AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮೋನುಗಳ ಬದಲಾವಣೆಯಿಂದ ತ್ವಚೆಯ ಕಾಂತಿ ಕಡಿಮೆಯಾಗುತ್ತಾ?

ನಿಮ್ಮ ಚರ್ಮವು ಎಣ್ಣೆಯುಕ್ತ, ಶುಷ್ಕ ಅಥವಾ ಎರಡರ ಸಂಯೋಜನೆಯೂ ಆಗಿರಬಹುದು. ಇದಕ್ಕೆ ತಕ್ಕಂತೆ ನಿಮ್ಮ ತ್ವಚೆಯ ಆರೈಕೆಯನ್ನು ರೂಢಿಸಿಕೊಳ್ಳಿ. ಯುವಿ ವಿಕಿರಣವು ಚರ್ಮದ ವಯಸ್ಸಾಗುವ ವೇಗವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಹಾರ್ಮೋನುಗಳ ಬದಲಾವಣೆಯಿಂದ ತ್ವಚೆಯ ಕಾಂತಿ ಕಡಿಮೆಯಾಗುತ್ತಾ?
ಚರ್ಮದ ಆರೋಗ್ಯImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 23, 2023 | 1:58 PM

ಚರ್ಮದ ಆರೋಗ್ಯದ ಬಗ್ಗೆ ಹೆಣ್ಣುಮಕ್ಕಳು ಮಾತ್ರವಲ್ಲದ ಗಂಡಸರೂ ಕಾಳಜಿ ವಹಿಸಬೇಕಾದುದು ಅಗತ್ಯ. ಚರ್ಮ ಆರೋಗ್ಯವಾಗಿರಲು ಯಥೇಚ್ಛವಾಗಿ ನೀರು ಕುಡಿಯಬೇಕು, ಉತ್ತಮ ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಸಮತೋಲಿತ ಆಹಾರವು ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ಇದು ಚರ್ಮದ ಆರೋಗ್ಯಕ್ಕೂ ಬಹಳ ಮುಖ್ಯ. ಒಮೆಗಾ -3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್​ಗಳು ಕಾಲಜನ್ ಉತ್ಪಾದನೆ ಮತ್ತು ಚರ್ಮದ ಚೈತನ್ಯಕ್ಕೆ ನಿರ್ಣಾಯಕವಾಗಿವೆ. ಅದಕ್ಕೆ ತಕ್ಕಂತೆ ನಿಮ್ಮ ಆಹಾರಕ್ರಮವನ್ನು ರೂಪಿಸಿಕೊಳ್ಳಿ. ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳಲ್ಲಿ ಸಾಲ್ಮನ್, ಚಿಯಾ ಸೀಡ್ಸ್​ ಮತ್ತು ವಾಲ್‌ನಟ್ಸ್ ಸೇರಿವೆ. ಉತ್ಕರ್ಷಣ ನಿರೋಧಕಗಳು ಮತ್ತು  ವಿಟಮಿನ್ ಸಿ ಹೊಂದಿರುವ ಬೆರಿಹಣ್ಣುಗಳು ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳನ್ನು ಸೇವಿಸಿ.

ನಿಮ್ಮ ಚರ್ಮವು ಎಣ್ಣೆಯುಕ್ತ, ಶುಷ್ಕ ಅಥವಾ ಎರಡರ ಸಂಯೋಜನೆಯೂ ಆಗಿರಬಹುದು. ಇದಕ್ಕೆ ತಕ್ಕಂತೆ ನಿಮ್ಮ ತ್ವಚೆಯ ಆರೈಕೆಯನ್ನು ರೂಢಿಸಿಕೊಳ್ಳಿ. ಯುವಿ ವಿಕಿರಣವು ಚರ್ಮದ ವಯಸ್ಸಾಗುವ ವೇಗವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. UV ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಮರೆಯದಿರಿ.

ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನುಗಳು ಮೊಡವೆ ಒಡೆಯುವಿಕೆಯನ್ನು ಪ್ರಚೋದಿಸಬಹುದು. ತ್ವಚೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಚರ್ಮದ ಮೇಲೆ ಬ್ಯಾಕ್ಟೀರಿಯಾ ಉಂಟಾಗಬಹುದು. ಇದು ಮೊಡವೆಗಳನ್ನು ಉಂಟುಮಾಡುತ್ತದೆ. ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒತ್ತಡದಿಂದ ಉಂಟಾಗುವ ಮೊಡವೆಗಳನ್ನು ತಡೆಯಲು ಸಮಾಧಾನ, ಧ್ಯಾನ ಅಥವಾ ಯೋಗದಂತಹ ಒತ್ತಡವನ್ನು ನಿಯಂತ್ರಿಸುವ ತಂತ್ರಗಳನ್ನು ಅಭ್ಯಾಸ ಮಾಡಿ.

ಇದನ್ನೂ ಓದಿ: ಕಾಂತಿಯುತ ಚರ್ಮ ನಿಮ್ಮದಾಗಲು ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಹಾರ್ಮೋನುಗಳ ಬದಲಾವಣೆಗಳು ನಿಮ್ಮ ಚರ್ಮದ ರಚನೆಯ ಮೇಲೆ ಪರಿಣಾಮ ಬೀರುತ್ತವೆ. ಪ್ರೌಢಾವಸ್ಥೆಯಲ್ಲಿ ಈ ಬದಲಾವಣೆಗಳು ತ್ವಚೆಯಲ್ಲಿ ಎಣ್ಣೆ ಉತ್ಪಾದನೆ ಮತ್ತು ಮೊಡವೆಗಳ ಮೇಲೆ ಪರಿಣಾಮ ಬೀರಬಹುದು. ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಬಳಸಿ, ಹಗುರಾದ ಮತ್ತು ದೇಹದ ಭಾಗಗಳನ್ನು ಮುಚ್ಚುವ ಉಡುಪುಗಳನ್ನು ಧರಿಸಿ. ಹಾಗೇ, ಚರ್ಮದ ಆರೋಗ್ಯ ಚೆನ್ನಾಗಿರಲು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಬಹಳ ಮುಖ್ಯ. ಹಗಲು ವೇಳೆಯಲ್ಲಿ ಮಾತ್ರವಲ್ಲ; ರಾತ್ರಿಯಲ್ಲೂ ನೀರು ಕುಡಿಯಲು ಮರೆಯಬೇಡಿ. ಬಾತ್​ರೂಂಗೆ ಪದೇಪದೆ ಹೋಗಬೇಕಾಗುತ್ತದೆ ಎಂದು ರಾತ್ರಿ ನೀರು ಕುಡಿಯುವುದನ್ನು ಕಡಿಮೆ ಮಾಡಿದರೆ ರಾತ್ರಿಯಿಂದ ಬೆಳಗಿನವರೆಗೂ ನಿಮ್ಮ ದೇಹ ಹೈಡ್ರೇಟ್ ಆಗಿರಲು ಸಾಧ್ಯವಾಗುವುದಿಲ್ಲ.

ನೀವು ರಾತ್ರಿಯಲ್ಲಿ ಮಲಗುವ ಮೊದಲು ನಿಮ್ಮ ದೇಹವನ್ನು ಸಂಪೂರ್ಣವಾಗಿ ಹೈಡ್ರೇಟ್ ಮಾಡಬೇಕು. ಏಕೆಂದರೆ, ನೀವು 6ರಿಂದ 8 ಗಂಟೆಗಳ ಕಾಲ ನಿದ್ರಿಸುತ್ತೀರಿ. ಮಧ್ಯದಲ್ಲಿ ಒಂದು ಲೋಟ ನೀರನ್ನು ಕುಡಿಯಲು ಕೂಡ ನಿಮಗೆ ಎಚ್ಚರವಾಗುವುದಿಲ್ಲ. ಆದ್ದರಿಂದ, ರಾತ್ರಿಯಿಂದ ಬೆಳಗಿನವರೆಗೂ ನಿಮ್ಮ ದೇಹ ಹೈಡ್ರೀಕರಿಸಲ್ಪಡುವುದಿಲ್ಲ. ಹೀಗಾಗಿ, ರಾತ್ರಿ ಮಲಗುವ ಮುನ್ನ ನೀರು ಕುಡಿದರೆ ನಿಮ್ಮ ದೇಹ ರಾತ್ರಿ ವೇಳೆ ಹೈಡ್ರೇಟ್ ಆಗಿರುತ್ತದೆ. ನೀವು ಮಲಗಿದಾಗ ನಿಮ್ಮ ದೇಹವು ದ್ರವದ ಅಂಶವನ್ನು ಕಳೆದುಕೊಳ್ಳುತ್ತದೆ. ನಿಮ್ಮ ನಿದ್ರೆಯಲ್ಲಿ ಕ್ಯಾಲೊರಿ ಬರ್ನ್ ಆಗುತ್ತಿರುತ್ತದೆ. ಅದಕ್ಕೆ ದೇಹ ನೀರನ್ನು ಬಳಸಿಕೊಳ್ಳುತ್ತದೆ.

ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ಚರ್ಮ ಏಕೆ ತುರಿಸುತ್ತದೆ? ತ್ವಚೆಯ ಕಾಳಜಿ ಹೇಗೆ?

ನಿಮ್ಮ ದೇಹವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ. ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆಯನ್ನು ಚೆನ್ನಾಗಿ ನಿಯಂತ್ರಿಸಬಹುದು. ಇದು ನಿಮ್ಮ ನಿದ್ರೆಯು ತೊಂದರೆಯಾಗದಂತೆ ಮತ್ತು ಆರಾಮದಾಯಕವಾಗಿ ಉಳಿಯಲು ಸಹಾಯ ಮಾಡುತ್ತದೆ. ನಿರ್ಜಲೀಕರಣವು ನಿಮ್ಮ ಚರ್ಮವು ಅದರ ಎಲ್ಲಾ ಜಲಸಂಚಯನ ಮತ್ತು ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ನಿಮ್ಮ ಮುಖದ ಮೇಲೆ ಕಲೆಗಳು, ಸುಕ್ಕುಗಳು ಮತ್ತು ಮೊಡವೆಗಳು ಉಂಟಾಗುವುದನ್ನು ತಡೆಯುತ್ತದೆ. ಮಲಗುವ ಮುನ್ನ ನೀರನ್ನು ಕುಡಿಯುವುದರಿಂದ ಚರ್ಮವನ್ನು ಮೃದುವಾಗಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು