AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ

ರಾತ್ರಿ ಮಲಗುವ ಮುಂಚೆ ನಾಳೆ ಬೆಳಗ್ಗೆ ಏನು ತಿಂಡಿ ಮಾಡೋದು ಎನ್ನುವ ಯೋಚನೆ ಎಲ್ಲಾ ಮಹಿಳೆಯರದ್ದು. ದೋಸೆ ಮಾಡಿದರೆ ಸಾಕಾಗುವುದಿಲ್ಲ, ಅದರ ಜೊತೆಗೆ ಚಟ್ನಿಯೋ ಸಾಂಬಾರೋ ನೆಚ್ಚಿ ಕೊಳ್ಳಲು ಇರಲೇಬೇಕು. ಆದರೆ ಕರಾವಳಿ ಶೈಲಿಯ ಮಸಾಲೆ ನೀರುದೋಸೆ ಮಾಡಿದರೆ ಚಟ್ನಿಯ ಅಗತ್ಯವೇ ಇಲ್ಲ. ಮನೆಯಲ್ಲಿರುವ ಕೆಲವೇ ಕೆಲವು ಐಟಂ ಬಳಸಿ ಮಾಡಬಹುದಾದ ಈ ದೋಸೆಯೂ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ
ಮಸಾಲೆ ನೀರುದೋಸೆ
ಸಾಯಿನಂದಾ
| Edited By: |

Updated on: Aug 17, 2024 | 3:08 PM

Share

ಕರಾವಳಿಯಲ್ಲಿ ಸಖತ್ ಫೇಮಸ್ ತಿಂಡಿ ಎಂದರೆ ನೀರುದೋಸೆ. ಆದರೆ ತೆಳ್ಳನೆಯ ಮಸಾಲೆ ದೋಸೆಯೂ ಕೂಡ ಇಲ್ಲಿ ಫೇಮಸ್. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಈ ದೋಸೆಯನ್ನು ಮಸಾಲೆಯನ್ನು ಸೇರಿಸಿ ಮಾಡಬಹುದು. ಸಿಹಿ ಖಾರ ಮಿಶ್ರಿತ ಈ ದೋಸೆ ತೆಳ್ಳಗೆಯಿದ್ದು ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಮನೆಯಲ್ಲಿರುವ ಈ ಕೆಲವು ಕೆಲವು ಐಟಂಗಳಿದ್ದರೆ ಮಸಾಲೆ ನೀರುದೋಸೆ ರೆಡಿಯಾದ್ದಂತೆಯೇ.

ಮಸಾಲೆ ನೀರು ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

* ದೋಸೆ ಅಕ್ಕಿ

* ಈರುಳ್ಳಿ

* ತೆಂಗಿನ ತುರಿ

* ಅರ್ಧ ಚಮಚ ಜೀರಿಗೆ ಬೀಜ

* ಒಂದು ಚಮಚ ಕೊತ್ತಂಬರಿ ಬೀಜ

* ಬೆಲ್ಲ

* ಘಾಟಿ ಮೆಣಸು

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಫ್ರಿಡ್ಜ್​​​​ನಲ್ಲಿ ಇಡುವ ಆಹಾರವನ್ನು ಎಷ್ಟು ಸಮಯದೊಳಗೆ ಸೇವನೆ ಮಾಡಬೇಕು ಗೊತ್ತಾ?

ಮಸಾಲೆ ನೀರು ದೋಸೆ ಮಾಡುವ ವಿಧಾನ

* ದೋಸೆ ಅಕ್ಕಿಯನ್ನು ನಾಲ್ಕರಿಂದ ಐದು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.

* ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಈರುಳ್ಳಿ, ತೆಂಗಿನಕಾಯಿ ತುರಿ, ಜೀರಿಗೆ, ಒಂದು ಚಮಚದಷ್ಟು ಕೊತ್ತಂಬರಿ ಬೀಜ, ಬೆಲ್ಲ, ಮೂರರಿಂದ ನಾಲ್ಕು ಘಾಟಿ ಮೆಣಸು ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ನಂತರದಲ್ಲಿ ಈ ಹಿಟ್ಟಿಗೆ ಉಪ್ಪು ಹಾಗೂ ಬೇಕಿದ್ದರೆ ನೀರು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.

* ಬಿಸಿ ತವಾದ ಮೇಲೆ ದೋಸೆ ಹಿಟ್ಟು ಹಾಕಿ. ಅದನ್ನು ಒಂದು ಪ್ಲೇಟ್ ನಿಂದ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ನಿಮಿಷ ಬೇಯಿಸಿದರೆ ಮಸಾಲೆ ನೀರು ದೋಸೆ ಸವಿಯಲು ಸಿದ್ಧ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ