AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024: ಹೋಳಿದಂದು ನಿಮ್ಮ ಮನೆಯ ಅಲಂಕಾರ ಹೇಗಿರಬೇಕು? ಕಡಿಮೆ ಖರ್ಚಿನಲ್ಲಿ ಮಾಡುವುದು ಹೇಗೆ?

ಭಾರತದಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬದ ಆಚರಣೆಯು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದೆ. ಆದರೆ ಈ ಓಕುಳಿ ಹಬ್ಬ ಅಥವಾ ಹೋಳಿ ಹಬ್ಬವು ಬಣ್ಣಗಳಿಂದ ಕೂಡಿದ ಹಬ್ಬ. ಈ ಹಬ್ಬವೆಂದರೇನೇ ಹಾಗೆ ಸಂಭ್ರಮ ಸಡಗರದಿಂದ ತುಂಬಿರುತ್ತದೆ. ಮನೆಯ ತುಂಬಾ ಹಬ್ಬದ ಕಳೆ ಬರಬೇಕಾದರೆ ಮನೆಯ ಸಿಂಗಾರ, ಹಬ್ಬದಡುಗೆ ಬಣ್ಣಗಳ ಈ ಹೋಳಿ ಹಬ್ಬಕ್ಕೆ ಮನೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳಬಹುದು. ಹೋಳಿ ಹಬ್ಬಕ್ಕೆ ಮನೆಯ ಸಿಂಗರಿಸಲು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು.

Holi 2024: ಹೋಳಿದಂದು ನಿಮ್ಮ ಮನೆಯ ಅಲಂಕಾರ ಹೇಗಿರಬೇಕು? ಕಡಿಮೆ ಖರ್ಚಿನಲ್ಲಿ ಮಾಡುವುದು ಹೇಗೆ?
ಸಾಯಿನಂದಾ
| Edited By: |

Updated on: Mar 13, 2024 | 10:04 AM

Share

ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತೀಯರಿಗೆ ಬಣ್ಣಗಳ ಹಬ್ಬ ಹೋಳಿಯು ವಿಶೇಷವಾಗಿದೆ. ಈ ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡಿದ ಬಳಿಕ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಬಣ್ಣಗಳ ಎರಚಾಟವು ಜೋರಾಗಿಯೇ ಇರುತ್ತದೆ. ಮನೆಯಲ್ಲಿ ಹಬ್ಬದ ಸಂಭ್ರಮವು ಎದ್ದು ಕಾಣಬೇಕಾದರೆ ಮನೆಯನ್ನು ಅಲಂಕಾರ ಮಾಡುವುದು ಮುಖ್ಯವಾಗುತ್ತದೆ. ಹೀಗಾಗಿ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಹಬ್ಬದ ರಂಗನ್ನು ಹೆಚ್ಚಿಸಿಕೊಳ್ಳಿ.

  1. ವರ್ಣರಂಜಿತ ದೀಪಗಳು ಮತ್ತು ಪರದೆಗಳನ್ನು ಬಳಸಿ : ಬಣ್ಣ ಬಣ್ಣದ ದೀಪಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ತರುತ್ತದೆ. ಹೀಗಾಗಿ ಹೋಳಿ ಹಬ್ಬಕ್ಕೆ ಕಲರ್ ಫುಲ್ ಪರದೆಗಳ ಜೊತೆಗೆ ವರ್ಣರಂಜಿತ ಹ್ಯಾಂಗಿಂಗ್ ಲೈಟ್‌ಗಳನ್ನು ಬಳಸಿಕೊಂಡರೆ ಅದ್ಭುತವಾದ ಮನೆಯ ಅಲಂಕಾರವನ್ನು ಮಾಡಿದಂತೆಯಾಗುತ್ತದೆ. ಅದಲ್ಲದೇ, ವರ್ಣರಂಜಿತ ಬೆಡ್‌ಶೀಟ್‌ಗಳನ್ನು ಸೇರಿಸುವುದು ನಿಮ್ಮ ಮನೆಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
  2. ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳ ಬಳಕೆಯಿರಲಿ : ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡುವಲ್ಲಿ ಕಲಾತ್ಮಕ ವಸ್ತುಗಳು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳನ್ನು ಬಳಸುವುದು ಹಬ್ಬದ ನೋಟವನ್ನು ದ್ವಿಗುಣ ಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ವರ್ಣರಂಜಿತ ವಾಲ್-ಹ್ಯಾಂಗಿಂಗ್‌ಗಳು, ಕಲಾತ್ಮಕ ವಸ್ತುಗಳು, ನೇಯ್ದ ಬುಟ್ಟಿಗಳಿಂದ ಗೋಡೆಯಲ್ಲಿ ಅಲಂಕರಿಸಿಕೊಳ್ಳಿ.
  3. ಬಾಗಿಲಿಗೆ ತೋರಣವಿರಲಿ : ಭಾರತೀಯರು ಹಬ್ಬಗಳಲ್ಲಿ ಮನೆ ಬಾಗಿಲಿಗೆ ತೋರಣವು ವಿಶೇಷವಾಗಿರುತ್ತದೆ. ಈ ತೋರಣಗಳು ಹಬ್ಬದ ರಂಗನ್ನು ಹೆಚ್ಚಿಸುತ್ತದೆ. ಹೀಗಾಗಿ ಮಾವಿನ ಎಲೆಯಿಂದ ಕೃತಕ ಹೂವಿನಿಂದ ತೋರಣ ತಯಾರಿಸಿ ಬಾಗಿಲಿಗೆ ಹಾಕುವ ಮೂಲಕ ಮನೆಯ ನೋಟವನ್ನು ಹೆಚ್ಚಿಸಬಹುದು.
  4. ಮನೆಯ ಪ್ರವೇಶದ್ವಾರವು ಅಲಂಕಾರದಿಂದ ತುಂಬಿರಲಿ : ಹಬ್ಬದ ದಿನ ಮನೆಗೆ ಅತಿಥಿಗಳು ಬಂದರೆ ಅವರ ಗಮನ ಸೆಳೆಯುವಂತೆ ಪ್ರವೇಶದ್ವಾರವನ್ನು ಸಿದ್ಧಗೊಳಿಸಿ. ಮನೆಯಲ್ಲಿರುವ ವೈನ್ ಬಾಟಲಿಗಳನ್ನು ಹೂದಾನಿಯಾಗಿ ಪರಿವರ್ತಿಸಬಹುದು. ಕೃತಕ ಹೂವುಗಳಿಂದ ಮನೆಯ ದ್ವಾರವನ್ನು ಸಿಂಗರಿಸಿಕೊಳ್ಳಿ. ಮನೆ ಪ್ರವೇಶದ್ವಾರದಲ್ಲಿ ಕೃತಕ ದೀಪಗಳು, ಬಜೆಟ್ ಸ್ನೇಹಿ ರಗ್ಗುಗಳು ಹಾಗೂ ಮೇಣದ ಬತ್ತಿಗಳಿಂದ ಸಿಂಗರಿಸಿದರೆ ಮನೆಯ ಅಂದವು ದುಪ್ಪಟ್ಟಾಗಬಹುದು.
  5. ಸಾಂಪ್ರದಾಯಿಕ ಶೈಲಿಯ ರಂಗೋಲಿವಿರಲಿ : ಮನೆಯಲ್ಲಿ ಹಬ್ಬದ ಕಳೆ ತರುವುದೇ ಈ ರಂಗೋಲಿ. ಹೀಗಾಗಿ ಬಣ್ಣ ಬಣ್ಣದ ರಂಗೋಲಿ ಪುಡಿ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ತಾರವನ್ನು ಬಿಡಿಸಿ. ಈ ಚಿತ್ತಾರವು ಮನೆಯ ಮುಂಭಾಗವು ಸುಂದರವಾಗಿಸಿ ಧನಾತ್ಮಕ ಕಳೆಯನ್ನು ತರುತ್ತದೆ.
  6. ಕೈಯಿಂದ ಮಾಡಿದ ರಗ್ಗುಗಳಿಂದ ಮನೆಯ ಸೌಂದರ್ಯ ಹೆಚ್ಚಿಸಿ : ಮನೆಯು ತುಂಬಾ ವಿಸ್ತಾರವಾಗಿದ್ದರೆ ಹಬ್ಬದ ದಿನ ಖಾಲಿ ಖಾಲಿಯಿರುವ ಹಾಗೆ ಕಾಣಲು ಬಿಡಬೇಡಿ. ಹೋಳಿ ಹಬ್ಬದಂದು ಮನೆಯ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ರಗ್ಗುಗಳು, ಕೈಯಿಂದ ಮಾಡಿದ ಸೆಣಬಿನ ರಗ್ಗುಗಳು, ಬಿದಿರಿನ ರೇಷ್ಮೆ ರಗ್ಗುಗಳು ಹಾಗೂ ಹೂವಿನ ಚಿತ್ತಾರವಿರುವ ವೈವಿಧ್ಯಮಯ ಶೈಲಿಯ ರಗ್ಗುಗಳನ್ನು ಬಳಸಬಹುದು. ಈ ರಗ್ಗುಗಳನ್ನು ಪ್ರವೇಶದ್ವಾರಕ್ಕೂ ಹಾಕಿದರೆ ಮನೆಯು ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ