AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre: ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲಲಾಗುತ್ತದೆ! ಯಾಕೆ ಗೊತ್ತಾ?

ಪ್ರತಿಯೊಬ್ಬ ಪೋಷಕರು ತಮಗೆ ಜನಿಸಿದ ಮಗು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಭಾರತದ ಈ ಒಂದು ನೆಲದಲ್ಲಿ ಬಿಳಿ ಮಗು ಶಾಪವಂತೆ! ಅವಿವಾಹಿತ ಅಥವಾ ವಿಧವೆಗೆ ಬಿಳಿ ಮಗು ಜನಿಸಿದರೆ ಆ ಮಗುವನ್ನು ಕೊಲ್ಲಾಗುತ್ತದೆ.

Bizarre: ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲಲಾಗುತ್ತದೆ! ಯಾಕೆ ಗೊತ್ತಾ?
ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲುವುದು ಜನಾಂಗದ ಸಂಸ್ಕೃತಿಯ ಭಾಗ (ಸಾಂದರ್ಭಿಕ ಚಿತ್ರ)
Rakesh Nayak Manchi
Rakesh Nayak Manchi|

Updated on: Apr 14, 2023 | 7:30 AM

Share

ಜಗತ್ತಿನ ವಿವಿಧ ಕಡೆಗಳಲ್ಲಿರುವ ಅನೇಕ ವಿಚಿತ್ರ ನಂಬಿಕೆಗಳು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಪ್ರತಿಯೊಬ್ಬ ಪೋಷಕರು ತಮಗೆ ಜನಿಸಿದ ಮಗು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಭಾರತದ ಈ ಒಂದು ನೆಲದಲ್ಲಿ ಸುಂದರ ಮಗು ಶಾಪವಾಗಿದೆ. ಹೌದು, ಅಂಡಮಾನ್ ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತದ ಶಿಲಾಯುಗದ ಕೊನೆಯ ಸಂತತಿ ಎಂದೇ ಹೇಳಲಾಗುವ ಜರಾವಾ ಬುಡಕಟ್ಟು (Jarawa Tribe) ಜನಾಂಗದಲ್ಲಿ ಅವಿವಾಹಿತ ಅಥವಾ ವಿಧವೆಗೆ ಬಿಳಿ ಮಗು ಜನಿಸಿದರೆ ಆ ಮಗುವನ್ನು ಕೊಲ್ಲಾಗುತ್ತದೆ. ಈ ಬುಡಕಟ್ಟು ಆಫ್ರಿಕಾದ ಸ್ಥಳೀಯ ಎಂದು ನಂಬಲಾಗಿದೆ.

ಮಾಧ್ಯಮಗಳ ಪ್ರಕಾರ ಇಲ್ಲಿನ ಯಾವುದೇ ಮನೆಯಲ್ಲಿ ಬಿಳಿ ಮಗು ಜನಿಸಿದರೆ ಅದನ್ನು ಕೊಲ್ಲಲಾಗುತ್ತದೆ. ಇಲ್ಲಿ ಬಿಳಿ ಮಗುವನ್ನು ಶಾಪವೆಂದು ಪರಿಗಣಿಸಲಾಗುತ್ತದೆ. ಜರವಾ ಬುಡಕಟ್ಟಿನ ಬಹುತೇಕ ಜನರು ಕಪ್ಪು ಮೈಬಣ್ಣವನ್ನು ಹೊಂದಿರುತ್ತಾರೆ. ಈ ಬುಡಕಟ್ಟಿನ ಮಹಿಳೆಗೆ ಬಿಳಿ ಬಣ್ಣದ ಮಗು ಜನಿಸಿದರೆ ಅದು ಬೇರೆ ಯಾವುದಾದರೂ ಬುಡಕಟ್ಟಿಗೆ ಸೇರಿದೆ ಎಂದು ನಂಬುತ್ತಾರೆ.

ಇನ್ನೂ ಬಿಡಿಸಿ ಹೇಳಬೇಕೆಂದರೆ, ಅವರ ಸಮುದಾಯದ ಜನರನ್ನು ಬಿಟ್ಟು ಹೊರಗಿನ ಸಮುದಾಯದ ಜನರ ಜತೆಗಿನ ದೈಹಿಕ ಸಂಬಂಧವನ್ನು ಒಪ್ಪುವುದಿಲ್ಲ. ಈ ಜನಾಂಗದ ಅವಿವಾಹಿತ ಅಥವಾ ವಿಧವೆಗೆ ಬಿಳಿ ಬಣ್ಣದ ಮಗು ಜನಿಸಿತು ಎಂದರೆ ಆ ಮಹಿಳೆಯೊಂದಿಗೆ ಬಾಹ್ಯ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ನಡೆದಿದೆ ಎಂದು ನಂಬುತ್ತಾರೆ. ಹೀಗಾಗಿ ಈ ಮಗುವನ್ನು ಜನರು ಕೊಲ್ಲುತ್ತಾರೆ. ಇನ್ನೊಂದು ವಿಚಿತ್ರವೆಂದರೆ, ಮಗುವನ್ನು ಕೊಲ್ಲುವ ಮುನ್ನ ಎಲ್ಲ ಮಹಿಳೆಯರು ಎದೆಹಾಲು ಉಣಿಸಿದ ನಂತರ ಕೊಲ್ಲಲಾಗುತ್ತದೆ. ಹೀಗೆ ಮಾಡುವುದು ಸಮುದಾಯದ ಪರಿಶುದ್ಧತೆಗಾಗಿ ಎನ್ನಲಾಗುತ್ತದೆ.

ಇದನ್ನೂ ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!

ಮಾಧ್ಯಮ ವರದಿಗಳ ಪ್ರಕಾರ, ಈ ಬುಡಕಟ್ಟು ಜನಾಂಗವನ್ನು 90 ರ ದಶಕದಲ್ಲಿ ಪತ್ತೆಯಾಗಿದೆ. ಭಾರತ ಸರ್ಕಾರವು ಈ ಬುಡಕಟ್ಟು ಜನಾಂಗದವರ ಫೋಟೋ ತೆಗೆಯುವ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಬಗ್ಗೆ ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಿದೆ. ಯಾರಾದರೂ ಅವರ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರೆ ಜೈಲಿಗೆ ಹೋಗಬೇಕಾಗಬಹುದು. ಇದರೊಂದಿಗೆ ದಂಡವನ್ನೂ ವಿಧಿಸಬಹುದು.

ಜರಾವಾ ಬುಡಕಟ್ಟಿನ ಜನರು ಮೂಢನಂಬಿಕೆಯನ್ನು ಬಹಳಷ್ಟು ನಂಬುತ್ತಾರೆ. ಈ ಬುಡಕಟ್ಟಿನ ಜನರು ಗರ್ಭಿಣಿ ಮಹಿಳೆಯು ಪ್ರಾಣಿಗಳ ರಕ್ತವನ್ನು ಕುಡಿದರೆ ಅವಳ ಮಗು ಕಪ್ಪಾಗುತ್ತದೆ ಎಂದು ನಂಬುತ್ತಾರೆ. ಇಲ್ಲಿ ಕಪ್ಪು ಬಣ್ಣದ ಮಕ್ಕಳು ಮಾತ್ರ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!