AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ

ಸಂಜೆಯ ಕಾಫಿ ಟೀಗೆ ಏನಾದ್ರೂ ಸ್ನಾಕ್ಸ್ ಇದ್ದರೆ ಅದರ ಮಜಾನೇ ಬೇರೆ. ಈ ಹವಾಮಾನ ಬದಲಾವಣೆಯಿಂದಾಗಿ ಸಂಜೆಯ ಹೊತ್ತಿನಲ್ಲಿ ಏನಾದರೂ ತಿನ್ನುವ ಬಯಕೆಯು ಸಹಜವಾಗಿಯೇ ಆಗುತ್ತದೆ. ಹೀಗಾಗಿ ಬಿಸಿ ಬಿಸಿಯಾಗಿ ಏನಾದರೂ ಮಾಡಿಕೊಂಡು ತಿಂದು ಬಿಟ್ಟರೆ, ಬಾಯಿಗೆ ಮಾತ್ರವಲ್ಲ ಮನಸ್ಸಿಗೂ ಆನಂದ. ಈ ಚಳಿಗಾಲದಲ್ಲಿ ಸಂಜೆ ಕಾಫಿ ಜೊತೆಗೆ ಏನಾದರೂ ತಿನ್ನೋಣ ಎಂದುಕೊಂಡವರು ಚಿಕನ್ ಈರುಳ್ಳಿ ಪಕೋಡವನ್ನು ಮಾಡಿ ಸವಿಯಬಹುದು. ಸಿಂಪಲ್ ರೆಸಿಪಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ
ಸಾಯಿನಂದಾ
| Edited By: |

Updated on: Jan 16, 2024 | 1:44 PM

Share

ಈರುಳ್ಳಿ ಪಕೋಡ ಅಥವಾ ಈರುಳ್ಳಿ ಪಕೋರವನ್ನು ಕೇಳಿರಬಹುದು. ಮಳೆಗಾಲವಿರಲಿ, ಚಳಿಗಾಲವಿರಲಿ ಈಗಾಗಲೇ ಈ ಈರುಳ್ಳಿ ಪಕೋಡವನ್ನು ಮನೆಯಲ್ಲಿ ಮಾಡಿ ಸವಿದಿದ್ದೀರಿ. ಆದರೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ ಏನಾದರೂ ತಿನ್ನುವ ಅನಿಸಿದರೆ ಚಿಕನ್ ಈರುಳ್ಳಿ ಪಕೋಡ ಟ್ರೈ ಮಾಡಬಹುದು. ಮನೆಯಲ್ಲಿಯೇ ಇರುವ ಸಾಮಗ್ರಿಗಳಿಂದ ಈ ಸಿಂಪಲ್ ಚಿಕನ್ ಈರುಳ್ಳಿ ಪಕೋಡವನ್ನು ಸುಲಭವಾಗಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

200 ಗ್ರಾಂ ನಷ್ಟು ಚಿಕನ್ (ಬೋನ್‌ಲೆಸ್), 100 ಗ್ರಾಂನಷ್ಟು ಸಣ್ಣದಾಗಿ ಕತ್ತರಿಸಿದ ಈರುಳ್ಳಿ ರಿಂಗ್‌ಗಳು, ಕತ್ತರಿಸಿದ ನಾಲ್ಕು ಹಸಿಮೆಣಸು, 2 ಎಸಳು ಕೊತ್ತಂಬರಿ ಸೊಪ್ಪು, ಒಂದು ಕಪ್ ನಷ್ಟು ಕಡಲೆ ಹಿಟ್ಟು, ಒಂದು ಚಮಚ ಕಬಾಬ್ ಮಸಾಲಾ, ಅರ್ಧ ಚಮಚ ಫೆನ್ನಲ್ ಬೀಜಗಳು, ರುಚಿಗೆ ತಕ್ಕಷ್ಟು ಉಪ್ಪು, ಮೂರು ಕಪ್ ಎಣ್ಣೆ.

ಇದನ್ನೂ ಓದಿ: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ 

ಚಿಕನ್ ಈರುಳ್ಳಿ ಪಕೋಡ ಮಾಡುವ ವಿಧಾನ:

* ಕಡಲೆಹಿಟ್ಟನ್ನು ನೀರು, ಉಪ್ಪು ಹಾಗೂ ಕಬಾಬ್ ಮಸಾಲಾದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.

* ಈ ಮಿಶ್ರಣಕ್ಕೆ ಹಸಿಮೆಣಸು, ಫೆನ್ನಲ್ ಬೀಜ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ.

* ಕೊನೆಯದಾಗಿ ಚಿಕನ್ ತುಂಡುಗಳು ಹಾಗೂ ಈರುಳ್ಳಿ ರಿಂಗ್ ಅನ್ನು ಕಡಲೆ ಹಿಟ್ಟಿಗೆ ಹಾಕಿ ಕಲಸಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ.

* ಇನ್ನೊಂದೆಡೆ ಸ್ಟವ್ ನಲ್ಲಿ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ ಅದನ್ನು ಬಿಸಿಯಾಗಲು ಬಿಡಿ.

* ಎಣ್ಣೆ ಕಾದಂತೆ ಹಿಟ್ಟಿನಲ್ಲಿ ಮಿಕ್ಸ್ ಆಗಿರುವ ಚಿಕನ್ ತುಂಡುಗಳು ಮತ್ತು ಈರುಳ್ಳಿ ರಿಂಗ್ ಅನ್ನು ಎಣ್ಣೆಯಲ್ಲಿ ಬಿಡಿ.

* ಪಕೋಡಾವು ಚಿನ್ನ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ತಿವಿರಿ ಹಾಕುತ್ತಾ ಇರಿ. ಕಂದು ಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ತೆಗೆದು, ಸಂಜೆಯ ಕಾಫಿ ಅಥವಾ ಟೀಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್