AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Crime: 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ್ರು..

ಬೆಂಗಳೂರು: ಕೊರೊನಾದಿಂದಾಗಿ ಆಚೆ ಹೋಗಲಾಗದೆ ಮನೆಯಲ್ಲೇ ಕೂತಿರುವ ಮಂದಿ ಆನ್​ಲೈನ್ ಮೊರೆ ಹೋಗಿದ್ದಾರೆ. ಆಚೆ ಹೋಗಿ ಸೋಂಕು ತಗುಲಿಸಿಕೊಳ್ಳುವುದೇಕೆ ಎಂದು ಬಹುತೇಕರು ಬಟ್ಟೆ, ಊಟ ಎಲ್ಲವನ್ನೂ ಆನ್​ಲೈನ್​ನಲ್ಲೆ ಬುಕ್ ಮಾಡಿ ಖರೀದಿಸುತ್ತಿದ್ದಾರೆ. ಆದರೆ ಇದರ ನಡುವೆ ದಿನದಿಂದ ದಿನಕ್ಕೆ ಸೈಬರ್ ಖದೀಮರ ಹಾವಳಿ ಹೆಚ್ಚಾಗ್ತಿದೆ. ಆನ್​ಲೈನ್ ಶಾಪಿಂಗ್ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಮಹಿಳೆಯೊಬ್ಬರು 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ರಿಂಕಿ ಠಾಕೂರ್ ಎಂಬುವವರು ಕ್ಲಬ್ ಫ್ಯಾಕ್ಟರಿಯಲ್ಲಿ […]

Cyber Crime: 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ್ರು..
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
| Edited By: |

Updated on:Jul 28, 2020 | 12:22 PM

Share

ಬೆಂಗಳೂರು: ಕೊರೊನಾದಿಂದಾಗಿ ಆಚೆ ಹೋಗಲಾಗದೆ ಮನೆಯಲ್ಲೇ ಕೂತಿರುವ ಮಂದಿ ಆನ್​ಲೈನ್ ಮೊರೆ ಹೋಗಿದ್ದಾರೆ. ಆಚೆ ಹೋಗಿ ಸೋಂಕು ತಗುಲಿಸಿಕೊಳ್ಳುವುದೇಕೆ ಎಂದು ಬಹುತೇಕರು ಬಟ್ಟೆ, ಊಟ ಎಲ್ಲವನ್ನೂ ಆನ್​ಲೈನ್​ನಲ್ಲೆ ಬುಕ್ ಮಾಡಿ ಖರೀದಿಸುತ್ತಿದ್ದಾರೆ. ಆದರೆ ಇದರ ನಡುವೆ ದಿನದಿಂದ ದಿನಕ್ಕೆ ಸೈಬರ್ ಖದೀಮರ ಹಾವಳಿ ಹೆಚ್ಚಾಗ್ತಿದೆ.

ಆನ್​ಲೈನ್ ಶಾಪಿಂಗ್ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಮಹಿಳೆಯೊಬ್ಬರು 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ರಿಂಕಿ ಠಾಕೂರ್ ಎಂಬುವವರು ಕ್ಲಬ್ ಫ್ಯಾಕ್ಟರಿಯಲ್ಲಿ ಆನ್​ಲೈನ್ ಮೂಲಕ ಬಟ್ಟೆ ಬುಕ್ ಮಾಡಿದ್ದರು. ಈ ವೇಳೆ ಆಕೆ ಬುಕ್ ಮಾಡಿದ್ದ ಎಲ್ಲದಕ್ಕೂ ಸಕ್ಸಸ್ ಫುಲ್ ಎಂಬ ಮೆಸೇಜ್ ಬಂದಿತ್ತು. ಒಂದು ವಾರದ ನಂತರ ಬಟ್ಟೆ ಡಿಲವರಿ ಆಗಿದೆ ಎಂದು ಮೆಸೆಜ್ ಬಂದಿದೆ. ಆದರೆ ಚೆಕ್ ಮಾಡಿದಾಗ ಬುಕ್ ಮಾಡಿದ್ದ ಬಟ್ಟೆಯೊಂದು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ರಿಂಕಿ ಠಾಕೂರ್ ಕಸ್ಟಮರ್ ಕೇರ್​ಗೆ ಕರೆ ಮಾಡಿದ್ದಾರೆ.

ಅಕೌಂಟ್​ನಲ್ಲಿದ್ದ ಹಣ ಮಂಗಮಾಯ ಆಗ ವ್ಯಕ್ತಿಯೋರ್ವ ನಿಮ್ಮ ಹಣ ರೀಫಂಡ್ ಆಗುತ್ತೆ ಅಂದಿದ್ದಾನೆ. ರೀಫಂಡ್​ಗಾಗಿ ನಿಮ್ಮ ಕೆಲ ಡೀಟೇಲ್ಸ್ ಹಾಕಬೇಕು ಇದು ಕ್ಲಬ್ ಫ್ಯಾಕ್ಟರಿಯಲ್ಲಿರುವ ಪ್ರೊಸೀಜರ್ ಅಂದಿದ್ದಾನೆ. ಇದಕ್ಕೆ ಒಪ್ಪಿದ್ದ ರಿಂಕಿ ಠಾಕೂರ್, ಡೀಟೇಲ್ಸ್ ಹಾಕಲು ಮುಂದಾಗಿದ್ದಾರೆ. ಎನಿ ಡೆಸ್ಕ್ ಡೌನ್​ಲೌಡ್ ಮಾಡಿಕೊಳ್ಳಿ ನಿಮ್ಮ ಅಕೌಂಟಾ ನಂಬರ್ ಕೇಳುತ್ತೆ ಅದನ್ನು ಹಾಕಿ ಎಂದಿದ್ದಾರೆ.

ವ್ಯಕ್ತಿ ಹೇಳಿದ ಮಾತನ್ನು ಕೇಳಿದ ರಿಂಕಿ ಠಾಕೂರ್ ಅಕೌಂಟ್ ನಂಬರ್ ಹಾಕುತ್ತಿದ್ದಂತೆ ಖಾತೆಯಲ್ಲಿದ್ದ ಎಲ್ಲಾ ಹಣ ಮಾಯವಾಗಿದೆ. ಅಕೌಂಟ್ ಹ್ಯಾಕ್ ಮಾಡಿ ಖದೀಮರು ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

Published On - 9:48 am, Tue, 28 July 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್