ಮಂಗಳಕರವೆಂದು ಪರಿಗಣಿಸುವ ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳೇನು?

ಭಾರತೀಯರು ವೀಳ್ಯದೆಲೆಗೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಹೀಗಾಗಿ ಶುಭಕಾರ್ಯಗಳಾದ ಪೂಜೆ, ಮದುವೆ ಸಮಾರಂಭಗಳಲ್ಲಿ ವೀಳ್ಯದೆಲೆಯ ಈ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಸುತ್ತಾರೆ. ಮಂಗಳಕರದ ಸಂಕೇತವಾಗಿರುವ ಈ ಎಲೆಯಲ್ಲಿ ಆರೋಗ್ಯ ಲಾಭಗಳು ಅಧಿಕವಿದ್ದು, ಔಷಧೀಯ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ರೋಗ ನಿರೋಧಕಗುಣವನ್ನು ಹೊಂದಿರುವ ಕಾರಣ ಊಟವಾದ ಬಳಿಕ ಎಲೆಯಡಿಕೆಯನ್ನು ಸೇವಿಸುವ ಅಭ್ಯಾಸವಿದೆ.

ಮಂಗಳಕರವೆಂದು ಪರಿಗಣಿಸುವ ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 16, 2024 | 2:37 PM

ಹಳ್ಳಿ ಕಡೆಗಳಲ್ಲಿ ರಾತ್ರಿ ಊಟವಾದ ಬಳಿಕ ಎಲೆಯಡಿಕೆಯನ್ನು ತಿಂದರೇನೇ ತೃಪ್ತಿ. ಹೀಗಾಗಿ ಅನೇಕರಲ್ಲಿ ಊಟದ ಬಳಿಕ ಎಲೆಯಡಿಕೆಯನ್ನು ಮೆಲ್ಲುವ ಅಭ್ಯಾಸವು ಇದೆ. ಇತ್ತೀಚೆಗಿನ ದಿನಗಳಲ್ಲಿ ವಿವಿಧ ಪಾನ್ ಬೀಡಗಳಿಗೆ ಭಾರಿ ಬೇಡಿಕೆಯಿದೆ. ಹೆಚ್ಚಿನವರು ಈ ವೀಳ್ಯದೆಲೆಯಿಂದ ಮಾಡಿದ ಸ್ವೀಟ್ ಪಾನ್ ಅನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಅನೇಕ ರೋಗ ರುಜಿನಗಳನ್ನು ದೂರ ಮಾಡುವ ಶಕ್ತಿಯು ಈ ವೀಳ್ಯದೆಲೆಯಲ್ಲಿದೆ.

* ವೀಳ್ಯದೆಲೆಯ ಜೊತೆಗೆ ತುಳಸಿ ಎಲೆ, ಲವಂಗ, ಪಚ್ಚಕರ್ಪೂರ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಿದ್ದರೆ ಕಫ ಹಾಗೂ ಕೆಮ್ಮಿನ ಸಮಸ್ಯೆಯು ದೂರವಾಗುತ್ತದೆ.

* ತಲೆ ಹೊಟ್ಟು ಹಾಗೂ ಕೂದಲು ಉದುರುವ ಸಮಸ್ಯೆಯಿರುವವರು ವೀಳ್ಯದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತೆಲೆಗೆ ಹಚ್ಚಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ವೀಳ್ಯದೆಲೆಯಲ್ಲಿ ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ, ಜೇನುತುಪ್ಪ ಬೆರೆಸಿ ಜಗಿದು ತಿನ್ನುವುರಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರವು ಚೆನ್ನಾಗಿ ಆಗುತ್ತದೆ.

* ವೀಳ್ಯದೆಲೆಗೆ ಸ್ವಲ್ಪ ಅರಿಶಿನ ಹಾಕಿ ಮಗುವಿನ ತಲೆಗೆ ತಿಕ್ಕುವುದರಿಂದ ಶೀತದ ಸಮಸ್ಯೆಯು ಕಡಿಮೆಯಾಗುತ್ತದೆ.

* ಎದೆಹಾಲು ಹೆಚ್ಚಾಗಲು ಬಾಣಂತಿಯರು ವೀಳ್ಯದೆಲೆಯನ್ನು ಸೇವಿಸುವುದು ಉತ್ತಮ.

* ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿದ್ದರೆ ವೀಳ್ಯದೆಲೆಗಳನ್ನು ಅರೆದು ಗಾಯವಾದಲ್ಲಿಗೆ ಹಚ್ಚಿ ಒತ್ತಿ ಹಿಡಿಯುವುದರಿಂದ ರಕ್ತ ಬರುವುದು ನಿಲ್ಲುತ್ತದೆ.

* ವೀಳ್ಯದೆಲೆಗೆ ಉಪ್ಪು ಹಾಕಿಕೊಂಡು ಅಗಿದು ರಸವನ್ನು ನುಂಗುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

* ಎಲೆ ಅಡಿಕೆಯನ್ನು ಮೆಲ್ಲುತ್ತಿದ್ದರೆ ಜೊಲ್ಲು ರಸ ಉತ್ಪತ್ತಿಯಾಗಿ ಜೀರ್ಣ ಶಕ್ತಿಯು ಸುಧಾರಿಸುತ್ತದೆ.

* ಊಟವಾದ ಬಳಿಕ ಎಲೆಯಡಿಕೆ ಹಾಕಿಕೊಳ್ಳುವುದರಿಂದ ಬಾಯಿಯ ದುರ್ವಾಸನೆಯು ದೂರವಾಗಿ ಬಾಯಿಯ ಆರೋಗ್ಯವು ಕಾಪಾಡುತ್ತದೆ.

* ಮುಖವು ಮೊಡವೆಗಳಿಂದ ಅಂದ ಕಳೆದುಕೊಂಡಿದ್ದರೆ, ವೀಳ್ಯದೆಲೆಯೊಂದನ್ನು ನುಣ್ಣಗೆ ಅರೆದು ಮೊಡವೆಗಳಿದ್ದಲ್ಲಿ ಹಚ್ಚಿಕೊಂಡರೆ ಮೊಡವೆ ಹಾಗೂ ಮುಖದ ಮೇಲಿನ ಕಲೆಗಳು ಮಾಯಾವಾಗುತ್ತದೆ.

* ನೋವಿರುವ ಜಾಗಕ್ಕೆ ವೀಳ್ಯದೆಲೆಗಳನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಹಚ್ಚಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?

* ದಿನನಿತ್ಯ ವೀಳ್ಯದೆಲೆಯನ್ನು ಸೇವಿಸುತ್ತಿದ್ದರೆ ವಸಡುಗಳಲ್ಲಿ ರಕ್ತ ಬರುವುದು ನಿಲ್ಲುತ್ತದೆ.

* ತೂಕ ಇಳಿಸಿಕೊಳ್ಳಬೇಕೆನ್ನುವವರು ವೀಳ್ಯದೆಲೆಯ ಕಷಾಯವನ್ನು ಮಾಡಿ ಯಥೇಚ್ಛವಾಗಿ ಸೇವಿಸುತ್ತ ಬಂದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.

* ತುರಿಕೆ ಸಮಸ್ಯೆಗೆ ವೀಳ್ಯದೆಲೆಯ ರಸದ ಜೊತೆಗೆ ಲಿಂಬೆ ರಸವನ್ನು ಸೇರಿಸಿದರೆ ಹಚ್ಚಿದರೆ ಕಡಿಮೆಯಾಗುತ್ತದೆ.

* ತಲೆನೋವು ಸಮಸ್ಯೆಯಿದ್ದರೆ ವೀಳ್ಯದೆಲೆಯ ರಸಕ್ಕೆ ಕರ್ಪೂರ ಹಾಗೂ ತೆಂಗಿನೆಣ್ಣೆ ಬೆರೆಸಿ ಹಣೆಗೆ ಹಚ್ಚುವುದರಿಂದ ಗುಣಮುಖವಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಅಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಅಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ