AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರು ವಡೆ ಇತರೆ ಖಾದ್ಯಗಳ ಮಾಡಿ ಕನ್ನಡಿಗರ ಹೃದಯ ಗೆದ್ದ ಲಂಡನ್ ಬಾಣಸಿಗ

ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್​ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ.

ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರು ವಡೆ ಇತರೆ ಖಾದ್ಯಗಳ ಮಾಡಿ ಕನ್ನಡಿಗರ ಹೃದಯ ಗೆದ್ದ ಲಂಡನ್ ಬಾಣಸಿಗ
FoodImage Credit source: Hindustan Times
TV9 Web
| Edited By: |

Updated on:Dec 05, 2022 | 4:49 PM

Share

ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್​ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ. ಲಂಡನ್ ಮೂಲದ ಬಾಣಸಿಗರೊಬ್ಬರು ಪ್ರತಿ ವಾರ ಒಂದರಂತೆ ಭಾರತದ ವಿವಿಧ ರಾಜ್ಯಗಳ ಪಾಕ ವಿಧಾನದ ಸರಣಿಯನ್ನು ಆರಂಭಿಸಿ ಎಲ್ಲೆಡೆ ಮನೆಮಾತಾಗುತ್ತಿದ್ದಾರೆ.

ಜೇಕ್ ಡ್ರೈಯಾನ್ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಹಂಚಿಕೊಂಡಿರುವ ವಿಡಿಯೋವನ್ನು ನೋಡಿದರೆ ನಿಮ್ಮ ಬಾಯಲ್ಲಿ ನೀರೂರುವುದಂತೂ ಸತ್ಯ. ಆಹಾರ ಉತ್ಸಾಹಿಗಳು ಆಗಸ್ಟ್‌ನಲ್ಲಿ ಪ್ರತಿ ಭಾರತೀಯ ರಾಜ್ಯವನ್ನು ಒಳಗೊಂಡ ವಾರದ ಸರಣಿಯನ್ನು ಪ್ರಾರಂಭಿಸಿದರು ಮತ್ತು ಐದು ದಿನಗಳ ಹಿಂದೆ ಕರ್ನಾಟಕದ ಖಾದ್ಯಗಳನ್ನು ಶುರು ಮಾಡಿದ್ದಾರೆ.

View this post on Instagram

A post shared by JAKE DRYAN (@plantfuture)

ಇದುವರೆಗೆ ಗುಜರಾತಿ, ಪಂಜಾಬಿ, ರಾಜಸ್ಥಾನಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಖಾದ್ಯಗಳನ್ನು ಕವರ್ ಮಾಡಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ, ಅವರು ಗೊಡ್ಡು ಸಾರು, ನಂತರ ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ತಿಂಡಿಯಾದ ಮದ್ದೂರು ವಡೆ ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಪಫ್ಡ್ ರೈಸ್ ಬಳಸಿ ಮಾಡಿದ ತಿಂಡಿ ಗಿರ್ಮಿಟ್ ಸಿದ್ಧಪಡಿಸಿದ್ದಾರೆ.

ಲಂಡನ್ ಮೂಲದ ಬಾಣಸಿಗ ಜೇಕ್ ಡ್ರೈಯಾನ್ ಅವರು ಗಿರ್ಮಿಟ್ ತಯಾರಿಸಿ ಅದನ್ನು ಸವಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಂತರ 4ನೇ ದಿನ ಚಿತ್ರಾನ್ನ – ಲೆಮನ್ ರೈಸ್ – ಮತ್ತು ಮೈಸೂರು ಬೋಂಡ ತಯಾರಿಸಿ ಮರುದಿನ ಬಿಸಿಬೇಳೆ ಬಾತ್ ಮಾಡಿದ್ದಾರೆ.

ಗೋಡಂಬಿಗಳಿಂದ ಅದನ್ನು ಅಲಂಕಾರ ಮಾಡಿದ್ದು, ನಿಜಕ್ಕೂ ಸವಿಯಬೇಕು ಎನ್ನುವ ಹಂಬಲ ತರುವಂತಿತ್ತು. ಇವೆಲ್ಲವನ್ನೂ ಹುಬ್ಬಳ್ಳಿ ಧಾರವಾಡ ಎನ್ನುವ ಇನ್ಸ್ಟಾ ಪೇಜ್​ ಒಂದು ಶೇರ್ ಮಾಡಿದೆ. ಡ್ರ್ಯಾನ್​ಗೆ ಸುಮಾರು 486,000 ಫಾಲೋವರ್ಸ್​ ಇದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Mon, 5 December 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್