AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಕರವೆಂದು ಪರಿಗಣಿಸುವ ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳೇನು?

ಭಾರತೀಯರು ವೀಳ್ಯದೆಲೆಗೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಹೀಗಾಗಿ ಶುಭಕಾರ್ಯಗಳಾದ ಪೂಜೆ, ಮದುವೆ ಸಮಾರಂಭಗಳಲ್ಲಿ ವೀಳ್ಯದೆಲೆಯ ಈ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಸುತ್ತಾರೆ. ಮಂಗಳಕರದ ಸಂಕೇತವಾಗಿರುವ ಈ ಎಲೆಯಲ್ಲಿ ಆರೋಗ್ಯ ಲಾಭಗಳು ಅಧಿಕವಿದ್ದು, ಔಷಧೀಯ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ರೋಗ ನಿರೋಧಕಗುಣವನ್ನು ಹೊಂದಿರುವ ಕಾರಣ ಊಟವಾದ ಬಳಿಕ ಎಲೆಯಡಿಕೆಯನ್ನು ಸೇವಿಸುವ ಅಭ್ಯಾಸವಿದೆ.

ಮಂಗಳಕರವೆಂದು ಪರಿಗಣಿಸುವ ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 16, 2024 | 2:37 PM

Share

ಹಳ್ಳಿ ಕಡೆಗಳಲ್ಲಿ ರಾತ್ರಿ ಊಟವಾದ ಬಳಿಕ ಎಲೆಯಡಿಕೆಯನ್ನು ತಿಂದರೇನೇ ತೃಪ್ತಿ. ಹೀಗಾಗಿ ಅನೇಕರಲ್ಲಿ ಊಟದ ಬಳಿಕ ಎಲೆಯಡಿಕೆಯನ್ನು ಮೆಲ್ಲುವ ಅಭ್ಯಾಸವು ಇದೆ. ಇತ್ತೀಚೆಗಿನ ದಿನಗಳಲ್ಲಿ ವಿವಿಧ ಪಾನ್ ಬೀಡಗಳಿಗೆ ಭಾರಿ ಬೇಡಿಕೆಯಿದೆ. ಹೆಚ್ಚಿನವರು ಈ ವೀಳ್ಯದೆಲೆಯಿಂದ ಮಾಡಿದ ಸ್ವೀಟ್ ಪಾನ್ ಅನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಅನೇಕ ರೋಗ ರುಜಿನಗಳನ್ನು ದೂರ ಮಾಡುವ ಶಕ್ತಿಯು ಈ ವೀಳ್ಯದೆಲೆಯಲ್ಲಿದೆ.

* ವೀಳ್ಯದೆಲೆಯ ಜೊತೆಗೆ ತುಳಸಿ ಎಲೆ, ಲವಂಗ, ಪಚ್ಚಕರ್ಪೂರ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಿದ್ದರೆ ಕಫ ಹಾಗೂ ಕೆಮ್ಮಿನ ಸಮಸ್ಯೆಯು ದೂರವಾಗುತ್ತದೆ.

* ತಲೆ ಹೊಟ್ಟು ಹಾಗೂ ಕೂದಲು ಉದುರುವ ಸಮಸ್ಯೆಯಿರುವವರು ವೀಳ್ಯದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತೆಲೆಗೆ ಹಚ್ಚಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ವೀಳ್ಯದೆಲೆಯಲ್ಲಿ ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ, ಜೇನುತುಪ್ಪ ಬೆರೆಸಿ ಜಗಿದು ತಿನ್ನುವುರಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರವು ಚೆನ್ನಾಗಿ ಆಗುತ್ತದೆ.

* ವೀಳ್ಯದೆಲೆಗೆ ಸ್ವಲ್ಪ ಅರಿಶಿನ ಹಾಕಿ ಮಗುವಿನ ತಲೆಗೆ ತಿಕ್ಕುವುದರಿಂದ ಶೀತದ ಸಮಸ್ಯೆಯು ಕಡಿಮೆಯಾಗುತ್ತದೆ.

* ಎದೆಹಾಲು ಹೆಚ್ಚಾಗಲು ಬಾಣಂತಿಯರು ವೀಳ್ಯದೆಲೆಯನ್ನು ಸೇವಿಸುವುದು ಉತ್ತಮ.

* ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿದ್ದರೆ ವೀಳ್ಯದೆಲೆಗಳನ್ನು ಅರೆದು ಗಾಯವಾದಲ್ಲಿಗೆ ಹಚ್ಚಿ ಒತ್ತಿ ಹಿಡಿಯುವುದರಿಂದ ರಕ್ತ ಬರುವುದು ನಿಲ್ಲುತ್ತದೆ.

* ವೀಳ್ಯದೆಲೆಗೆ ಉಪ್ಪು ಹಾಕಿಕೊಂಡು ಅಗಿದು ರಸವನ್ನು ನುಂಗುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

* ಎಲೆ ಅಡಿಕೆಯನ್ನು ಮೆಲ್ಲುತ್ತಿದ್ದರೆ ಜೊಲ್ಲು ರಸ ಉತ್ಪತ್ತಿಯಾಗಿ ಜೀರ್ಣ ಶಕ್ತಿಯು ಸುಧಾರಿಸುತ್ತದೆ.

* ಊಟವಾದ ಬಳಿಕ ಎಲೆಯಡಿಕೆ ಹಾಕಿಕೊಳ್ಳುವುದರಿಂದ ಬಾಯಿಯ ದುರ್ವಾಸನೆಯು ದೂರವಾಗಿ ಬಾಯಿಯ ಆರೋಗ್ಯವು ಕಾಪಾಡುತ್ತದೆ.

* ಮುಖವು ಮೊಡವೆಗಳಿಂದ ಅಂದ ಕಳೆದುಕೊಂಡಿದ್ದರೆ, ವೀಳ್ಯದೆಲೆಯೊಂದನ್ನು ನುಣ್ಣಗೆ ಅರೆದು ಮೊಡವೆಗಳಿದ್ದಲ್ಲಿ ಹಚ್ಚಿಕೊಂಡರೆ ಮೊಡವೆ ಹಾಗೂ ಮುಖದ ಮೇಲಿನ ಕಲೆಗಳು ಮಾಯಾವಾಗುತ್ತದೆ.

* ನೋವಿರುವ ಜಾಗಕ್ಕೆ ವೀಳ್ಯದೆಲೆಗಳನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಹಚ್ಚಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?

* ದಿನನಿತ್ಯ ವೀಳ್ಯದೆಲೆಯನ್ನು ಸೇವಿಸುತ್ತಿದ್ದರೆ ವಸಡುಗಳಲ್ಲಿ ರಕ್ತ ಬರುವುದು ನಿಲ್ಲುತ್ತದೆ.

* ತೂಕ ಇಳಿಸಿಕೊಳ್ಳಬೇಕೆನ್ನುವವರು ವೀಳ್ಯದೆಲೆಯ ಕಷಾಯವನ್ನು ಮಾಡಿ ಯಥೇಚ್ಛವಾಗಿ ಸೇವಿಸುತ್ತ ಬಂದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.

* ತುರಿಕೆ ಸಮಸ್ಯೆಗೆ ವೀಳ್ಯದೆಲೆಯ ರಸದ ಜೊತೆಗೆ ಲಿಂಬೆ ರಸವನ್ನು ಸೇರಿಸಿದರೆ ಹಚ್ಚಿದರೆ ಕಡಿಮೆಯಾಗುತ್ತದೆ.

* ತಲೆನೋವು ಸಮಸ್ಯೆಯಿದ್ದರೆ ವೀಳ್ಯದೆಲೆಯ ರಸಕ್ಕೆ ಕರ್ಪೂರ ಹಾಗೂ ತೆಂಗಿನೆಣ್ಣೆ ಬೆರೆಸಿ ಹಣೆಗೆ ಹಚ್ಚುವುದರಿಂದ ಗುಣಮುಖವಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ