AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ತಿಂಡಿಯನ್ನು ನೀವು ಏನೆಂದು ಕರೆಯುತ್ತೀರಿ? ಇಲ್ಲಿವೆ ಟ್ವಿಟರ್​​​ನಲ್ಲಿ ಕಂಡ ಕುತೂಹಲಕಾರಿ ಉತ್ತರಗಳು

ಮಧುರ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಊಟದ ತಟ್ಟೆಯಲ್ಲಿರುವ ಆಹಾರವನ್ನು ನೋಡಿ ದೇಶದ ವಿವಿಧ ಭಾಗಗಳಿಂದ ಜನರು ಕಾಮೆಂಟ್ ಮಾಡಿ, ತಮ್ಮ-ತಮ್ಮ ಊರಿನಲ್ಲಿ ಈ ಆಹಾರಕ್ಕೆ ಏನು ಹೇಳುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ತಿಂಡಿಯನ್ನು ನೀವು ಏನೆಂದು ಕರೆಯುತ್ತೀರಿ? ಇಲ್ಲಿವೆ ಟ್ವಿಟರ್​​​ನಲ್ಲಿ ಕಂಡ ಕುತೂಹಲಕಾರಿ ಉತ್ತರಗಳು
ಇದು ಯಾವ ತಿಂಡಿಯೆಂದು ಗುರುತಿಸಿ Image Credit source: Twitter
TV9 Web
| Edited By: ನಯನಾ ಎಸ್​ಪಿ|

Updated on:Feb 14, 2023 | 3:54 PM

Share

Viral News: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಮನೆಯಲ್ಲಿ ಮಾಡುವ ಆಹಾರವನ್ನು ಸೇವಿಸುವಿದಕ್ಕಿಂತ ಚಿರ-ಪರಿಚಿತವಿಲ್ಲದ ಪ್ಯಾನ್ ಏಷ್ಯನ್ (Pan Asian), ಚೈನೀಸ್ (Chinese), ಕೋರಿಯನ್ (Korean) ಹೀಗೆ ವಿದೇಶಿ ಆಹಾರದ ರುಚಿಯನ್ನು ನೋಡಲು ಇಚ್ಛಿಸುತ್ತಾರೆ. ಬೇರೆ ದೇಶದ ಆಹಾರವನ್ನು ಸೇವಿಸಿ ನಮ್ಮ ದೇಶದಲ್ಲಿನ ಯಾವುದೊ ಆಹಾರಕ್ಕೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬರು ಟ್ವೀಟ್ ಮಾಡಿದ ಫೋಟೋದಲ್ಲಿನ ಆಹಾರವನ್ನು ಕಂಡು ನೆಟ್ಟಿಗರು ವಿಭಿನ್ನವಾದ ಉತ್ತರಗಳನ್ನು ನೀಡಿದ್ದಾರೆ.

ಸೋಮವಾರ (ಫೆಬ್ರವರಿ 13), ಟ್ವಿಟರ್  ಬಳಕೆದಾರರಾದ ಮಧುರಾ ರಾವ್ (@madhurarrao) “ಈ ಚಿತ್ರವನ್ನು ನೋಡಿ, ನಾನು ಪ್ರಸ್ತುತ ಭಾರತದ ಯಾವ ಭಾಗದಲ್ಲಿದ್ದೇನೆ ಎಂದು ನೀವು ಊಹಿಸಬಹುದೇ?” ಎಂದು ಒಂದು ಊಟದ ತಟ್ಟೆಯ ಫೋಟೋ ಜೊತೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್ ಬಹಳಷ್ಟು ವೈರಲ್ ಆಗಿದೆ. ಭಾರತದ ವಿವಿಧ ಸಂಸ್ಕೃತಿಗಳು ಹೇಗೆ ಒಂದಕ್ಕೊಂದು ಜೋಡಿಕೊಂಡಿವೆ ಎಂದು ಕಾಮೆಂಟ್ ಓದಿದರೆ ಅರ್ಥವಾಗುತ್ತದೆ.

ಆಹಾರವು ಭಾರತೀಯ ಸಂಸ್ಕೃತಿಯ ಬಹು ಮುಖ್ಯ ಭಾಗ. ವಿವಿಧತೆಯಲ್ಲಿ ಏಕತೆ ತತ್ವವನ್ನು ಭಾರತವು ವಿಶ್ವಕ್ಕೆ ಸಾರುತ್ತದೆ. ಭಾರತವು ವಿವಿಧ ಜಾತಿ, ಧಾರ್ಮ, ಸಂಸ್ಕೃತಿಗಳಿಂದ ರೂಪುಗೊಂಡಿದೆ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯ ಸಂಸ್ಕೃತಿ ಒಂದರ ಮೇಲೊಂದು ಪ್ರಭಾವ ಬೀರುತ್ತದೆ. ಅದೇ ರೀತಿ ಮಧುರ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಊಟದ ತಟ್ಟೆಯಲ್ಲಿರುವ ಆಹಾರವನ್ನು ನೋಡಿ ದೇಶದ ವಿವಿಧ ಭಾಗಗಳಿಂದ ಜನರು ಕಾಮೆಂಟ್ ಮಾಡಿ, ತಮ್ಮ-ತಮ್ಮ ಊರಿನಲ್ಲಿ ಈ ಆಹಾರಕ್ಕೆ ಏನು ಹೇಳುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಧುರ ಅವರು ಹಂಚಿಕೊಂಡದ ಆಹಾರದ ತಟ್ಟೆ ನೋಡಿ ಮಂಗಳೂರಿನವರೊಬ್ಬರು “ನೀವು ಮಂಗಳೂರಿನಲ್ಲಿ ಇದ್ದೀರಾ.. ನಿಮ್ಮ ತಟ್ಟೆಯಲ್ಲಿ ಸೇಮಿಗೆ/ಒತ್ತು ಶಾವಿಗೆ, ಚಿಕನ್ ಸುಕ್ಕ, ಮೂಡೆ, ಚಿಕನ್ ಕರಿ ಇದೆ. ಇದು ನಮ್ಮ ಮಂಗಳೂರಿನಲ್ಲಿ ತುಂಬಾ ಫೇಮಸ್” ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಪ್ರೇಮಿಗಳ ದಿನ; ‘ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಉಡುಗೊರೆ! ಬನ್ನಿ ನಮ್ಮ ದಿನವನ್ನು ಆಚರಿಸೋಣ’

ಅದೇ ರೀತಿ ಇನ್ನೊಬ್ಬರು, “ಬಾಳೆ ಎಲೆಯಲ್ಲಿ ಇರುವುದನ್ನು ಬಂಗಾಳದಲ್ಲಿ ಮಚ್ಚರ್ ಪತೂರಿ ಎನ್ನುತ್ತಾರೆ. ಮಹಾರಾಷ್ಟ್ರ ಅಥವಾ ಗುಜರಾತಿನಲ್ಲಿ ಪತ್ರಾಣಿ ಮಾಚಿ ಎನ್ನುತ್ತಾರೆ.” ಎಂದರು. ಹಾಗೆಯೇ ಇನ್ನು ಕೆಲವರು ಮಹಾರಾಷ್ಟ್ರ ಕೊಂಕಣ ಸೀಮೆಯ ಕುರ್ಡಾಯ್ ಮತ್ತು ಪತ್ರಾಣಿ ಇರಬಹುದೆಂದು ಊಹಿಸಿದರು. ಕೇರಳದವರೊಬ್ಬರು ಇದು ಇಡಿಯಪ್ಪಂ ಎಂದು ಹೇಳಿದರು. ಒಟ್ಟಿನಲ್ಲಿ ಈ ಎಲ್ಲ ಉತ್ತರಗಳನ್ನು ನೋಡಿದರೆ ಭಾರತದ ಆಚಾರ ವಿಚಾರವಷ್ಟೇ ಅಲ್ಲದೆ ಭಾರತದ ಬೇರೆ ಬೇರೆ ಪ್ರದೇಶಗಳ ಆಹಾರದಲ್ಲೂ ಹೋಲಿಕೆಗಳಿವೆ ಎಂಬುದು ತಿಳಿಯುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:49 pm, Tue, 14 February 23

Follow Us
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್