Sign In

By signing in or creating an account, you agree with Associated Broadcasting Company's Terms & Conditions and Privacy Policy.

Maggi Masala Recipe: ಮನೆಯಲ್ಲಿಯೇ ಆರೋಗ್ಯಕರ ಮ್ಯಾಗಿ ಮ್ಯಾಜಿಕ್ ಮಸಾಲ ತಯಾರಿಸುವುದು ಹೇಗೆ? 

ಅನೇಕ ಜನರು ಮ್ಯಾಗಿ ಮ್ಯಾಜಿಕ್  ಮಸಾಲಾವನ್ನು  ನೂಡಲ್ಸ್ಗೆ ಮಾತ್ರವಲ್ಲದೆ ವಿವಿಧ ಅಡುಗೆಗಳಲ್ಲೂ ಬಳಸುತ್ತಾರೆ. ಈ ಮಸಾಲೆ ಅಡುಗೆಯ  ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ  ಈ ಪಾಕೇಜ್ಡ್ ಮ್ಯಾಗಿ ಮಸಾಲಾ ಆರೋಗ್ಯಕ್ಕೆ ಉತ್ತಮವೇ ಎಂದು  ಅದರ ಗುಣಮಟ್ಟದ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಹೀಗಿರುವಾಗ ಪ್ಯಾಕೇಜ್ಡ್ ಮ್ಯಾಗಿ ಮಸಾಲಾವನ್ನು ಅಡುಗೆಗೆ ಬಳಸುವ ಬದಲು ನೀವು ಅದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಈ ಒಂದು ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ. 

Maggi Masala Recipe: ಮನೆಯಲ್ಲಿಯೇ ಆರೋಗ್ಯಕರ ಮ್ಯಾಗಿ ಮ್ಯಾಜಿಕ್ ಮಸಾಲ ತಯಾರಿಸುವುದು ಹೇಗೆ? 
ಮ್ಯಾಗಿ ಮ್ಯಾಜಿಕ್ ಮಸಾಲ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 14, 2023 | 4:10 PM

ಮ್ಯಾಗಿ ಭಾರತದ ಅತ್ಯಂತ ಜನಪ್ರಿಯ ನೂಡಲ್ಸ್ಗಳಲ್ಲಿ ಒಂದಾಗದೆ.  ಸಾಮಾನ್ಯವಾಗಿ ಮ್ಯಾಗಿಯನ್ನು ಎಲ್ಲಾ ವಯಸ್ಸಿನ ಜನರು ತಿನ್ನಲು ಇಷ್ಟಪಡುತ್ತಾರೆ. ಅಷ್ಟೇ ಮಾತ್ರವಲ್ಲದೆ ನೂಡಲ್ಸ್ನ ರುಚಿ ಹೆಚ್ಚಿಸುವ ಮ್ಯಾಗಿ ಮ್ಯಾಜಿಕ್ ಮಸಾಲಾವನ್ನು ಅನೇಕರು ವಿವಿಧ ಬಗೆಯ ಅಡುಗೆಗಳಲ್ಲೂ ಬಳಸುತ್ತಾರೆ.  ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಪ್ಯಾಕೇಜ್ಡ್ ಉತ್ಪನ್ನದ ಗುಣಮಟ್ಟದ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಂದು ಅಡುಗೆಗೂ ಈ ಪ್ಯಾಕೇಜ್ಡ್ ಮ್ಯಾಗಿ ಮ್ಯಾಜಿಕ್ ಮಸಾಲೆಯನ್ನು ಬಳಸುವುದು ಸೂಕ್ತವೇ ಎಂದು ಯೋಚಿಸುತ್ತಾರೆ. ಹೀಗಿರುವಾಗ ನೀವು ಈ ಮಸಾಲೆಯನ್ನು ಏಕೆ ಮನೆಯಲ್ಲಿಯೇ ತಯಾರಿಸಬಾರದು? ಮ್ಯಾಗಿ ಮ್ಯಾಜಿಕ್ ಮಸಾಲಾವನ್ನು ತಯಾರಿಸುವುದು ಸುಲಭ ಮಾತ್ರವಲ್ಲದೆ, ಈ ಮಸಾಲೆ ಆರೋಗ್ಯಕರ ಹಾಗೂ ಪ್ಯಾಕೇಜ್ಡ್ ಮ್ಯಾಗಿ ಮಸಾಲಾಕ್ಕಿಂತ ಹೆಚ್ಚು ಸುವಾಸನೆ ಮತ್ತು ರುಚಿಯನ್ನು ಹೊಂದಿರುತ್ತದೆ.  ಈ ಸರಳ ಪಾಕವಿಧಾನದ ಮಾಹಿತಿಯನ್ನು ಪೌಷ್ಟಿಕ ತಜ್ಞೆ  ಕಿರಣ ಕುಕ್ರೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮ್ಯಾಗಿ ಮ್ಯಾಜಿಕ್ ಮಸಾಲಾ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಜೀರಿಗೆ – 2 ಚಮಚ

• ಕೊತ್ತಂಬರಿ ಬೀಜ – ¼ ಕಪ್

• ಸೋಂಪು ಕಾಳು – 1 ಟೀಸ್ಪೂನ್

• ಮೆಂತ್ಯ ಕಾಳು  – ¼  ಟೀಸ್ಪೂನ್

• ಕರಿ ಮೆಣಸು – ½ ಟೀಸೂನ್

• ಅಚ್ಚಖಾರದ ಪುಡಿ – 1 ಟೀಸ್ಪೂನ್

• ಅರಶಿನ ಪುಡಿ – 1 ಟೀಸ್ಪೂನ್

• ಕಲ್ಲುಪ್ಪು – 1 ಟೀಸ್ಪೂನ್

• ಶುಂಠಿ ಪುಡಿ – 1 ಟೀಸ್ಪೂನ್

• ಆಮ್ಚೂರ್ ಪುಡಿ – 1 ಟೀಸ್ಪೂನ್

• ಕಲ್ಲು ಸಕ್ಕರೆ –  1 ಟೀಸ್ಪೂನ್

• ಈರುಳ್ಳಿ ಪುಡಿ – 2 ಟೀಸ್ಪೂನ್

• ಬೆಳ್ಳುಳ್ಳಿ ಪುಡಿ – 2 ಟೀಸ್ಪೂನ್

• ಜೋಳದ ಹಿಟ್ಟು  (ಕಾರ್ನ್ ಫ್ಲೋರ್) – 1 ಟೀಸ್ಪೂನ್

• ಒಣ ಮೆಣಸಿನಕಾಯಿ – 4

• ದಾಲ್ಚಿನ್ನಿ – 1 ಇಂಚು

• ಹಸಿರು ಏಲಕ್ಕಿ – 4

• ಲವಂಗ – 4

• ಪಲಾವ್ ಎಲೆ – 2

ಇದನ್ನೂ ಓದಿ:ದೀಪಾವಳಿಯಂದು ಕಾಜು ಬರ್ಫಿ, ಕೇಸರಿ ಪೇಡಾ ಮನೆಯಲ್ಲಿಯೇ ತಯಾರಿಸಿ, ಇಲ್ಲಿದೆ ಸುಲಭ ವಿಧಾನ

ಮ್ಯಾಗಿ ಮ್ಯಾಜಿಕ್ ಮಸಾಲಾ ತಯಾರಿಸುವ  ಸುಲಭ ವಿಧಾನ:

• ಮ್ಯಾಗಿ ಮ್ಯಾಜಿಕ್ ಮಸಾಲಾ ಮಾಡಲು ಮೊದಲಿಗೆ ಗ್ಯಾಸ್ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದು ಬಿಸಿಯಾದ  ಬಳಿಕ ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಸೋಂಪು ಕಾಳು, ಮೆಂತ್ಯ ಕಾಳುಗಳನ್ನು  ಹಾಕಿ  (ಡ್ರೈ ರೋಸ್ಟ್) ಹುರಿಯಿರಿ.

• ನಂತರ ಅದೇ ಪ್ಯಾನ್ಗೆ   ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ, ಲವಂಗ, ಒಣಮೆಣಸಿನಕಾಯಿ, ಕರಿಮೆಣಸನ್ನು  ಸೇರಿಸಿ 10 ನಿಮಿಷಗಳ ಕಾಲ ಅಥವಾ ಮಸಾಲೆ ಪದಾರ್ಥಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಿ.

ವಿಡಿಯೋ ಇಲ್ಲಿದೆ:

• ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಹುರಿದ ಬಳಿಕ ಅದನ್ನು ಸ್ವಲ್ಪ ತಣ್ಣಗಾಗಿಸಿ,  ಆ ಮಿಶ್ರಣವನ್ನು  ಒಂದು ಮಿಕ್ಸಿಜಾರ್ನಲ್ಲಿ ಹಾಕಿ ನುಣ್ಣಗೆ  ಪುಡಿಮಾಡಿಕೊಳ್ಳಿ. ಮಸಾಲೆ   ನುಣ್ಣಗೆ ಪುಡಿಯಾದ ಬಳಿಕ ಅದಕ್ಕೆ  ಅರಶಿನ ಪುಡಿ, ಅಚ್ಚಖಾರದ ಪುಡಿ, ಆಮ್ಚೂರ್ ಪುಡಿ, ಶುಂಠಿ ಪುಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಪುಡಿ, ಕಾರ್ನ್ ಫ್ಲೋರ್, ಕಲ್ಲುಪ್ಪು, ಕಲ್ಲು ಸಕ್ಕರೆಯನ್ನು ಸೇರಿಸಿ ಇನ್ನೊಂದು ಬಾರಿ ಪುಡಿ ಮಾಡಿಕೊಂಡರೆ ಮ್ಯಾಗಿ ಮ್ಯಾಜಿಕ್ ಮಸಾಲಾ ಸಿದ್ಧ. ಈ ಮಸಾಲೆಯನ್ನು ನೀವು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಅದು ಕೆಡದಂತೆ ಸಂಗ್ರಹಿಸಿಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Tue, 14 November 23

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ