AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bone broth for skin: ಚರ್ಮದ ಆರೋಗ್ಯಕ್ಕೆ ಉತ್ತಮ ಮೂಳೆಸಾರು, ಇಲ್ಲಿದೆ ಸಾರು ಮಾಡುವ ವಿಧಾನ

ಮೂಳೆ ಸಾರು ಅನೇಕರಿಂದ ಸೂಪರ್‌ಪುಢ್ ಎಂದು ಪ್ರಶಂಸಿಸಲ್ಪಟ್ಟಿದೆ. ಮತ್ತು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಮೂಳೆ ಸಾರು ಚರ್ಮಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Bone broth for skin: ಚರ್ಮದ ಆರೋಗ್ಯಕ್ಕೆ ಉತ್ತಮ ಮೂಳೆಸಾರು, ಇಲ್ಲಿದೆ ಸಾರು ಮಾಡುವ ವಿಧಾನ
ಸಾಂದರ್ಭಿಕ ಚಿತ್ರ Image Credit source: NDTV
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2023 | 6:48 PM

ಮೂಳೆ ಸಾರು (Bone broth) ಅನೇಕರಿಂದ ಸೂಪರ್‌ಪುಢ್ ಎಂದು ಪ್ರಶಂಸಿಸಲ್ಪಟ್ಟಿದೆ. ಮತ್ತು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಮೂಳೆ ಸಾರು ಚರ್ಮಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಾವು ದೀರ್ಘಕಾಲದವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡರೆ ಅಥವಾ ಚಳಿಗಾಳಿಯು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಚರ್ಮವು ಒಣಗುತ್ತದೆ ಮತ್ತು ಬೇಗನೆ ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇಂತಹ ತ್ವಚೆಯ ಸಮಸ್ಯೆಗಳನ್ನು ದೂರ ಮಾಡಿ ತ್ವಚೆಯ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುವ ಕೆಲವೊಂದು ಸೂಪರ್‌ಫುಡ್‌ಗಳಿವೆ. ಅವುಗಳಲ್ಲಿ ಒಂದು ಮೂಳೆ ಸಾರು. ಇದು ಕರುಳಿನ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಒಳ್ಳೆಯದು.

ಸಮಗ್ರ ಆರೋಗ್ಯ ತರಬೇತುದಾರರಾದ ದಿಗ್ವಿಜಯ ಸಿಂಗ್ ಅವರು ಮೂಳೆ ಸಾರು ಚರ್ಮಕ್ಕೆ ಯಾವ ರೀತಿ ಒಳ್ಳೆಯದು ಮತ್ತು ಅದನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಚಳಿಗಾಲದಲ್ಲಿ ಒಂದು ಕಪ್ ಬೆಚ್ಚಗಿನ ಮೂಳೆಸಾರು ದಿನವನ್ನು ಪ್ರಾರಂಭಿಸಲು ಅಥವಾ ದಿನವನ್ನು ಕೊನೆಗೊಳಿಸಲು ಪರಿಪೂರ್ಣ ಮಾರ್ಗವಾಗಿದೆ.

ಇದು ಆರೋಗ್ಯಕರ ಪಾನೀಯವಾಗಿದ್ದು, ಪ್ರಾಣಿಗಳ ಮೂಳೆಗಳು, ಮೂಳೆ ಮಜ್ಜೆ ಮತ್ತು ಸಂಯೋಜಕ ಅಂಶಗಳನ್ನು ಕುದಿಸಿ ತಯಾರಿಸಲಾಗುತ್ತದೆ. ಮೂಳೆ ಸಾರು ತಯಾರಿಸಲು ಕಾಡೆಮ್ಮೆ, ಕೋಳಿ, ಟರ್ಕಿ, ಹಂದಿ ಯಾವುದನ್ನು ಬೇಕಾದರೂ ಉಪಯೋಗಿಸಬಹುದು ಎಂದು ಸಿಂಗ್ ಹೇಳುತ್ತಾರೆ.

ಆರೋಗ್ಯಕರ ಚರ್ಮಕ್ಕಗಿ ಮೂಳೆ ಸಾರು:

ಮೂಳೆ ಸಾರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಹಾಗೂ ಇದು ಕೊಲಾಜಿನ್‌ನಿಂದ ಸಮೃದ್ಧವಾಗಿದೆ. ಇದು ಚರ್ಮ ಮತ್ತು ಅಂಗಾಂಶಗಳನ್ನು ಸರಿಪಡಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನು ಓದಿ: Feeling Hungry: ಬೆಳಗ್ಗೆ ಹಸಿವಾಗ್ತಿದೆ ಎಂದು ಏನೇನೋ ತಿನ್ಬೇಡಿ, ಗ್ಯಾಸ್ಟ್ರಿಕ್ ಸಮಸ್ಯೆಯಾಗಬಹುದು

ಹಾರ್ವರ್ಡ್ ಟಿ.ಹೆಚ್, ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ ಕೊಲಾಜಿನ್ ನಮ್ಮ ದೇಹದಲ್ಲಿ ಅತ್ಯಂತ ಹೇರಳವಾಗಿರುವ ಪ್ರೋಟೀನ್ ಆಗಿದೆ. ಇದು ಫೈಬರ್ ತರಹದ ರಚನೆಯನ್ನು ಹೊಂದಿದೆ. ಇದು ಚರ್ಮ, ಮೂಳೆ, ಸ್ನಾಯುಗಳು, ಸ್ನಾಯು ರಜ್ಜು ಮತ್ತು ಕಾರ್ಟಿಲೆಜ್‌ನ ಪ್ರಮುಖ ಅಂಶವಾಗಿದೆ. ಇದು ಅಂಗಾಶಗಳನ್ನು ಬಲವಾಗಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ನಮ್ಮ ದೇಹವು ಕೊಲಾಜಿನ್‌ನನ್ನು ಉತ್ಪಾದಿಸುವ ಪ್ರಮಾಣ ಕಡಿಮೆಯಾಗುತ್ತದೆ. ಇದು ಅಂತಿಮವಾಗಿ ಚರ್ಮದ ಸ್ಥಿತಿ ಸ್ಥಾಪಕತ್ವದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದೆ. ಒಂದು ಕಪ್ ಮೂಳೆ ಸಾರು ಸೇವಿಸುವುದರಿಂದ ಕೊಲಾಜಿನ್ ಸಮಸ್ಯೆಗಳನ್ನು ದೂರಮಾಡಬಹುದು.

ಮೂಳೆ ಸಾರು ಪಾಕ ವಿಧಾನ:

ಮೂಳೆಸಾರು ತಯಾರಿಸಲು ಹುಲ್ಲು ತಿನ್ನುವ ಪ್ರಾಣಿಗಳ ದೊಡ್ಡ ಎಲುಬುಗಳನ್ನು ಬಳಸಬೇಕು ಎಂದು ದಿಗ್ವಿಜಯ ಸಿಂಗ್ ಹೇಳುತ್ತಾರೆ. ಏಕೆಂದರೆ ಅವುಗಳು ಅತ್ಯುತ್ತಮ ಪೋಷಕಾಂಶವನ್ನು ಹೊಂದಿರುತ್ತವೆ. ದೊಡ್ಡ ಮೂಳೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸ, ಕಲ್ಮಶಗಳನ್ನು ತೆಗೆದು ಹಾಕಿ ನಂತರ ಗೋಲ್ಡನ್ ಬ್ರೌನ್ ಆಗುವವರೆಗೆ ಅವುಗಳನ್ನು ಹುರಿಯಿರಿ, ನಂತರ ಎಲುಬುಗಳನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಸೇರಿಸಿ ಮತ್ತು ಸುಮಾರು 10 ಗಂಟೆಗಳ ಕಾಲ ಕುದಿಸಿ. ಇದನ್ನು ಕುದಿಸುವುದರಿಂದ ಮೂಳೆಗಳಲ್ಲಿರುವ ಪೋಷಕಾಂಶಗಳು ಹೊರಬರುತ್ತವೆ.

ಇದಾದ ಬಳಿಕ ಅವುಗಳನ್ನು ತಣ್ಣಗಾಗಿಸಿ ಮಸಾಲೆಗಳನ್ನು ಸೇರಿಸಿ ಇದರಿಂದ ರುಚಿ ಹೆಚ್ಚಾಗುತ್ತದೆ. ಇದನ್ನು ನೀವು ಸೂಪ್ ರೀತಿಯಲ್ಲಿ ಸೇವಿಸಬಹುದು, ಇದು ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದು ಕರುಳಿನ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್