Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರು ವಡೆ ಇತರೆ ಖಾದ್ಯಗಳ ಮಾಡಿ ಕನ್ನಡಿಗರ ಹೃದಯ ಗೆದ್ದ ಲಂಡನ್ ಬಾಣಸಿಗ

ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್​ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ.

ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರು ವಡೆ ಇತರೆ ಖಾದ್ಯಗಳ ಮಾಡಿ ಕನ್ನಡಿಗರ ಹೃದಯ ಗೆದ್ದ ಲಂಡನ್ ಬಾಣಸಿಗ
FoodImage Credit source: Hindustan Times
Follow us
TV9 Web
| Updated By: ನಯನಾ ರಾಜೀವ್

Updated on:Dec 05, 2022 | 4:49 PM

ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್​ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ. ಲಂಡನ್ ಮೂಲದ ಬಾಣಸಿಗರೊಬ್ಬರು ಪ್ರತಿ ವಾರ ಒಂದರಂತೆ ಭಾರತದ ವಿವಿಧ ರಾಜ್ಯಗಳ ಪಾಕ ವಿಧಾನದ ಸರಣಿಯನ್ನು ಆರಂಭಿಸಿ ಎಲ್ಲೆಡೆ ಮನೆಮಾತಾಗುತ್ತಿದ್ದಾರೆ.

ಜೇಕ್ ಡ್ರೈಯಾನ್ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಹಂಚಿಕೊಂಡಿರುವ ವಿಡಿಯೋವನ್ನು ನೋಡಿದರೆ ನಿಮ್ಮ ಬಾಯಲ್ಲಿ ನೀರೂರುವುದಂತೂ ಸತ್ಯ. ಆಹಾರ ಉತ್ಸಾಹಿಗಳು ಆಗಸ್ಟ್‌ನಲ್ಲಿ ಪ್ರತಿ ಭಾರತೀಯ ರಾಜ್ಯವನ್ನು ಒಳಗೊಂಡ ವಾರದ ಸರಣಿಯನ್ನು ಪ್ರಾರಂಭಿಸಿದರು ಮತ್ತು ಐದು ದಿನಗಳ ಹಿಂದೆ ಕರ್ನಾಟಕದ ಖಾದ್ಯಗಳನ್ನು ಶುರು ಮಾಡಿದ್ದಾರೆ.

View this post on Instagram

A post shared by JAKE DRYAN (@plantfuture)

ಇದುವರೆಗೆ ಗುಜರಾತಿ, ಪಂಜಾಬಿ, ರಾಜಸ್ಥಾನಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಖಾದ್ಯಗಳನ್ನು ಕವರ್ ಮಾಡಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ, ಅವರು ಗೊಡ್ಡು ಸಾರು, ನಂತರ ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ತಿಂಡಿಯಾದ ಮದ್ದೂರು ವಡೆ ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಪಫ್ಡ್ ರೈಸ್ ಬಳಸಿ ಮಾಡಿದ ತಿಂಡಿ ಗಿರ್ಮಿಟ್ ಸಿದ್ಧಪಡಿಸಿದ್ದಾರೆ.

ಲಂಡನ್ ಮೂಲದ ಬಾಣಸಿಗ ಜೇಕ್ ಡ್ರೈಯಾನ್ ಅವರು ಗಿರ್ಮಿಟ್ ತಯಾರಿಸಿ ಅದನ್ನು ಸವಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಂತರ 4ನೇ ದಿನ ಚಿತ್ರಾನ್ನ – ಲೆಮನ್ ರೈಸ್ – ಮತ್ತು ಮೈಸೂರು ಬೋಂಡ ತಯಾರಿಸಿ ಮರುದಿನ ಬಿಸಿಬೇಳೆ ಬಾತ್ ಮಾಡಿದ್ದಾರೆ.

ಗೋಡಂಬಿಗಳಿಂದ ಅದನ್ನು ಅಲಂಕಾರ ಮಾಡಿದ್ದು, ನಿಜಕ್ಕೂ ಸವಿಯಬೇಕು ಎನ್ನುವ ಹಂಬಲ ತರುವಂತಿತ್ತು. ಇವೆಲ್ಲವನ್ನೂ ಹುಬ್ಬಳ್ಳಿ ಧಾರವಾಡ ಎನ್ನುವ ಇನ್ಸ್ಟಾ ಪೇಜ್​ ಒಂದು ಶೇರ್ ಮಾಡಿದೆ. ಡ್ರ್ಯಾನ್​ಗೆ ಸುಮಾರು 486,000 ಫಾಲೋವರ್ಸ್​ ಇದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Mon, 5 December 22

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ