AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ

ಸಂಜೆಯ ಕಾಫಿ ಟೀಗೆ ಏನಾದ್ರೂ ಸ್ನಾಕ್ಸ್ ಇದ್ದರೆ ಅದರ ಮಜಾನೇ ಬೇರೆ. ಈ ಹವಾಮಾನ ಬದಲಾವಣೆಯಿಂದಾಗಿ ಸಂಜೆಯ ಹೊತ್ತಿನಲ್ಲಿ ಏನಾದರೂ ತಿನ್ನುವ ಬಯಕೆಯು ಸಹಜವಾಗಿಯೇ ಆಗುತ್ತದೆ. ಹೀಗಾಗಿ ಬಿಸಿ ಬಿಸಿಯಾಗಿ ಏನಾದರೂ ಮಾಡಿಕೊಂಡು ತಿಂದು ಬಿಟ್ಟರೆ, ಬಾಯಿಗೆ ಮಾತ್ರವಲ್ಲ ಮನಸ್ಸಿಗೂ ಆನಂದ. ಈ ಚಳಿಗಾಲದಲ್ಲಿ ಸಂಜೆ ಕಾಫಿ ಜೊತೆಗೆ ಏನಾದರೂ ತಿನ್ನೋಣ ಎಂದುಕೊಂಡವರು ಚಿಕನ್ ಈರುಳ್ಳಿ ಪಕೋಡವನ್ನು ಮಾಡಿ ಸವಿಯಬಹುದು. ಸಿಂಪಲ್ ರೆಸಿಪಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ
ಸಾಯಿನಂದಾ
| Edited By: |

Updated on: Jan 16, 2024 | 1:44 PM

Share

ಈರುಳ್ಳಿ ಪಕೋಡ ಅಥವಾ ಈರುಳ್ಳಿ ಪಕೋರವನ್ನು ಕೇಳಿರಬಹುದು. ಮಳೆಗಾಲವಿರಲಿ, ಚಳಿಗಾಲವಿರಲಿ ಈಗಾಗಲೇ ಈ ಈರುಳ್ಳಿ ಪಕೋಡವನ್ನು ಮನೆಯಲ್ಲಿ ಮಾಡಿ ಸವಿದಿದ್ದೀರಿ. ಆದರೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ ಏನಾದರೂ ತಿನ್ನುವ ಅನಿಸಿದರೆ ಚಿಕನ್ ಈರುಳ್ಳಿ ಪಕೋಡ ಟ್ರೈ ಮಾಡಬಹುದು. ಮನೆಯಲ್ಲಿಯೇ ಇರುವ ಸಾಮಗ್ರಿಗಳಿಂದ ಈ ಸಿಂಪಲ್ ಚಿಕನ್ ಈರುಳ್ಳಿ ಪಕೋಡವನ್ನು ಸುಲಭವಾಗಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

200 ಗ್ರಾಂ ನಷ್ಟು ಚಿಕನ್ (ಬೋನ್‌ಲೆಸ್), 100 ಗ್ರಾಂನಷ್ಟು ಸಣ್ಣದಾಗಿ ಕತ್ತರಿಸಿದ ಈರುಳ್ಳಿ ರಿಂಗ್‌ಗಳು, ಕತ್ತರಿಸಿದ ನಾಲ್ಕು ಹಸಿಮೆಣಸು, 2 ಎಸಳು ಕೊತ್ತಂಬರಿ ಸೊಪ್ಪು, ಒಂದು ಕಪ್ ನಷ್ಟು ಕಡಲೆ ಹಿಟ್ಟು, ಒಂದು ಚಮಚ ಕಬಾಬ್ ಮಸಾಲಾ, ಅರ್ಧ ಚಮಚ ಫೆನ್ನಲ್ ಬೀಜಗಳು, ರುಚಿಗೆ ತಕ್ಕಷ್ಟು ಉಪ್ಪು, ಮೂರು ಕಪ್ ಎಣ್ಣೆ.

ಇದನ್ನೂ ಓದಿ: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ 

ಚಿಕನ್ ಈರುಳ್ಳಿ ಪಕೋಡ ಮಾಡುವ ವಿಧಾನ:

* ಕಡಲೆಹಿಟ್ಟನ್ನು ನೀರು, ಉಪ್ಪು ಹಾಗೂ ಕಬಾಬ್ ಮಸಾಲಾದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.

* ಈ ಮಿಶ್ರಣಕ್ಕೆ ಹಸಿಮೆಣಸು, ಫೆನ್ನಲ್ ಬೀಜ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ.

* ಕೊನೆಯದಾಗಿ ಚಿಕನ್ ತುಂಡುಗಳು ಹಾಗೂ ಈರುಳ್ಳಿ ರಿಂಗ್ ಅನ್ನು ಕಡಲೆ ಹಿಟ್ಟಿಗೆ ಹಾಕಿ ಕಲಸಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ.

* ಇನ್ನೊಂದೆಡೆ ಸ್ಟವ್ ನಲ್ಲಿ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ ಅದನ್ನು ಬಿಸಿಯಾಗಲು ಬಿಡಿ.

* ಎಣ್ಣೆ ಕಾದಂತೆ ಹಿಟ್ಟಿನಲ್ಲಿ ಮಿಕ್ಸ್ ಆಗಿರುವ ಚಿಕನ್ ತುಂಡುಗಳು ಮತ್ತು ಈರುಳ್ಳಿ ರಿಂಗ್ ಅನ್ನು ಎಣ್ಣೆಯಲ್ಲಿ ಬಿಡಿ.

* ಪಕೋಡಾವು ಚಿನ್ನ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ತಿವಿರಿ ಹಾಕುತ್ತಾ ಇರಿ. ಕಂದು ಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ತೆಗೆದು, ಸಂಜೆಯ ಕಾಫಿ ಅಥವಾ ಟೀಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್