರ್​ಸಿಬಿ ಕೋಚಿಂಗ್ ಸ್ಟಾಫ್​ಗೆ ಯಶಸ್ಸು ಸಿಗುತ್ತೆ ಅನ್ನೋ ನಂಬಿಕೆ ಅಭಿಮಾನಿಗಳಿಗೂ ಇದೆ.

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು