AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ವೇಳೆ ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಇದು ಹೃದಯಾಘಾತದ ಎಚ್ಚರಿಕೆ

ದೇಹದ ಪ್ರತಿಯೊಂದು ಭಾಗಕ್ಕೂ ಒಂದಕ್ಕೊಂದು ಸಂರ್ಪಕ ಇರುತ್ತದೆ. ಇದು ದೇಹ ಯಾವುದೇ ಭಾಗಕ್ಕೂ ತೊಂದರೆ ಆಗುತ್ತಿದೆ ಎಂಬ ಸೂಚನೆಯನ್ನು ದೇಹದ ಇನ್ನೊಂದು ಭಾಗ ಸೂಚನೆಯನ್ನು ನೀಡುತ್ತದೆ, ದೇಹದ ಪ್ರಮುಖ ಭಾಗಗಳಲ್ಲಿ ಹೃದಯವು ಒಂದು. ಹೃದಯಕ್ಕೆ ಏನಾದರೂ ಅಡಚಣೆ ಆಗುತ್ತಿದೆ ಎಂದರೆ, ದೇಹದ ಹಲವು ಭಾಗಗಳು ಎಚ್ಚರಿಕೆಯನ್ನು ನೀಡುತ್ತದೆ. ಯಾವೆಲ್ಲ ಎಚ್ಚರಿಕೆಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ರಾತ್ರಿ ವೇಳೆ ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಇದು ಹೃದಯಾಘಾತದ ಎಚ್ಚರಿಕೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 25, 2025 | 4:45 PM

Share

ದೇಹದಲ್ಲಿರುವ ಪ್ರತಿಯೊಂದು ಭಾಗವು ಒಂದಕ್ಕೊಂದು ಸಂಪರ್ಕ ಇರುತ್ತದೆ. ಇದರಿಂದ ದೇಹದ ಒಂದು ಭಾಗದಲ್ಲಿ ಆಗುವ ಬದಲಾವಣೆ ಸೂಚನೆಯನ್ನು ಇನ್ನೊಂದು ಭಾಗ ಹೇಳುತ್ತದೆ. ಈ ಹೃದಯಾಘಾತ (Heart Blockage) ಎನ್ನುವುದು ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಇತ್ತೀಚೆಗೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಹೃದಯಾಘಾತ ಆಗುವ ಮುನ್ನ ಮನುಷ್ಯನ ದೇಹದಲ್ಲಿ ಕೆಲವೊಂದು ಭಾಗಗಳು ಸೂಚನೆಯನ್ನು ನೀಡುತ್ತದೆ, ಹೃದಯಾಘಾತಕ್ಕೂ ಮೊದಲು ಕಾಲಿನ ( Leg Pain) ಭಾಗಗಳಲ್ಲಿ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ. ಹೃದಯ ಅಪಧಮನಿಯಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಕೆಲವೊಂದು ಅಡಚಣೆಗಳು ಸಂಗ್ರಹವಾಗುತ್ತದೆ. ಈ ವೇಳೆ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಅಡೆತಡೆಗಳು ಹೃದಯಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಪೂರೈಕೆಯನ್ನು ನಿರ್ಬಂಧಿಸುತ್ತವೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ವೇಳೆ ಇಂತಹ ಅಡಚಣೆಗಳು ಆಗುತ್ತಿದೆ ಎಂಬುದನ್ನು ಕಾಲುಗಳು ಸೂಚನೆ ನೀಡುತ್ತದೆ.

ಕಾಲಿನಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

  • ಕಾಲುಗಳಲ್ಲಿ ನೋವು ಮತ್ತು ಅಸ್ವಸ್ಥತೆ : ಹೃದಯ ಅಪಧಮನಿಗಳಲ್ಲಿನ ಅಡಚಣೆ ಉಂಟಾದಾಗ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ರಾತ್ರಿ ವೇಳೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜತೆಗೆ ಅಸ್ವಸ್ಥತೆ ಉಂಟಾಗುತ್ತದೆ. ಮರಗಟ್ಟುವಿಕೆ, ಭಾರವಾದ ಭಾವನೆ ಅಥವಾ ಸ್ನಾಯು ಸೆಳೆತ (ಕ್ಲಾಡಿಕೇಶನ್) ಹೀಗೆ ಅನೇಕ ವಿಧಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ನಡೆಯುವಾಗ ಕಾಣಿಸಿಕೊಳ್ಳುತ್ತದೆ. ವಿಶ್ರಾಂತಿ ಪಡೆದರೆ ಕಡಿಮೆ ಆಗುತ್ತದೆ. ಒಂದು ವೇಳೆ ಈ ರೀತಿ ನೋವು ಎರಡು ದಿನಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡರೆ, ಇದು ಹೃದಯಾಘಾತದ ಎಚ್ಚರಿಕೆ ಎಂದು ಪರಿಗಣಿಸಲಾಗುತ್ತದೆ.
  • ಕಾಲುಗಳು ಮರಗಟ್ಟುವಿಕೆ: ಪಾದಗಳು ಅಥವಾ ಕಾಲುಗಳಲ್ಲಿ ಶೀತ ಅಥವಾ ಮರಗಟ್ಟುವಿಕೆಯ ಭಾಸವಾದರೆ ಅದು ಹೃದಯ ಅಪಧಮನಿಗಳಲ್ಲಿನ ಅಡಚಣೆಗಳ ಸಾಮಾನ್ಯ ಲಕ್ಷಣವಾಗಿದೆ.ರಕ್ತದ ಹರಿವು ಕಡಿಮೆಯಾದರೆ ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುವುದಿಲ್ಲ. ಒಂದು ಕಾಲುಗಳು ಅಥವಾ ಪಾದಗಳು ತಣ್ಣಗಾಗಿದ್ದರೆ ಇದು ಸ್ಪಷ್ಟವಾಗುತ್ತದೆ. ಈ ಸಂವೇದನೆಯು ಆಗಾಗ್ಗೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.
  • ಕಾಲುಗಳಲ್ಲಿ ಊತ : ಕಾಲುಗಳು ಅಥವಾ ಪಾದಗಳಲ್ಲಿ ಊತ ಕಾಣಿಸಿಕೊಂಡರೆ ಹೃದಯ ಅಪಧಮನಿಗಳಲ್ಲಿನ ಅಡಚಣೆಗಳ ಸಂಕೇತವಾಗಿರುತ್ತದೆ. ರಕ್ತದ ಹರಿವಿನಲ್ಲಿ ಕಳಪೆ ಇರುತ್ತದೆ. ಇದು ದೇಹದಲ್ಲಿ ದ್ರವದ ಶೇಖರಣೆಗೆ ಕಾರಣವಾಗುತ್ತದೆ. ಈ ಲಕ್ಷಣಗಳು ಕಾಲಿನಲ್ಲಿ ರಾತ್ರಿ ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬಾರದು, ಏಕೆಂದರೆ ಇದು ಹೃದಯ ಸಮಸ್ಯೆಗಳು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.
  • ಕಾಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ: ಕಾಲುಗಳು ಮತ್ತು ಪಾದಗಳ ಚರ್ಮದಲ್ಲಿ ಬದಲಾವಣೆಯಾದರೆ ಹೃದಯದ ಅಪಧಮನಿಗಳಲ್ಲಿನ ಅಡಚಣೆಗಳ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕಾಲಿನ ಚರ್ಮವು ಹೊಳಪು, ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ ಇದು ಅದರ ಸೂಚನೆ ಎಂದು ಹೇಳಬಹುದು. ಇವೆಲ್ಲವೂ ಆಮ್ಲಜನಕಯುಕ್ತ ರಕ್ತದ ಕೊರತೆಯಿಂದ ಉಂಟಾಗುತ್ತವೆ.
  • ಕಾಲಿನಲ್ಲಿ ಗುಣವಾಗದ ಗಾಯಗಳು: ಕಾಲಿನ ಅಥವಾ ಪಾದಗಳಲ್ಲಿ ಯಾವುದೇ ಗಾಯಗಳು ಅಥವಾ ಹುಣ್ಣುಗಳು ಕಡಿಮೆಯಾಗದೇ ಇದ್ದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಸೂಚನೆಯನ್ನು ನೀಡುತ್ತಿದೆ ಎಂದರ್ಥ. ರಕ್ತದ ಹರಿವು ಕಡಿಮೆಯಾದರೆ, ಈ ಗಾಯಗಳು ಕಡಿಮೆಯಾಗುವುದಿಲ್ಲ. ಇದರಿಂದ ಗಾಯಗಳು ಹೆಚ್ಚು ಕಾಲ ಉಳಿಯಲು ಅಥವಾ ಸೋಂಕಿಗೆ ಒಳಗಾಗಲು ಕಾರಣವಾಗಬಹುದು. ಗಂಭೀರ ರಕ್ತಪರಿಚಲನಾ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ತಕ್ಷಣದಲ್ಲಿ ಗುಣಪಡಿಸುವುದು ಅಗತ್ಯವಾಗಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ