AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ

ಕೂದಲಿಗೆ ನಿಂಬೆ ರಸ ಹಚ್ಚಬಾರದು, ಈ ರೀತಿ ಮಾಡುವುದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ ಅನ್ನೋ ಮಾತನ್ನು ನೀವು ಕೂಡ ಕೇಳಿರಬಹುದಲ್ವಾ. ಆದ್ರೆ ನಿಜಕ್ಕೂ ನಿಂಬೆ ರಸ ತಲೆಗೂದಲಿಗೆ ಹಚ್ಚುವುದರಿಂದ ಕೂದಲು ಬಿಳಿಯಾಗುತ್ತಾ, ನಿಂಬೆ ರಸ ಹಚ್ಚುವುದರಿಂದ ಕೂದಲಿಗೆ ಪ್ರಯೋಜನಗಳು ಲಭಿಸುತ್ತಾ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Apr 25, 2026 | 4:27 PM

Share

ನಿಂಬೆ ಹಣ್ಣಿನಲ್ಲಿ (lemon) ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್‌, ಎಲೆಕ್ಟ್ರೋಲೈಟ್‌ ಅಂಶಗಳಿದ್ದು, ಇದು ದೇಹ ಮತ್ತು ಚರ್ಮವನ್ನು ಆರೋಗ್ಯಯುತವಾಗಿಡಲು ಸಹಕಾರಿ. ಇದೇ ಕಾರಣಕ್ಕೆ ನಿಂಬೆ ರಸವನ್ನು ಸೇವನೆ ಮಾಡಬೇಕು ಅನ್ನೋದು. ನಿಂಬೆ ರಸ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನಿಜ, ಆದ್ರೆ ನಿಂಬೆ ರಸವನ್ನು ಅಪ್ಪಿತಪ್ಪಿಯೂ ಕೂದಲಿಗೆ ಹಚ್ಚಬಾರದು. ಏಕೆಂದರೆ ನಿಂಬೆಯಲ್ಲಿರುವ ಆಮ್ಲೀಯ ಅಂಶವು ಕೂದಲನ್ನು ಬೇಗನೇ ಬಿಳಿಯಾಗಿಸುತ್ತದೆ ಎಂದು ಹಲವರು ಹೇಳುವುದುಂಟು. ಹಾಗಿದ್ದರೆ ನಿಜಕ್ಕೂ ನಿಂಬೆ ರಸ ಕೂದಲನ್ನು ಬಿಳಿಯಾಗಿಸುತ್ತಾ, ತಜ್ಞರು ಈ ಬಗ್ಗೆ ಏನೆನ್ನುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಿಂಬೆ ರಸ ಹಚ್ಚಿದ್ರೆ ಕೂದಲು ಬಿಳಿಯಾಗುತ್ತಾ?

ತಜ್ಞರ ಪ್ರಕಾರ, ಕೂದಲಿಗೆ ನಿಂಬೆ ಹಚ್ಚುವುದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ ಎಂಬುದು ಮಿಥ್ಯ.  ನಿಂಬೆಯಲ್ಲಿರುವ ಆಮ್ಲೀಯ ಅಂಶ ಕೂದಲನ್ನು ಬಿಳಿಯಾಗಿಸಲು ಸಾಧ್ಯವಿಲ್ಲ. ನೆತ್ತಿಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ನಿಂಬೆ ರಸವನ್ನು ಬಳಸಬಹುದು. ಹೌದು ನಿಂಬೆ ರಸದಲ್ಲಿರುವ ಅಂಶಗಳು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ಸೋಂಕುಗಳನ್ನು ನಿವಾರಿಸುತ್ತದೆ. ನಿಂಬೆ ರಸವು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ನಿಂಬೆ ರಸವನ್ನು ಸರಿಯಾದ ರೀತಿಯಲ್ಲಿ ಹಚ್ಚುವುದು ತುಂಬಾನೇ ಮುಖ್ಯ.

ಕೂದಲಿಗೆ ನಿಂಬೆ ರಸ ಹಚ್ಚುವ ಸರಿಯಾದ ವಿಧಾನ ಯಾವುದು?

ತಜ್ಞರ ಪ್ರಕಾರ, ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹೇಗೆ ಹಚ್ಚಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ, ಅದು ಹಾನಿಯನ್ನುಂಟುಮಾಡಬಹುದು. ಯಾವಾಗಲೂ ನಿಮ್ಮ ಕೂದಲಿಗೆ ನೇರವಾಗಿ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ. ನೀವು ನಿಂಬೆ ರಸವನ್ನು ಎಣ್ಣೆ ಅಥವಾ ಅಲೋವೆರಾದಂತಹ ಯಾವುದನ್ನಾದರೂ ಬೆರೆಸಿ ಹಚ್ಚಬಹುದು.

  • ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಕೂದಲಿನ ಸೋಂಕು ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದಕ್ಕಾಗಿ, ನಿಂಬೆ ರಸವನ್ನು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬಹುದು.
  • ನಿಂಬೆ ರಸವನ್ನು ಹರಳೆಣ್ಣೆ ಜೊತೆ ಬೆರೆಸಿ ಕೂದಲಿಗೆ ಹಚ್ಚಬಹುದು. 3-4 ಹನಿ ನಿಂಬೆ ರಸವನ್ನು ಒಂದು ಟೀ ಚಮಚ ಕ್ಯಾಸ್ಟರ್ ಆಯಿಲ್ ಜೊತೆ ಬೆರೆಸಿ ಕೂದಲಿಗೆ ಹಚ್ಚಿ.
  • ನಿಂಬೆ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಅದನ್ನು ನಿಮ್ಮ ನೆತ್ತಿಗೆ ಹಚ್ಚಿ ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
  • ಮೆಂತ್ಯ ಪೇಸ್ಟ್ ಅನ್ನು ನಿಂಬೆ ರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ತಲೆಹೊಟ್ಟು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.
  • ತಲೆಹೊಟ್ಟು, ಕಿರಿಕಿರಿ ಮತ್ತು ಶುಷ್ಕತೆಯನ್ನು ತೊಡೆದುಹಾಕಲು ನಿಮ್ಮ ಶಾಂಪೂಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಊಟವಾದ ತಕ್ಷಣ ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಕೂದಲಿಗೆ ನಿಂಬೆ ರಸ ಹಚ್ಚುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ನೇರವಾಗಿ ಹಚ್ಚುವುದನ್ನು ನೀವು ತಪ್ಪಿಸಬೇಕು, ಏಕೆಂದರೆ ಇದು ಕೂದಲಿಗೆ ಹಾನಿಯನ್ನುಂಟುಮಾಡಬಹುದು.
  • ಪ್ರತಿದಿನ ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ತುರಿಕೆಗೆ ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವ ಮೊದಲು ಯಾವಾಗಲೂ ಪ್ಯಾಚ್ ಟೆಸ್ಟ್ ಮಾಡಿ, ಏಕೆಂದರೆ ಅದು ನಿಮ್ಮ ನೆತ್ತಿಯನ್ನು ಕೆರಳಿಸಬಹುದು.
  • ನಿಮ್ಮ ಕೂದಲು ಮತ್ತು ನೆತ್ತಿಗೆ ನಿಂಬೆ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ನೆತ್ತಿ ಒಣಗಲು ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚಲು ಬಯಸಿದರೆ, ನೀವು ಪ್ರತಿ 15-20 ದಿನಗಳಿಗೊಮ್ಮೆ ಹಚ್ಚಿದರೆ ಸಾಕು. ನೆತ್ತಿಯ ಸಮಸ್ಯೆ ಇದ್ದರೆ, ತಜ್ಞರ ಸಲಹೆಯ ಮೇರೆಗೆ ಮಾತ್ರ ನಿಂಬೆ ರಸವನ್ನು ಬಳಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ