Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ವಿದ್ಯುತ್ ಶಾಕ್ ಹೊಡೆದರೆ ತಕ್ಷಣ ಏನು ಮಾಡಬೇಕು? ಮಾಹಿತಿ ಇಲ್ಲಿದೆ

ಮಕ್ಕಳದ್ದು ತುಂಬಾ ಕುತೂಹಲಕಾರಿ ಸ್ವಭಾವ, ಎಲ್ಲೆಲ್ಲಿ ಏನೇನಿದೆ ನೋಡಬೇಕೆನ್ನುವ ಹಂಬಲ, ಅದನ್ನು ಮುಟ್ಟಬೇಕೆನ್ನುವ ಆತುರ. ಪೋಷಕರು ಅಕ್ಕಪಕ್ಕದಲ್ಲಿಲ್ಲವೆಂದರೆ ಎಲ್ಲೆಲ್ಲೋ ಓಡಾಡುತ್ತಾರೆ. ಏನೇನೋ ತಾಗಿಸಿಕೊಂಡು ಗಾಯ ಮಾಡಿಕೊಳ್ಳುತ್ತಾರೆ. ಮನೆಯೊಳಗೂ ಪೀಠೋಪಕರಣಗಳು, ಗೋಡೆಗಳ ಮೇಲಿನ ಸ್ವಿಚ್‌ಗಳು ಮತ್ತು ಸಾಕೆಟ್‌ಗಳು, ವೈರಿಂಗ್ ಇತ್ಯಾದಿಗಳನ್ನು ಅವರು ಪದೇ ಪದೇ ಸ್ಪರ್ಶಿಸಲು ಪ್ರಯತ್ನಿಸುತ್ತಾರೆ.

ಮಕ್ಕಳಿಗೆ ವಿದ್ಯುತ್ ಶಾಕ್ ಹೊಡೆದರೆ ತಕ್ಷಣ ಏನು ಮಾಡಬೇಕು? ಮಾಹಿತಿ ಇಲ್ಲಿದೆ
ಮಗುImage Credit source: Carlson law firm
Follow us
ನಯನಾ ರಾಜೀವ್
|

Updated on: Sep 22, 2023 | 3:41 PM

ಮಕ್ಕಳದ್ದು ತುಂಬಾ ಕುತೂಹಲಕಾರಿ ಸ್ವಭಾವ, ಎಲ್ಲೆಲ್ಲಿ ಏನೇನಿದೆ ನೋಡಬೇಕೆನ್ನುವ ಹಂಬಲ, ಅದನ್ನು ಮುಟ್ಟಬೇಕೆನ್ನುವ ಆತುರ. ಪೋಷಕರು ಅಕ್ಕಪಕ್ಕದಲ್ಲಿಲ್ಲವೆಂದರೆ ಎಲ್ಲೆಲ್ಲೋ ಓಡಾಡುತ್ತಾರೆ. ಏನೇನೋ ತಾಗಿಸಿಕೊಂಡು ಗಾಯ ಮಾಡಿಕೊಳ್ಳುತ್ತಾರೆ. ಮನೆಯೊಳಗೂ ಪೀಠೋಪಕರಣಗಳು, ಗೋಡೆಗಳ ಮೇಲಿನ ಸ್ವಿಚ್‌ಗಳು ಮತ್ತು ಸಾಕೆಟ್‌ಗಳು, ವೈರಿಂಗ್ ಇತ್ಯಾದಿಗಳನ್ನು ಅವರು ಪದೇ ಪದೇ ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಅನೇಕ ಬಾರಿ ಬಲವಾದ ವಿದ್ಯುತ್ ಶಾಕ್ ಹೊಡೆಯುತ್ತದೆ. ಅನೇಕ ಬಾರಿ ಪೋಷಕರಿಗೆ ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ.ಅವರು ಭಯಭೀತರಾಗುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ವಿದ್ಯುತ್ ಶಾಕ್ ತಗುಲಿದರೆ ತಕ್ಷಣ ಏನು ಮಾಡಬೇಕು, ಮಗುವಿನ ಜೀವ ಉಳಿಸುವ ಹಾಗೂ ಅಪಾಯವನ್ನು ಕಡಿಮೆ ಮಾಡುವ ವಿಧಾನಗಳ ತಿಯೋಣ.

ಚಿಕ್ಕಮಕ್ಕಳಿರುವ ಮನೆಯಲ್ಲಿ ಪೋಷಕರು ಎಷ್ಟು ಜಾಗ್ರತೆಯಿಂದಿದ್ದರೂ ಸಾಲದು, ಇಸ್ತ್ರಿ ಪೆಟ್ಟಿಗೆಯಿಂದ ಹಿಡಿದು ಮೊಬೈಲ್, ಬೆಡ್​ ಲ್ಯಾಂಪ್​ಗಳು ಹೀಗೆ ಹಲವು ಬಗೆಯ ವಿದ್ಯುತ್ ಉಪಕರಣಗಳು ಮಕ್ಕಳಿಗೆ ಕೈಗೆಟುವಂತೆಯೇ ಇರುತ್ತದೆ.

ಇನ್ಸುಲೇಟೆಡ್ ವಸ್ತುಗಳಿಂದ ಮಗುವನ್ನು ತೆಗೆದುಹಾಕಿ ಕರೆಟ್​ನೊಂದಿಗೆ ಸಂಪರ್ಕಕ್ಕೆ ಬಂದಿರುವ ವಸ್ತುಗಳಿಂದ ಮಗುವನ್ನು ಪ್ರತ್ಯೇಕಿಸಿ. ರಬ್ಬರ್ ಶೂ, ಪ್ಲಾಸ್ಟಿಕ್ ರಾಡ್, ಒಣ ಮರದಂತಹ ಯಾವುದೇ ಇನ್ಸುಲೇಟೆಡ್ ವಸ್ತುವಿನ ಸಹಾಯದಿಂದ ಇದನ್ನು ಮಾಡಿ. ಇವುಗಳು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ಬಟ್ಟೆ, ಟವೆಲ್ ಇತ್ಯಾದಿಗಳಿಂದಲೂ ಇದನ್ನು ಮಾಡಬಹುದು. ಕರೆಂಟ್‌ನೊಂದಿಗೆ ಸಂಪರ್ಕಕ್ಕೆ ಬರದಂತೆ ನಿಮ್ಮನ್ನು ರಕ್ಷಿಸಿಕೊಳ್ಳಿ. ಮಗುವನ್ನು ನೇರವಾಗಿ ನಿಮ್ಮ ಕೈಗಳಿಂದ ಮುಟ್ಟಬೇಡಿ, ಇದರಿಂದ ನಿಮಗೂ ವಿದ್ಯುತ್ ಪ್ರವಹಿಸಬಹುದು.

ಮತ್ತಷ್ಟು ಓದಿ: ಸ್ನಾನ ಮಾಡುವಾಗ ಗೀಸರ್ ಸ್ಫೋಟಗೊಳ್ಳಬಹುದು! ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ಮಗುವನ್ನು ಬೆಚ್ಚಗೆ ಇರಿಸಿ ಮಗುವನ್ನು ಬೆಚ್ಚಗಿರಿಸಿ ಮತ್ತು ಆರಾಮದಾಯಕವಾಗಿರಿಸಿ. ಏಕೆಂದರೆ ಕರೆಂಟ್ ನಿಂದಾಗಿ ದೇಹದಲ್ಲಿ ಶಕ್ತಿಯ ನಷ್ಟವಾಗುತ್ತದೆ. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಪ್ರವಾಹದಿಂದಾಗಿ, ದೇಹದ ಉಷ್ಣತೆಯು ಕಡಿಮೆಯಾಗುತ್ತದೆ, ಆದ್ದರಿಂದ ಮಗುವನ್ನು ಬೆಚ್ಚಗಿಡುವ ಮೂಲಕ ದೇಹವನ್ನು ಸ್ಥಿರ ತಾಪಮಾನಕ್ಕೆ ತರುವುದು ಮುಖ್ಯವಾಗುತ್ತದೆ. ಬೆಚ್ಚಗಿನ ಬಟ್ಟೆಯಿಂದ ಮಗುವನ್ನು ಕಟ್ಟಿಕೊಳ್ಳಿ. ಮಗುವನ್ನು ನಿಮ್ಮ ಮಡಿಲಲ್ಲಿ ತೆಗೆದುಕೊಂಡು ಅಥವಾ ದೇಹದೊಂದಿಗೆ ಸಂಪರ್ಕದಲ್ಲಿಟ್ಟುಕೊಳ್ಳುವ ಮೂಲಕ ನೀವು ಮಗುವಿಗೆ ಉಷ್ಣತೆಯನ್ನು ಕಾಪಾಡಬಹುದು.

ಮೈನ್ ಸ್ವಿಚ್ ಆಫ್​ ಮಾಡಿ

ವಿದ್ಯುತ್ ಶಾಕ್ ಹೊಡೆದ ಸಂದರ್ಭದಲ್ಲಿ ಮೈನ್ ಸ್ವಿಚ್​ ಅನ್ನು ಆಫ್​ ಮಾಡಿ.

ಶುದ್ಧ ನೀರಿನಿಂದ ತೊಳೆಯಿರಿ ಮಗುವಿನ ದೇಹಕ್ಕೆ ಯಾವುದೇ ಔಷಧಿ ಹಚ್ಚಬೇಡಿ, ಶುದ್ಧ ನೀರಿನಿಂದ ಮಾತ್ರ ತೊಳೆಯಿರಿ. ಮಗುವಿಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಒದಗಿಸುವುದು ಬಹಳ ಮುಖ್ಯ, ಆದ್ದರಿಂದ ನೀವು ಮಗುವನ್ನು ತಕ್ಷಣ ವೈದ್ಯರ ಬಳಿಗೆ ಕೊಂಡೊಯ್ಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!