AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್ ಮೀಡಿಯಾದಿಂದ ದೂರವಿದ್ದರೆ ಈ ಎಲ್ಲ ಲಾಭವಿದೆ

Social Media Addiction: ಈ ಸೋಷಿಯಲ್ ಮೀಡಿಯಾಗಳಿಂದ ನಮ್ಮ ಮನಸಿಗೆ ನೆಮ್ಮದಿ ಸಿಗುತ್ತದಾ? ಎಂದು ನೋಡಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿರುತ್ತದೆ. ಇತ್ತೀಚಿನ ಖಾಸಗಿ ವೆಬ್​ಸೈಟ್​​ನ ಸಮೀಕ್ಷೆಯಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಬಳಕೆದಾರರಿಗೆ ಹೇಗೆ ಅನಿಸುತ್ತದೆ ಎಂದು ಕೇಳಲಾಗಿತ್ತು. ಅದರಲ್ಲಿ ಶೇ. 25ರಷ್ಟು ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಶೇ. 53ರಷ್ಟು ಜನರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿತಗೊಳಿಸುವುದು ತಮ್ಮ ಮನಸಿನ ನೆಮ್ಮದಿಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಸೋಷಿಯಲ್ ಮೀಡಿಯಾದಿಂದ ದೂರವಿದ್ದರೆ ಈ ಎಲ್ಲ ಲಾಭವಿದೆ
Follow us
ಸುಷ್ಮಾ ಚಕ್ರೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 28, 2024 | 3:30 PM

ಸೋಷಿಯಲ್ ಮೀಡಿಯಾಗಳು ಬಂದಮೇಲೆ ಜನರ ಜೀವನವೇ ಬದಲಾಗಿಬಿಟ್ಟಿದೆ. ವೈಯಕ್ತಿಕ ವಿಷಯಗಳು ಈಗ ಸಾರ್ವಜನಿಕ ಚರ್ಚೆಯ ವಿಷಯಗಳಾಗುತ್ತಿವೆ. ಟ್ವಿಟ್ಟರ್, ಫೇಸ್​ಬುಕ್, ವಾಟ್ಸಾಪ್, ಇನ್​ಸ್ಟಾಗ್ರಾಂ, ಕೂ, ಟೆಲಿಗ್ರಾಂ, ರೀಲ್ಸ್ ಹೀಗೆ ನಾನಾ ರೀತಿಯ ಸಾಮಾಜಿಕ ಜಾಲತಾಣಗಳು ಮೊಬೈಲ್​ನಲ್ಲಿ ಸ್ಥಾನ ಪಡೆದಿವೆ. ದಿನದ ಬಹುತೇಕ ಸಮಯವನ್ನು ಸೋಷಿಯಲ್ ಮೀಡಿಯಾ ನೋಡುವುದರಲ್ಲೇ ಕಳೆಯುವ ಜನರಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಇಲ್ಲದ ಜಗತ್ತನ್ನು ನಾವು ಊಹೆ ಮಾಡಿಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ, ಈಗೊಂದು 10 ವರ್ಷಗಳ ಹಿಂದೆ ಈ ಸೋಷಿಯಲ್ ಮೀಡಿಯಾ (Social Media) ಬರುವುದಕ್ಕೂ ಮೊದಲು ನಾವು ಏನು ಮಾಡುತ್ತಿದ್ದೆವು? ಹೇಗೆ ಸಮಯ ಕಳೆಯುತ್ತಿದ್ದೆವು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ಈ ಸೋಷಿಯಲ್ ಮೀಡಿಯಾಗಳಿಂದ ಟೈಂ ಪಾಸ್ ಆಗುವುದಂತೂ ನಿಜ. ಆದರೆ, ಇದರಿಂದ ನಮ್ಮ ಮನಸಿಗೆ ನೆಮ್ಮದಿ ಸಿಗುತ್ತದಾ? ಎಂದು ನೋಡಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿರುತ್ತದೆ. ಇತ್ತೀಚಿನ ಖಾಸಗಿ ವೆಬ್​ಸೈಟ್​​ನ ಸಮೀಕ್ಷೆಯಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಬಳಕೆದಾರರಿಗೆ ಹೇಗೆ ಅನಿಸುತ್ತದೆ ಎಂದು ಕೇಳಲಾಗಿತ್ತು. ಅದರಲ್ಲಿ ಶೇ. 25ರಷ್ಟು ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಶೇ. 53ರಷ್ಟು ಜನರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿತಗೊಳಿಸುವುದು ತಮ್ಮ ಮನಸಿನ ನೆಮ್ಮದಿಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Pedicure Tips: ಸಲೂನ್​ಗಿಂತ ಚೆನ್ನಾಗಿ ಮನೆಯಲ್ಲೇ ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ?

ಹಾಗಾಗಿ, ಸಾಮಾಜಿಕ ಜಾಲತಾಣ ನಿಮ್ಮ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಲು 10 ದಿನಗಳ ಕಾಲ ಎಲ್ಲ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಅನ್​ಇನ್​ಸ್ಟಾಲ್ ಮಾಡಿ. ಆಗ ನಿಮ್ಮಲ್ಲಾಗುವ ಬದಲಾವಣೆ ನಿಮಗೇ ಗೊತ್ತಾಗುತ್ತದೆ. ಕೆಲವರಿಗೆ ಇದರಿಂದ ಮಾನಸಿಕ ಹಿಂಸೆ ಆಗಬಹುದು, ಇನ್ನು ಕೆಲವರಿಗೆ ಮಾನಸಿಕ ನೆಮ್ಮದಿಯೂ ಸಿಗಬಹುದು.

ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ನಿಮಗೆ ಒಂಟಿತನ, ಆತಂಕ, ಖಿನ್ನತೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಎದುರಾಗಬಹುದು.

ಹಾಗಾದರೆ, ಸೋಷಿಯಲ್ ಮೀಡಿಯಾದ ಬದಲು ಬೇರೆ ಯಾವುದರಿಂದ ನಮ್ಮ ಸಮಯವನ್ನು ಕಳೆಯಬಹುದು? ನೀವು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟಿವ್ ಎಂಬುದಕ್ಕಿಂತಲೂ ನಿಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದು ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಕ್ರಾಲ್ ಮಾಡುತ್ತಾ ಕೂರುವ ಬದಲು ಸಮಯ ಸಿಕ್ಕಾಗ ಹೊರಗೆಲ್ಲ ಸಣ್ಣದೊಂದು ವಾಕ್ ಮಾಡಿ. ಸ್ವಲ್ಪ ಸಂಗೀತವನ್ನು ಹಾಕಿಕೊಂಡು ಕುಳಿತುಕೊಳ್ಳಿ. ಸಂಜೆಯ ಬಳಿಕ ಕ್ಯಾಂಡಲ್​ಗಳನ್ನು ಹಚ್ಚಿಕೊಂಡು ಸುಮ್ಮನೇ ಕುಳಿತುಕೊಳ್ಳಿ. ಬಿಡುವು ಸಿಕ್ಕಾಗ ಒಳ್ಳೆಯ ಪುಸ್ತಕಗಳನ್ನು ಓದಿ.

ಇದನ್ನೂ ಓದಿ: ನಾನ್​ಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ?

ಅದೂ ಬೋರ್ ಎನಿಸಿದರೆ ಅಡುಗೆ ಮನೆಗೆ ಹೋಗಿ ರುಚಿಕರವಾದ ಅಡುಗೆ ತಯಾರಿಸಿ. ಯೋಗ ಅಥವಾ ಧ್ಯಾನ ಮಾಡಲು ಪ್ರಯತ್ನಿಸಿ. ಚಹಾ, ಕಾಫಿ ಅಥವಾ ಹಾಟ್ ಚಾಕೊಲೇಟ್‌ನಂತಹ ಹಿತವಾದ, ಬಿಸಿ ಪಾನೀಯವನ್ನು ಕುಡಿಯಿರಿ. ಹಳೆಯ ಫೋಟೋಗಳನ್ನು ನೋಡಿ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಸಮಯ ಸಿಕ್ಕಾಗ ಹಳೆಯ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಕರೆ ಮಾಡಿ. ಫ್ರೆಂಡ್ಸ್ ಜೊತೆ ಊಟ ಮಾಡಿ. ತರಕಾರಿ, ಹಣ್ಣು, ದಿನಸಿಯನ್ನು ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಬದಲು ನೀವೇ ನೇರವಾಗಿ ಹೋಗಿ ಖರೀದಿ ಮಾಡಿ. ಆಗ ನಿಮಗೂ ಟೈಂ ಪಾಸ್ ಆಗುತ್ತದೆ, ಒಳ್ಳೆಯ ತರಕಾರಿಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.

ಇದರಿಂದ ನಿಮ್ಮ ಮನಸಿಗೆ ನೆಮ್ಮದಿ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆಗಾಗ ಸೋಷಿಯಲ್ ಮೀಡಿಯಾದಿಂದ ಈ ರೀತಿಯ ಬ್ರೇಕ್ ತೆಗೆದುಕೊಳ್ಳದಿದ್ದರೆ ಅದೇ ಹುಚ್ಚಾಗಿ ಅಂಟಿಕೊಳ್ಳಬಹುದು ಎಚ್ಚರ! ಇದನ್ನೂ ಓದಿ:

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್