AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024 : ಹೋಳಿ ಆಚರಣೆಗೆ ಹೇಗೆಲ್ಲಾ ಪ್ಲಾನ್ ಮಾಡಿಕೊಂಡಿದ್ದೀರಾ? ಇದನ್ನು ಸೇರಿಸಿಕೊಳ್ಳಲಿ

ಬಣ್ಣಗಳ ಹಬ್ಬ ಹೋಳಿಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿವೆ. ಭಾರತದಾದಂತ್ಯ ಈ ಹೋಳಿಯಂದು ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯ ನೀರಿನಿಂದ ಮಿಂದೇಳಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ ಈ ಬಾರಿಯ ಹಬ್ಬವನ್ನು ರಾಸಾಯನಿಕ ಬಣ್ಣಗಳ ಬಳಕೆ ಮಾಡದೇ ಪರಿಸರ ಸ್ನೇಹಿಯಾಗಿ ಆಚರಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದರೆ ಇಲ್ಲಿರುವ ಕೆಲವು ಸಲಹೆಗಳನ್ನು ಅನುಸರಿಸಬಹುದು.

Holi 2024 : ಹೋಳಿ ಆಚರಣೆಗೆ ಹೇಗೆಲ್ಲಾ ಪ್ಲಾನ್ ಮಾಡಿಕೊಂಡಿದ್ದೀರಾ? ಇದನ್ನು ಸೇರಿಸಿಕೊಳ್ಳಲಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 6:40 PM

ಹೋಳಿಹಬ್ಬವೆಂದರೆ ಮೊದಲು ನೆನಪಾಗುವುದೇ ಬಣ್ಣಗಳು. ಹೀಗಾಗಿ ಬಣ್ಣಗಳ ಹಬ್ಬವಂದೇ ಕರೆಯಲಾಗುತ್ತದೆ. ಈ ದಿನದಂದು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಗೆ ಯಾವುದೇ ವಯಸ್ಸಿನ ಭೇದಭಾವವಿಲ್ಲದೇ ಆಚರಿಸುವ ಹಬ್ಬವಿದಾಗಿದೆ. ವರ್ಣರಂಜಿತ ಬಣ್ಣ ಗಳ ಹಬ್ಬವಾದ ಕಾರಣ ಹೆಚ್ಚಿನವರು ಈ ಬಣ್ಣಗಳಲ್ಲೆ ಆಟವಾಡುತ್ತಾರೆ. ಹಬ್ಬದ ಸಂಭ್ರಮದ ನಡುವೆ ಪರಿಸರವನ್ನು ಹಾಳಾಗದಂತೆ ರಕ್ಷಿಸುವುದು ಮುಖ್ಯ. ಹೀಗಾಗಿ ಪರಿಸರ ಸ್ನೇಹಿ ಹಬ್ಬಗಳ ಆಚರಣೆಯತ್ತ ಗಮನ ಹರಿಸುವುದು ಒಳ್ಳೆಯದು.

* ಹೋಳಿ ಹಬ್ಬಕ್ಕೆ ಉಡುಪಿನ ಆಯ್ಕೆ : ಹಬ್ಬಗಳ ಆಚರಣೆಯ ನಡುವೆ ಯೋಗಕ್ಷೇಮಕ್ಕೆ ಗಮನ ಹರಿಸುವುದು ಬಹಳ ಮುಖ್ಯ. ಬಣ್ಣಗಳ ಎರಚಾಟದ ನಡುವೆ ಯಾವ ರೀತಿಯ ಉಡುಗೆ ಧರಿಸುತ್ತೀರ ಎನ್ನುವ ಬಗ್ಗೆ ಗಮನ ಕೊಡಬೇಕಾಗುತ್ತದೆ. ಹೋಳಿ ಹಬ್ಬದ ಹಿಂದಿನ ರಾತ್ರಿ ಮೈ ಹಾಗೂ ಕೂದಲಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ನಿಮ್ಮ ಚರ್ಮ ಮತ್ತು ಕೂದಲಿನ ಮೇಲೆ ಬಣ್ಣಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬಣ್ಣಗಳ ಎರಚಾಟದ ವೇಳೆ ಉದ್ದ ತೋಳಿನ ಬಟ್ಟೆ ಮತ್ತು ಉದ್ದದ ಪ್ಯಾಂಟ್ ಧರಿಸುವುದು ಉತ್ತಮ. ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ ನಿಮ್ಮ ಚರ್ಮವನ್ನು ತೇವಗೊಳಿಸುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.

* ಸಾವಯವ ಹೋಳಿ ಬಣ್ಣಗಳ ಆಯ್ಕೆ ಇರಲಿ : ಬಣ್ಣಗಳೊಂದಿಗೆ ಆಟವಾಡುವುದು ಹೋಳಿಯ ಹಬ್ಬದ ವಿಶೇಷ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳ ಬದಲಾಗಿ ಮನೆಯಲ್ಲೇ ತಯಾರಿಸುವುದು ಉತ್ತಮ. ಹೀಗಾಗಿ ಅಕ್ಕಿ ಹಿಟ್ಟು, ಅರಿಶಿನ, ಒಣಗಿದ ಹೂವಿನ ಪುಡಿ, ಶ್ರೀಗಂಧ ಹೀಗೆ ನೈಸರ್ಗಿಕ ಪದಾರ್ಥಗಳಿಂದ ಮಾಡಲ್ಪಟ್ಟ ಪರಿಸರ ಸ್ನೇಹಿ ಹೋಳಿ ಬಣ್ಣಗಳ ಆಯ್ಕೆ ಮಾಡಿಕೊಳ್ಳಿ. ಇದು ಚರ್ಮಕ್ಕೆ ಮತ್ತು ಕಣ್ಣುಗಳಿಗೆ ಮಾತ್ರವಲ್ಲದೆ ಪರಿಸರಕ್ಕೂ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ.

* ನೀರಿನ ಬಳಕೆ ಮಿತವಾಗಿರಲಿ : ಹೋಳಿ ಹಬ್ಬದಲ್ಲಿ ಬಣ್ಣಗಳಿಂದ ಕೂಡಿದ ನೀರನ್ನು ಬಳಸುತ್ತಾರೆ. ಹೀಗಾಗಿ ಪರಿಸರ ಸ್ನೇಹಿ ಆಚರಣೆಯಾಗಿರುವ ಕಾರಣ ನೀರು ಹೆಚ್ಚು ಪೋಲಾಗುವುದನ್ನು ತಪ್ಪಿಸಬಹುದು. ಬೇಸಿಗೆಯ ಸಮಯದಲ್ಲಿ ನೀರಿನ ಕೊರತೆಯಿರುವ ಕಾರಣ ಎಚ್ಚರ ವಹಿಸುವುದು ಒಳ್ಳೆಯದು. ಹೋಳಿ ಆಡುವ ಸಮಯದಲ್ಲಿ ನಿಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ಯಗಳು ನೀರನ್ನು ಹೀರಿಕೊಳ್ಳುವ ಸಾಧ್ಯತೆಯಿರುತ್ತದೆ. ರಾಸಾಯನಿಕ ಬಣ್ಣಗಳ ನೀರು ಸಸ್ಯಗಳಿಗೆ ಹಾನಿಯನ್ನುಂಟು ಮಾಡುತ್ತದೆ. ನೀರಿನ ಮಿತ ಬಳಕೆಯೊಂದಿಗೆ ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಿ.

* ಬಲೂನ್ ಗಳು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಿ : ನೀರಿನ ಬಲೂನ್‌ಗಳೊಂದಿಗೆ ಹೋಳಿ ಆಡುವುದು ಮಕ್ಕಳು ಮತ್ತು ವಯಸ್ಕರಿಗೆ ಹಾಗೂ ಪರಿಸರಕ್ಕೂ ಅಪಾಯಕಾರಿಯಾಗಿದೆ. ಯಾವುದೇ ರೀತಿಯ ಮಾಲಿನ್ಯವನ್ನು ಉಂಟುಮಾಡುವುದನ್ನು ತಪ್ಪಿಸಲು ಹೋಳಿ ಸಮಯದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೀರಿನ ಬಲೂನ್‌ಗಳನ್ನು ಬಳಸಬೇಕಾಗಿಲ್ಲ. ಆಸಕ್ತಿದಾಯಕ ಒಳಾಂಗಣ ಮತ್ತು ಹೊರಾಂಗಣ ಆಟಗಳತ್ತ ಗಮನ ಕೊಡಬಹುದು.

* ಅಲಂಕಾರಕ್ಕೆ ಹೂವುಗಳನ್ನು ಬಳಸಿ : ಹಬ್ಬದ ವಾತಾವರಣವು ಸೃಷ್ಟಿಯಾಗಬೇಕಾದರೆ ಮನೆಯ ಅಲಂಕಾರವು ಪ್ರಮುಖವಾಗಿರುತ್ತದೆ. ಮನೆಯ ಹೂದೋಟದಲ್ಲಿರುವ ಬಣ್ಣ ಬಣ್ಣದ ಹೂಗಳಿಂದ ಮನೆಯನ್ನು ವ್ಯವಸ್ಥಿತವಾಗಿ ಅಲಂಕರಿಸಿ. ಮನೆಯ ಮುಂಬಾಗಿಲಿಗೆ ಹೂವಿನ ಎಸಳಿಂದ ರಂಗೋಲಿ ಬಿಡಿಸಿ ಹೀಗೆ ಬಗೆ ಬಗೆಯಲ್ಲಿ ಮನೆಯನ್ನು ಆತ್ಯಾರ್ಕಷವಾಗಿ ಕಾಣುವಂತೆ ಮಾಡಬಹುದು.

ಇದನ್ನೂ ಓದಿ: ನಿಮ್ಮ ಮ್ಯಾರೇಜ್ ಫಿಕ್ಸ್ ಆಗಿದ್ಯಾ, ಹಾಗಾದ್ರೆ ಮಾನಸಿಕ ಸಿದ್ಧತೆ ಹೀಗಿರಲಿ

* ಸಿಹಿ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ : ಹೋಳಿ ಹಬ್ಬವೆಂದರೆ ಬಣ್ಣಗಳು ಮಾತ್ರವಲ್ಲ. ಮನೆಯಲ್ಲೇ ಹಬ್ಬದ ವಾತಾವರಣವನ್ನು ಸೃಷ್ಟಿಸಲು ಹಬ್ಬದಡುಗೆ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ಸಿಹಿ ತಿಂಡಿಗಳನ್ನು ತರುವ ಬದಲು ಮನೆಮಂದಿಯೆಲ್ಲಾ ಜೊತೆ ಸೇರಿ ವಿವಿಧ ಬಗೆಗೆ ಸ್ವೀಟ್ ಗಳನ್ನು ಮಾಡಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.

* ಹೋಳಿ ದಹನಕ್ಕೆ ಪರಿಸರ ಸ್ನೇಹಿ ತ್ಯಾಜ್ಯಗಳ ಬಳಕೆಯಿರಲಿ : ಹೋಳಿ ದಹನಕ್ಕೆ ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ. ಪರಿಸರ ಸ್ನೇಹಿ ತ್ಯಾಜಗಳಾದ ಸಗಣಿ, ತೆಂಗಿನಕಾಯಿ ಸಿಪ್ಪೆ, ಒಣಗಿದ ಎಲೆಗಳು, ಕಟ್ಟಿಗೆಗಳನ್ನು ಸುಡುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಜೊತೆಗೆ ಆರೋಗ್ಯಕ್ಕೆ ತೊಂದರೆಯು ಇರುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್