AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಮೂತ್ರದಿಂದ ತಲೆ, ಮುಖವನ್ನು ತೊಳೆಯುವ ವಿಶಿಷ್ಟ ಬುಡಕಟ್ಟು ಜನಾಂಗವಿದು

ಇಂದಿನ ಈ ಆಧುನಿಕ ಜಗತ್ತಿನಲ್ಲಿ ತಲೆ ಸ್ನಾನ ಮಾಡಲು, ಮುಖ ತೊಳೆಯಲು ಬಗೆ ಬಗೆಯ ಸೋಪ್‌, ಶ್ಯಾಂಪೂ, ಫೇಸ್‌ವಾಶ್‌ಗಳನ್ನು ಬಳಸಿದರೆ ಇಲ್ಲೊಂದು ಬುಡಕಟ್ಟು ಜನಾಂಗದವರು ಇಂದಿಗೂ ಮುಖ, ತಲೆ ತೊಳೆಯಲು ಗೋಮೂತ್ರವನ್ನು ಬಳಸುತ್ತಾರಂತೆ. ಗೋಮೂತ್ರದಲ್ಲಿ ತಲೆಸ್ನಾನ ಮಾಡುವ ಇವರ ಸಂಪ್ರದಾಯದ ಹಿಂದಿನ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

ಗೋಮೂತ್ರದಿಂದ ತಲೆ, ಮುಖವನ್ನು ತೊಳೆಯುವ ವಿಶಿಷ್ಟ ಬುಡಕಟ್ಟು ಜನಾಂಗವಿದು
ಮುಂಡಾರಿ ಬುಡಕಟ್ಟುImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 11, 2026 | 6:30 PM

Share

ಮುಖ್ಯಾಂಶಗಳು

  • ಗೋಮೂತ್ರದಲ್ಲಿ ತಲೆ ಸ್ನಾನ ಮಾಡುವುದು ಮುಂಡಾರಿ ಬುಡಕಟ್ಟು ಜನಾಂಗದ ಸಂಪ್ರದಾಯವಾಗಿದೆ
  • ಚರ್ಮದ ಸೋಂಕು, ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯಲು ಗೋಮೂತ್ರದಲ್ಲಿ ಸ್ನಾನ ಮಾಡುತ್ತಾರೆ
  • ಮುಂಡಾರಿ ಬುಡಕಟ್ಟು ಜನರು ಸುಟ್ಟ ಸಗಣಿ ಬೂದಿಯನ್ನು ಸನ್‌ಸ್ಕ್ರೀನ್‌ನಂತೆ ಮೈತುಂಬಾ ಹಚ್ಚಿಕೊಳ್ಳುತ್ತಾರೆ

ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವನ್ನು ನೀಡಿರುವಂತೆ ಗೋಮೂತ್ರವನ್ನು (cow urine) ಸಹ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಅನೇಕ ಪೂಜಾ ಕೈಂಕರ್ಯಗಳಲ್ಲೂ ಬಳಸಲಾಗುತ್ತದೆ. ಅಲ್ಲದೆ ಇದರಲ್ಲಿ ಜೌಷಧೀಯ ಗುಣಗಳಿದ್ದು, ಇದರ ಸೇವನೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ನಮ್ಮ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ ಖಂಡದಲ್ಲಿರುವ ದಕ್ಷಿಣ ಸುಡಾನ್‌ನ ಮುಂಡಾರಿ ಬುಡಕಟ್ಟು ಜನಾಂಗದವರಿಗೂ  ಗೋವುಗಳು ಬರೀ ಪ್ರಾಣಿಯಾಗಿರದೆ ಸಂಪತ್ತು, ಘನತೆ ಮತ್ತು ಜೀವನದ ಮೂಲವಾಗಿದ್ದು, ಅವರು ಸಹ ಗೋವುಗಳಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ಜನ ತಲೆ ಮತ್ತು ಮುಖ ತೊಳೆಯುವುದು ಗೋಮೂತ್ರದಲ್ಲಿಯೇ. ಇವರ ಈ ಸಂಪ್ರದಾಯದ ಹಿಂದೆಯೂ ಕಾರಣಗಳಿಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಮುಂಡಾರಿ ಬುಡಕಟ್ಟು ಜನಾಂಗದವರು ಗೋಮೂತ್ರದಲ್ಲಿ ತಲೆ ತೊಳೆಯುವುದೇಕೆ?

ತಮ್ಮ ವಿಶಿಷ್ಟ ಪದ್ಧತಿಗಳು ಮತ್ತು ಅಭ್ಯಾಸಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಸುಡಾನ್‌ ದೇಶದ ಮುಂಡಾರಿ ಬುಡಕಟ್ಟು ಜನಾಂಗದವರು ಗೋವುಗಳಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ. ಹಸು ಸಾಕಾನೆ ಇವರ ಮೂಲ ಕಸುಬಾಗಿದ್ದು, ಜೀವನೋಪಾಯಕ್ಕೆ ಇವರು ಅಂಕೋಲೆ-ವಾಟುಸಿ ತಳಿಯ ದೊಡ್ಡ ಕೊಂಬುಗಳ ಹಸುಗಳನ್ನೇ ಅವಲಂಬಿಸಿದ್ದಾರೆ. ಈ ಬುಡಕಟ್ಟಿನಲ್ಲಿ, ಗೋವು ಕೇವಲ ಪ್ರಾಣಿಯಲ್ಲ, ಅದು ಗೌರವ, ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿದೆ. ಅಷ್ಟೇ ಅಲ್ಲದೆ ಇವರು ಪ್ರತಿನಿತ್ಯ ಬೆಳಿಗ್ಗೆ ಗೋಮೂತ್ರದಿಂದ ಮುಖ ಮತ್ತು ತಲೆಯನ್ನು ತೊಳೆಯುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಹ Davud Akhundzada ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ಮುಂಡಾರಿ ಜನಾಂಗದವರು ಗೋಮೂತ್ರವನ್ನು ಪ್ರಾಥಮಿಕವಾಗಿ ನಂಜುನಿರೋಧಕವಾಗಿ ಬಳಸುತ್ತಾರೆ. ಹೌದು ಇಲ್ಲಿನ ಜನರು ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಅದರಿಂದ ಸ್ನಾನ ಮಾಡುವುದರಿಂದ ದೇಹ ಶುದ್ಧಗೊಳಿಸುತ್ತದೆ ಎಂದು ನಂಬುತ್ತಾರೆ.  ಹಾಗಾಗಿ ಚರ್ಮದ ಸೋಂಕುಗಳು ಮತ್ತು ಕೀಟದ ಕಡಿತದಿಂದ ರಕ್ಷಣೆ ಪಡೆಯಲು, ಆರೋಗ್ಯವನ್ನು ವೃದ್ಧಿಸಲು ಇವರು ಗೋಮೂತ್ರದಲ್ಲಿ ಮುಖ, ಕೈಕಾಲುಗಳನ್ನು ತೊಳೆಯುತ್ತಾರೆ. ಜೊತೆಗೆ  ಇವರು ವಾಸಿಸುವ ಪ್ರದೇಶದಲ್ಲಿ ತೀವ್ರವಾದ ಶಾಖ ಇರುವುದರಿಂದ ಮತ್ತು ಇತರ ಅಂಶಗಳಿಂದಾಗಿ ಇವರು ಬೇಗನೆ ಚರ್ಮದ ಸೋಂಕುಗಳಿಗೆ ಗುರಿಯಾಗುತ್ತಾರೆ. ಈ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಹಸುಗಳ ಮೂತ್ರದಲ್ಲಿ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೆ ಗೋಮೂತ್ರದಲ್ಲಿ ಅಮೋನಿಯಾ ಇದ್ದು, ಇದು ಬ್ಲೀಚಿಂಗ್‌ ಏಜೆಂಟ್‌ ಅಗಿ ಕಾರ್ಯ ನಿರ್ವಹಿಸುತ್ತದೆ, ಹಾಗಾಗಿ ಕಿತ್ತಳೆ ಬಣ್ಣದ ತಲೆಗೂದಲನ್ನು ಪಡೆಯಲು ಇವರು ಗೋಮೂತ್ರದಲ್ಲಿ ತಲೆಸ್ನಾನ ಮಾಡುತ್ತಾರೆ. ಕಿತ್ತಳೆ ಬಣ್ಣ ಇವರ ಸಂಸ್ಕೃತಿಯಲ್ಲಿ ಶುದ್ಧತೆಯನ್ನು ಪ್ರತಿನಿಧಿಸುವ ಬಣ್ಣವಾಗಿದೆ.

ಇದನ್ನೂ ಓದಿ: ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ?

ಇದಲ್ಲದೆ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ವಾಸಿಸುವ ಕೆಲವೊಂದಿಷ್ಟು ಈ ಬುಡಕಟ್ಟು ಜನ ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಲು ಗೋಮೂತ್ರದಿಂದ ತಲೆ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂಡಾರಿ ಜನರು ಗೋವಿನ ಸಗಣಿಯನ್ನು ಸುಟ್ಟು ಅದರ ಬೂದಿಯನ್ನು ತಮ್ಮ ದೇಹದ ಮೇಲೆ ಉಜ್ಜಿಕೊಳ್ಳುತ್ತಾರೆ. ಈ ಬೂದಿ ಸನ್‌ಸ್ಕ್ರೀನ್‌ ಮತ್ತು ಸೊಳ್ಳೆ ನಿವಾರಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ನಂಬುತ್ತಾರೆ. ಮುಂಡಾರಿ ಜನಾಂಗದವರ ಈ ವಿಶಿಷ್ಟ ಸಂಪ್ರದಾಯದ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಹರಿದಾಡುತ್ತಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ