AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್

ಕೆಎಸ್‌ಟಿಡಿಸಿ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ₹830ಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ದೇವನಹಳ್ಳಿ ಕೋಟೆ, ಘಾಟಿ ಸುಬ್ರಹ್ಮಣ್ಯ, ಶಿವಗಂಗೆ, ಚಿಕ್ಕ ಮಧುರೈ ಸೇರಿದಂತೆ ಹಲವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ, ಆಧ್ಯಾತ್ಮ ಹಾಗೂ ಇತಿಹಾಸ ಅನುಭವಿಸಲು ಇದು ಉತ್ತಮ ಅವಕಾಶ. ಕಡಿಮೆ ವೆಚ್ಚದಲ್ಲಿ ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲು ಬಯಸುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.

ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 23, 2026 | 5:09 PM

Share

ನಾಳೆಯಿಂದ ಸಾಲು ಸಾಲು ರಜೆಗಳು ಇದೆ. ಈ ರಜೆಯಲ್ಲಿ ಎಲ್ಲಿಗೆ ಹೋಗುವುದು ಎಂಬ ಯೋಚನೆ ಇರಬಹುದು. ಇನ್ನು ಕೆಲವರಿಗೆ ತಿಂಗಳ ಕೊನೆ, ಈ ಕೈಯಲ್ಲಿ ಕಾಸು ಇರಲ್ಲ, ಅದರೂ ಚಿಕ್ಕದಾಗಿ ಟೂರ್​​​ ಪ್ಯಾನ್​​ ಮಾಡಬೇಕೆಂದು ಅದುಕೊಂಡಿದ್ದಾರೆ. ನಿಮಗೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಈ ಪ್ಯಾಕೇಜ್​​ ಉತ್ತಮ. ಒಂದೇ ದಿನದಲ್ಲಿ ಇಷ್ಟು ಸ್ಥಳಗಳನ್ನು ನೋಡಬಹುದು. ಈ ಒಂದು ದಿನ ಪ್ಲಾನ್​​ ಮಾಡಿಕೊಂಡಿದ್ದರೆ,ಗಣರಾಜ್ಯೋತ್ಸವದ ದಿನ ಉತ್ತಮ. ಕಡಿಮೆ ದರದಲ್ಲಿ ಈ ಟೂರ್​​ಗೆ ಹೋಗಿ ಬರುಬಹುದು. ಬೆಳಿಗ್ಗೆ 7 ಗಂಟೆಗೆ ಹೊರಟ್ರೆ, 6 ಗಂಟೆ ಮತ್ತೆ ಮನೆಗೆ ಬರಬಹುದು. ಇದೊಂದು ವಿಶೇಷ ಪ್ಯಾಕೇಜ್​​​ನ್ನು kstdc ಘೋಷಣೆ ಮಾಡಿದೆ. ಒಂದು ದಿನದಲ್ಲಿ ಎಲ್ಲ ಕಡೆ ಸುತ್ತಿ ಬರಬಹುದು. ಜತೆಗೆ ಎಲ್ಲ ವ್ಯವಸ್ಥೆಗಳನ್ನು ಕೂಡ ಈ ಪ್ಯಾಕೇಜ್​​ನನಲ್ಲಿದೆ.

ದೇವನಹಳ್ಳಿ ಕೋಟೆ, ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ, ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳನ್ನು ಒಳಗೊಂಡ ಬೆಂಗಳೂರಿನಲ್ಲಿ ಒಂದು ದಿನದ ಗ್ರಾಮೀಣ ಪ್ರವಾಸವನ್ನು ಮಾಡಬಹುದು. ಈ ಮೂಲಕ ನಗರದ ಗದ್ದಲದಿಂದ ದೂರವಾಗಿ, ಪ್ರಕೃತಿ ಮತ್ತು ಆಧ್ಯಾತ್ಮದ ಅನುಭವ ಪಡೆಯಲು ಬಯಸುವವರಿಗೆ ಬೆಂಗಳೂರಿನ ಸುತ್ತಮುತ್ತ ಒಂದು ದಿನದ ಗ್ರಾಮೀಣ ಪ್ರವಾಸ ಅತ್ಯುತ್ತಮ ಆಯ್ಕೆ. ದೇವನಹಳ್ಳಿ ಕೋಟೆಯಿಂದ ಆರಂಭಿಸಿ ಶಿವಗಂಗೆ ಬೆಟ್ಟದವರೆಗೆ ಸಾಗುವ ಈ ಪ್ರವಾಸದಲ್ಲಿ ಇತಿಹಾಸ, ಧಾರ್ಮಿಕ ಮಹತ್ವ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಅನುಭವಿಸಬಹುದು.

ಪ್ರವಾಸ ಹೋಗುವ ಸ್ಥಳ ಹಾಗೂ ಸಮಯ:

ಬೆಳಿಗ್ಗೆ 7.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ

ಬೆಳಿಗ್ಗೆ 8.30 – 9.15 ದೇವನಹಳ್ಳಿ ಕೋಟೆಗೆ ಭೇಟಿ ನೀಡಿ

ಬೆಳಿಗ್ಗೆ 10.00 – ಬೆಳಿಗ್ಗೆ 11.00 ಘಾಟಿ ಸುಬ್ರಮಣ್ಯ ದೇವಸ್ಥಾನ

ಬೆಳಿಗ್ಗೆ 11.45 – ಮಧ್ಯಾಹ್ನ 1.00 ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ

ಮಧ್ಯಾಹ್ನ 1.30 – 2.00 ಮಧ್ಯಾಹ್ನದ ಊಟ

ಮಧ್ಯಾಹ್ನ 2.30 – ಸಂಜೆ 4.30 ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನ

ಸಂಜೆ 6.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ಹಿಂತಿರುಗಿ

ಪ್ರವಾಸದ ಪ್ಯಾಕೇಜ್​​ : 830

ಇದನ್ನೂ ಓದಿ: ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

ದೇವನಹಳ್ಳಿ ಕೋಟೆ: ಬೆಂಗಳೂರು ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಕೋಟೆ, ಟಿಪ್ಪು ಸುಲ್ತಾನ್ ಅವರ ಜನ್ಮಸ್ಥಳವಾಗಿ ಪ್ರಸಿದ್ಧ. ಪ್ರಾಚೀನ ವಾಸ್ತುಶಿಲ್ಪ ಮತ್ತು ಇತಿಹಾಸ ಪ್ರೇಮಿಗಳಿಗೆ ಇದು ಆಕರ್ಷಕ ತಾಣ.

ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ: ದೇವನಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಕಾರ್ತಿಕೇಯ ಮತ್ತು ನರಸಿಂಹ ಸ್ವಾಮಿಯ ಅಪರೂಪದ ಮೂರ್ತಿ ಇಲ್ಲಿದೆ. ಹಾವು ದೋಷ ನಿವಾರಣೆ ಇದು ಪ್ರಸಿದ್ಧ.

ಚಿಕ್ಕ ಮಧುರೈ (ಚಿಕ್ಕಮಧುರೇಶ್ವರ ದೇವಸ್ಥಾನ): ಭಕ್ತರಿಗೆ ಅತ್ಯಂತ ಪವಿತ್ರವೆನಿಸಿರುವ ಚಿಕ್ಕ ಮಧುರೈ, ಮಧುರೈ ಮೀನಾಕ್ಷಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿತ ದೇವಾಲಯ.

ಶನಿಮಹಾತ್ಮ ಸ್ವಾಮಿ ದೇವಸ್ಥಾನ: ಶನಿ ದೋಷ ನಿವಾರಣೆಗೆ ಪ್ರಸಿದ್ಧವಾದ ಈ ದೇವಸ್ಥಾನ ಗ್ರಾಮೀಣ ಭಕ್ತರಲ್ಲಿ ವಿಶೇಷ ನಂಬಿಕೆ ಹೊಂದಿದೆ.

ಶಿವಗಂಗೆ ಬೆಟ್ಟ: ಶಿವಗಂಗೆ, ಧಾರ್ಮಿಕ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಜನಪ್ರಿಯ ತಾಣ. ಬೆಟ್ಟದ ಮೇಲಿನಿಂದ ಕಾಣುವ ನೈಸರ್ಗಿಕ ದೃಶ್ಯ ಮನಸ್ಸಿಗೆ ಶಾಂತಿ ನೀಡುತ್ತದೆ.

ಹೊನ್ನಾದೇವಿ ದೇವಸ್ಥಾನ: ಗ್ರಾಮೀಣ ನಂಬಿಕೆ ಮತ್ತು ಶಕ್ತಿದೇವತೆ ಆರಾಧನೆಗೆ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನ, ಪ್ರವಾಸಕ್ಕೆ ಶಾಂತ ಅಂತ್ಯ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ