Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇಗವಾಗಿ ನಡೆಯುವವರಿಗೆ ಗುಡ್​​ನ್ಯೂಸ್, ನಿಮ್ಮಷ್ಟು ಆರೋಗ್ಯವಂತರು ಯಾರು ಇಲ್ಲ, ಅಧ್ಯಯನ ಹೇಳೋದೇನು?

ವೇಗವಾಗಿ ನಡೆಯುವುದು ಆರೋಗ್ಯಕ್ಕೆ ತೊಂದರೆಯೇ ಎಂಬ ಯೋಚನೆಗಳು ನಿಮ್ಮಲ್ಲಿ ಬಂದಿರಬಹುದು. ಆದರೆ ಈ ಬಗ್ಗೆ ಒಂದು ಅಧ್ಯಯನ ವರದಿಯನ್ನು ನೀಡಿದೆ. ಅಧ್ಯಯನದ ವರದಿ ಪ್ರಕಾರ ವೇಗವಾಗಿ ನಡೆಯುವವರು ಆರೋಗ್ಯವಂತರು. ನಿಮ್ಮ ಹೃದಯದ ಆರೋಗ್ಯಗಳು ಹಾಗೂ ದೇಹವು ಚಟುವಟಿಕೆಯಿಂದ ಇರುತ್ತದೆ. ಅಧ್ಯಯನ ಈ ಬಗ್ಗೆ ಏನು ಹೇಳುತ್ತಾದೆ. ಯಾವ ಹೊತ್ತಿಗೆ ವೇಗವಾಗಿ ನಡೆಯಬೇಕು ಎಂಬ ಬಗ್ಗೆ ಈ ಅಧ್ಯಯನ ವರದಿ ಇಲ್ಲಿದೆ.

ವೇಗವಾಗಿ ನಡೆಯುವವರಿಗೆ ಗುಡ್​​ನ್ಯೂಸ್, ನಿಮ್ಮಷ್ಟು ಆರೋಗ್ಯವಂತರು ಯಾರು ಇಲ್ಲ, ಅಧ್ಯಯನ ಹೇಳೋದೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 25, 2024 | 2:28 PM

ಆರೋಗ್ಯದ ಸುಧಾರಣೆಗೆ ನಡಿಗೆ ಒಂದು ಉತ್ತಮ ಸಾಧನವಾಗಿದೆ. ನಡಿಗೆ ಎಂಬುದು ನಿಮ್ಮ ದೇಹವನ್ನು ಸಮತೋಲನ ಹಾಗೂ ಆರೋಗ್ಯವಾಗಿರಲು ಸಾಹಯ ಮಾಡುತ್ತದೆ. ಅದರಲ್ಲೂ ವೇಗವಾಗಿ ನಡೆಯುವುದು ಇನ್ನು ಉತ್ತಮ ಎಂಬುದನ್ನು ಅಧ್ಯಯನವೊಂದು ಹೇಳಿದೆ. ಅದಕ್ಕಾಗಿ ವೇಗದ ನಡೆಗೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಸ್ನೇಹಿತರಲ್ಲಿ ವೇಗವಾಗಿ ನಡೆಯುವ ಅಭ್ಯಾಸ ಇದ್ದಾರೆ. ಅಥವಾ ನಿಮ್ಗೆ ಆ ಅಭ್ಯಾಸ ಇದ್ರೆ ನೀವು ಕೂಡ ಒಮ್ಮೆ ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿ. ವಾಕಿಂಗ್ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಫಿಟ್ನೆಸ್ ಅನ್ನು ಸಹ ಕಾಪಾಡುತ್ತದೆ.

ಬೆಳಿಗ್ಗೆ ಅಥವಾ ಸಂಜೆ ನಡೆಯುವುದು ಒಳ್ಳೆಯದು. ಒಂದು ವೇಳೆ ಹೀಗೆ ಸಾಧ್ಯವಾಗದಿದ್ದರೆ, ನಿಮ್ಮ ಕೆಲಸ ಮಧ್ಯೆ ಒಂದು ವಾಕಿಂಗ್ ಹೋಗಿ ಬನ್ನಿ. ಇತ್ತೀಚಿನ ವಾಕಿಂಗ್ ಬಗ್ಗೆ ಅಧ್ಯಯನ ಒಂದು ವರದಿಯನ್ನು ನೀಡಿದೆ. ಇದರಲ್ಲಿ ಜನರ ನಡಿಗೆಯ ವೇಗವನ್ನು ಅಳೆಯಲಾಗುತ್ತದೆ ಮತ್ತು ವೇಗ ವೇಗವಾಗಿ ನಡೆಯುವುದರಿಂದ ಯಾವೆಲ್ಲ ಆರೋಗ್ಯ ಲಾಭಗಳು ಹಾಗೂ ನಷ್ಟಗಳು ಇದೆ ಎಂಬ ಬಗ್ಗೆ ಅಧ್ಯಯನ ಮಾಡಿದೆ. ವೇಗದ ನಡೆಗೆ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿರುವವರಿಗೆ ಸಹಾಯವಾಗುತ್ತದೆ.

25 ಸಾವಿರ ಜನರ ಮೇಲೆ ಅಧ್ಯಯನ

ಬೊಜ್ಜು, ಕೊಬ್ಬಿನ ತ್ಯಾಜ್ಯ ಅಥವಾ ಎರಡೂ ಸಮಸ್ಯೆಗಳಿಂದ ಬಳಲುತ್ತಿರುವ 25 ಸಾವಿರ ಜನರ ಮೇಲೆ ಜಪಾನ್‌ನ ದೋಷಿಶಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ, ಜನರು ತಮ್ಮ ನಡಿಗೆಯ ವೇಗದ ಬಗ್ಗೆ ಮತ್ತು ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ನಿಮ್ಮ ನಡಿಗೆಯ ವೇಗ ಹೆಚ್ಚಿದೆಯೇ ಎಂದು ಕೇಳಲಾಗಿದೆ. ಈ ಆಧಾರದ ಮೇಲೆ ನಡೆಸಿದ ಅಧ್ಯಯನವು ವೇಗವಾಗಿ ನಡೆಯುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ ಇತ್ಯಾದಿಗಳ ಅಪಾಯವು ತುಂಬಾ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಮಧುಮೇಹ ಮತ್ತು ಹೃದ್ರೋಗದ ಕಡಿಮೆ ಅಪಾಯ

ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ನಡಿಗೆಯ ವೇಗ ಮತ್ತು ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ವೇಗವಾಗಿ ನಡೆಯುವವರಿಗೆ ಮಧುಮೇಹದ ಅಪಾಯವು ಶೇಕಡಾ 30 ರಷ್ಟು ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಇದಲ್ಲದೆ, ಚುರುಕಾದ ನಡಿಗೆಯು ಅಧಿಕ ಬಿಪಿ ಮತ್ತು ಡಿಸ್ಲಿಪಿಡೆಮಿಯಾವನ್ನು ಕಡಿಮೆ ಮಾಡುತ್ತದೆ, ಅಂದರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕಾರ್ಡಿಯೋರೆಸ್ಪಿರೇಟರಿ ಫಿಟ್ನೆಸ್ ಉತ್ತಮವಾಗಿರುತ್ತದೆ

ವೇಗವಾಗಿ ನಡೆಯುವುದರಿಂದ ಕಾರ್ಡಿಯೋಸ್ಪಿರೇಟರಿ ಫಿಟ್‌ನೆಸ್ (ದೈಹಿಕ ಚಟುವಟಿಕೆಯ ಸಮಯದಲ್ಲಿ ಸ್ನಾಯುಗಳ ಮೈಟೊಕಾಂಡ್ರಿಯಾಕ್ಕೆ ಆಮ್ಲಜನಕವನ್ನು ಪೂರೈಸುವ ಉಸಿರಾಟದ ವ್ಯವಸ್ಥೆಯ ಸಾಮರ್ಥ್ಯ) ಸುಧಾರಿಸುತ್ತದೆ, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಈ ವಾತಾವರಣದಲ್ಲಿ ಉಸಿರಾಟದ ಆರೋಗ್ಯಕ್ಕೆ ಬೆಲ್ಲ ಸೇವಿಸುವುದು ಉತ್ತಮ

ಸಂಶೋಧಕರು ಏನು ಹೇಳುತ್ತಾರೆ?

ದೋಷಿಶಾ ವಿಶ್ವವಿದ್ಯಾನಿಲಯದ ಆರೋಗ್ಯ ಮತ್ತು ಕ್ರೀಡಾ ವಿಜ್ಞಾನಗಳ ವಿಭಾಗದ ಪ್ರಾಧ್ಯಾಪಕರಾದ ಕೊಜಿರೊ ಇಶಿ (ಅವರು ಪ್ರಮುಖ ಸಂಶೋಧಕರೂ ಆಗಿದ್ದಾರೆ) ಹೇಳುತ್ತಾರೆ, “ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರು ಚಯಾಪಚಯ ಕಾಯಿಲೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಈ ಅಧ್ಯಯನವು ಸ್ಪಷ್ಟಪಡಿಸುತ್ತದೆ. ವೇಗದಲ್ಲಿ ನಡೆಯುವವರು ಅಧಿಕ ಬಿಪಿ, ಮಧುಮೇಹ, ಡಿಸ್ಲಿಪಿಡೆಮಿಯಾ ಅಂದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಬೊಜ್ಜಿನಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ